–೧- ಸಾಮ್ರಾಜ್ಯಾಧಿಕಾರಕ್ಕೆ ಪ್ರತಿರೋಧ ಇಪ್ಪತ್ತನೇ ಶತಮಾನದ ಮೊದಲೆರಡು ದಶಕಗಳ ರಾಜಕೀಯ ನೆಲೆಯ ಸ್ವದೇಶೀ ಅಭಿಯಾನವು ಭಾರತದ ಈಚಿನ ಇತಿಹಾಸಕ್ಕೆ ನಿರ್ಣಾಯಕ ತಿರುವನ್ನು ಕೊಟ್ಟಿತೆಂಬುದು ನಿರ್ವಿವಾದ. ಆದರೆ ಅದೇ ಸಮಯದಲ್ಲಿ ಶುದ್ಧವಿಜ್ಞಾನ, ವಿವಿಧ ಕಲೆಗಳು ಮೊದಲಾದ ಕ್ಷೇತ್ರಗಳಲ್ಲಿಯೂ ಭಾರತ ದಾಪುಗಾಲಿಡಲು ಸ್ವದೇಶೀ ಅಭಿಯಾನವು ಪ್ರೇರಕವಾಯಿತೆಂಬುದನ್ನೂ ಗ್ರಹಿಸಬೇಕಾದುದರ ಆವಶ್ಯಕತೆ ಇದೆ. ಇದನ್ನು ಸ್ವದೇಶೀ ಆಂದೋಲನದ ವೈಚಾರಿಕ ಮುಖವೆಂದೇ ಪರಿಗಣಿಸಬಹುದು. ಬ್ರಿಟಿಷ್ ಜನಾಂಗದ ಸ್ವಯಮಾರೋಪಿತ ಬೌದ್ಧಿಕ ಮೇಲ್ಮೆಗೆ ಪ್ರಬಲವಾದ ಪ್ರಹಾರ ನೀಡಿದವು ಶುದ್ಧವಿಜ್ಞಾನಾದಿ ಕ್ಷೇತ್ರಗಳಲ್ಲಿನ ಭಾರತೀಯ ಸಾಧನೆಗಳು. ಹತ್ತೊಂಬತ್ತನೇ ಶತಮಾನದಲ್ಲಿ ಅತ್ಯಧಿಕ […]
ಸ್ವದೇಶೀ ಆಂದೋಲನ: ಸ್ವಾತಂತ್ರ್ಯಾಭಿಮುಖ ವೈಚಾರಿಕ ಪ್ರಯಾಸ
Month : August-2016 Episode : Author : ಎಸ್.ಆರ್. ರಾಮಸ್ವಾಮಿ