ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಜನವರಿ 2022 > ದೇಸೀ ದೃಷ್ಟಿಯ ಅಭ್ಯುದಯ ಚಿಂತನೆ

ದೇಸೀ ದೃಷ್ಟಿಯ ಅಭ್ಯುದಯ ಚಿಂತನೆ

ಭಾರತೀಯ ಇತಿಹಾಸವನ್ನೂ ಸಮಾಜವನ್ನೂ ನೈಜ ಭಾರತೀಯತೆಯ ದೃಷ್ಟಿಯಿಂದ ವಿಶ್ಲೇಷಿಸಿ ಅವನ್ನು ಅದೇ ರೀತಿಯಲ್ಲಿ ಭಾರತೀಯರಿಗೆ ಕಾಣಿಸಿದ ಸಂಶೋಧಕರಲ್ಲಿ ಅಗ್ರಗಣ್ಯರಾದ ಒಬ್ಬರು ಧರ್ಮಪಾಲ್ (೧೯.೨.೧೯೨೨-೨೪.೧೦.೨೦೦೬). ಭಾರತದಲ್ಲಿನ ಹಾಗೂ ಲಂಡನ್ನಿನ ಲೇಖ್ಯಾಗಾರಗಳಲ್ಲಿ ಅಸೀಮ ಶೋಧನೆ ನಡೆಸಿದ ಧರ್ಮಪಾಲ್ ಪ್ರಚಲಿತ ಕಥನಗಳಿಂದ ಪೂರ್ಣ ಭಿನ್ನವಾದ ಬ್ರಿಟಿಷ್‌ಪೂರ್ವ ಭಾರತದ ಚಿತ್ರಣವನ್ನೂ ಶಿಕ್ಷಣ, ಕೃಷಿ, ವಿಜ್ಞಾನ-ತಂತ್ರಜ್ಞಾನ ಮೊದಲಾದ ಕ್ಷೇತ್ರಗಳಲ್ಲಿ ಭಾರತ ಇಂಗ್ಲೆಂಡಿಗಿಂತ ಬಹುಪಾಲು ಉನ್ನತ ಮಟ್ಟದಲ್ಲಿದ್ದುದನ್ನೂ ಬ್ರಿಟಿಷರದೇ ದಾಖಲೆಗಳ ಆಧಾರದ ಮೇಲೆ ದೃಢವಾಗಿ ಸ್ಥಾಪಿಸಿದ ಸಾಧನೆ ದಿಕ್‌ಪ್ರದರ್ಶಕವೂ ರೋಮಾಂಚಕಾರಿಯೂ ಆದದ್ದು. ಈ ಸತ್ಯದರ್ಶನದ ಬೆಳಕಿನಲ್ಲಿ ಧರ್ಮಪಾಲ್ ಭಾರತದ ಅಭ್ಯುದಯವು ಭಾರತದ ಪರಂಪರೆಯ ಆಧಾರದ ಮೇಲೆಯೆ ನಡೆಯಬೇಕೆಂದು ವರ್ಷಗಳುದ್ದಕ್ಕೂ ಸಮರ್ಥವಾಗಿಯೂ ಸತರ್ಕವಾಗಿಯೂ ಪ್ರತಿಪಾದಿಸಿದರು. ನಿರ್ಣಾಯಕ ಸ್ಥಾನಗಳಲ್ಲಿರುವವರೂ ಸಮಾಜೋನ್ನತ – ‘ಎಲೀಟ್’ ವರ್ಗಗಳವರೂ ಪಾಶ್ಚಾತ್ಯಾಭಿಮುಖತೆಯ ಮಾನಸಿಕತೆಯನ್ನೂ ಅಂಧಾನುಕರಣವನ್ನೂ ರೂಢಿಸಿಕೊಂಡಿರುವ ಹಿನ್ನೆಲೆಯಲ್ಲಿ ಈ ಜಾಡ್ಯಕ್ಕೆ ಚಿಕಿತ್ಸಕರೂಪವಾದ್ದು ಧೀಮಂತ ಧರ್ಮಪಾಲ್‌ರವರ ಚಿಂತನೆ-ವಾಙ್ಮಯಗಳು. ಪರಕೀಯ ದೃಷ್ಟಿ-ಧೋರಣೆಗಳ ಪ್ರಾಚುರ್ಯದಿಂದಾಗಿ ಅಧಿಕಾರಕ್ಕೂ ಸಾಮಾನ್ಯಜನತೆಗೂ ನಡುವೆ ಏರ್ಪಟ್ಟಿರುವ ಬಿರುಕು ಹ್ರಸ್ವಗೊಂಡಲ್ಲಿ ಮಾತ್ರ ದೇಶದ ಅಭ್ಯುದಯ ಸಮ್ಯಗ್ರೀತಿಯಲ್ಲಿ ನಡೆಯುವುದು ಶಕ್ಯವಾದೀತು. ಈ ಕಾರ್ಯಕ್ಕೆ ಬೇಕಾದ ಹೇರಳ ಬೌದ್ಧಿಕ ಸಾಮಗ್ರಿಯನ್ನು ಧರ್ಮಪಾಲ್ ನೀಡಿದ್ದಾರೆ. ಈ ವರ್ಷ ಧರ್ಮಪಾಲ್‌ರವರ ಜನ್ಮಶತಾಬ್ದದ ವರ್ಷವಾಗಿರುವುದರ ಹಿನ್ನೆಲೆಯಲ್ಲಿ ಭಾರತದ ಇತಿಹಾಸದ ಋಜುದೃಷ್ಟಿಯ ಗ್ರಹಿಕೆಗೂ ಅಭ್ಯುದಯ ಚಿಂತನೆಗೂ ಪೋಷಕವಾದ ಅವರ ಕೆಲವು ಮೌಲಿಕ ಚಿಂತನೆಗಳನ್ನು ಮೆಲುಕುಹಾಕುವುದು ಈ ವಿಶೇಷಾಂಕದ ಆಶಯವಾಗಿದೆ.

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ