ಭಾರತದ ನಾಗರಿಕತೆ, ಇತಿಹಾಸ, ಅದರಲ್ಲೂ ಮುಖ್ಯವಾಗಿ ಋಗ್ವೇದದಂತಹ ಲಭ್ಯ ಪ್ರಾಚೀನ ಸಾಹಿತ್ಯದ ಕಾಲವು ಯೇಸುಕ್ರಿಸ್ತನ ಜನನಕಾಲದ ಸ್ವಲ್ಪ ಆಚೀಚೆ ಇರಬಹುದೇ ಹೊರತು, ಬಹಳಷ್ಟು ಹಿಂದೆ ಹೋಗುವಂತಿಲ್ಲ ಎಂಬ ಹಟಕ್ಕೆ ಬಿದ್ದ ಪಾಶ್ಚಾತ್ಯ, ವಿಶೇಷವಾಗಿ ಇಂಗ್ಲೆಂಡ್ಮೂಲದ ಇತಿಹಾಸಕಾರರು ಎಂತಹ ಆಭಾಸವನ್ನು ಸೃಷ್ಟಿಸಿದ್ದಾರೆಂದರೆ ಕ್ರಿಸ್ತಪೂರ್ವದ ಮೌರ್ಯಸಾಮ್ರಾಜ್ಯ, ಹಾಗೆಯೆ ಅದರ ಜೊತೆಗಿದ್ದ ಚಾಣಕ್ಯನ ಕಾಲ ಮತ್ತು ಋಗ್ವೇದದ ಕಾಲ ಎಡಬಲದಲ್ಲಿ ಇರುವಂತಾಗಿದೆ. ಚಾಣಕ್ಯನ ಅರ್ಥಶಾಸ್ತ್ರದಲ್ಲಿ ಕಾಣುವ ಸಂಸ್ಕೃತಿ-ನಾಗರಿಕತೆಗಳು ಎಷ್ಟು ಮುಂದುವರಿದಂಥವು ಮತ್ತು ಋಗ್ವೇದದಲ್ಲಿ ಕಾಣುವ ಜನಜೀವನ, ಅವರ ನಂಬಿಕೆಗಳು, ಆರಾಧನಾಕ್ರಮ ಮುಂತಾದವು ಎಷ್ಟೊಂದು ಪ್ರಾಚೀನ ಇರಬಹುದೆಂಬ ಕಲ್ಪನೆ ಆ ಸ್ವಯಂಮಾನ್ಯ ಇತಿಹಾಸಕಾರರಿಗೆ ಬರುವುದೇ […]











