ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ನವೆಂಬರ್ 2021 > ಚಿರಂತನ ತಥ್ಯ

ಚಿರಂತನ ತಥ್ಯ

* ಗುರುದೇವ ರಾ. ದ. ರಾನಡೆ

ಪ್ರತ್ಯೇಕ ಸಂಗತಿಗಳಲ್ಲಿ ಸಾರ್ವಕಾಲಿಕ-ಸಾರ್ವತ್ರಿಕ ತಿರುಳನ್ನು ಗ್ರಹಿಸಬೇಕೆಂಬ ತತ್ತ್ವವನ್ನು ಅನಾದಿಕಾಲದಿಂದ ತಾತ್ತ್ವಿಕರೂ ಅಧಿಪತಿಗಳೂ ಮನಗಂಡಿದ್ದಾರೆ. ದೈನಂದಿನ ವ್ಯವಹಾರಗಳಲ್ಲಿಯೂ ಸಾರ್ವತ್ರಿಕ ಅಂಶಗಳನ್ನು ಕಾಣುವ ದೃಷ್ಟಿವೈಶಾಲ್ಯದಿಂದಾಗಿಯೆ ಪ್ಲೇಟೋ ಮಹಾಶಯನ ಹೆಸರು ಸ್ಥಾಯಿಯಾಗಿ ಉಳಿದಿರುವುದು. ಯಾವುದನ್ನು ಅರಿತುಕೊಂಡಲ್ಲಿ ಉಳಿದೆಲ್ಲದರ ಪರಿಜ್ಞಾನ ಉಂಟಾಗುತ್ತದೋ ಅದರ ಅನ್ವೇಷಣೆಯಲ್ಲಿಯೆ ಶಂಕರಾಚಾರ್ಯರ ಜೀವನವಷ್ಟೂ ಸಾಗಿದುದು. ಆ ನೆಲೆಯಿಂದ ಮನುಷ್ಯನ ಬಾಳು ಈಗ ಬಹಳ ದೂರ ಕ್ರಮಿಸಿದೆ. ಜ್ಞಾನದ ಪರಿಧಿ ವಿಸ್ತರಿಸಿದೆ; ವಿಜ್ಞಾನಪ್ರಗತಿ ಜೀವನವನ್ನು ಸಮೃದ್ಧಗೊಳಿಸಿದೆ, ಜಗತ್‌ಸ್ಥಿತಿ ಬದಲಾಗಿದೆ. ಆದರೂ ಮಾನವಜೀವನದ ಲಕ್ಷ್ಯವಾಗಲಿ ಅದನ್ನು ಸಾಧಿಸಲು ಇರುವ ಮಾರ್ಗವಾಗಲಿ ತುಂಬಾ ಬದಲಾಗಿದೆಯೆನಿಸುವುದಿಲ್ಲ. ಈಗಲೂ ಭಗವಂತನ ಸಾಕ್ಷಾತ್ಕಾರ ಹೇಗೆ ಆದೀತೆಂಬ ಮನುಷ್ಯನ ಹುಡುಕಾಟ ನಡೆದೇ ಇದೆ. ದೈವ ಸಾಕ್ಷಾತ್ಕಾರವೇ ಪರಮಗಮ್ಯವೆಂಬುದಾಗಲಿ ನಮ್ಮ ಆಧ್ಯಾತ್ಮಿಕ ಜೀವನಕ್ಕೆ ತಾತ್ತ್ವಿಕ ಅಧಿಷ್ಠಾನವೂ ಸಮರ್ಥನೆ-ಪೋಷಣೆಯೂ ಬೇಕೆಂಬುದಾಗಲಿ ಪ್ರಾಚೀನ ಕಾಲದಲ್ಲಿದ್ದಂತೆ ಈಗಲೂ ಸಂಗತವೇ ಆಗಿದೆ.

– (‘A Constructive Survey of Upanishadic Philosophy’ ಗ್ರಂಥದ ಮುನ್ನುಡಿಯಿಂದ.)

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ