ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಮಾರ್ಚ್ 2022 > ಹಿನ್ನೆಲೆ ಗಾಯನದ   ಸಮ್ರಾಜ್ಞಿ ಇನ್ನಿಲ್ಲ

ಹಿನ್ನೆಲೆ ಗಾಯನದ   ಸಮ್ರಾಜ್ಞಿ ಇನ್ನಿಲ್ಲ

ನಮ್ಮ ದೇಶದ ಮೂರು ಪೀಳಿಗೆಗಳ ಕೋಟ್ಯಂತರ ಜನರಿಗೆ ಅತ್ಯಂತ ಆನಂದವನ್ನು ಅತ್ಯಂತ ಹೆಚ್ಚು ಕಾಲ ನೀಡಿರುವವರು ಯಾರು? – ಎಂಬ ಪ್ರಶ್ನೆಗೆ ಹೊರಡುವ ಒಕ್ಕೊರಲಿನ ಉತ್ತರ ಭಾರತರತ್ನ ಲತಾ ಮಂಗೇಶ್ಕರ್ (೧೯೨೯-೨೦೨೨) ಎಂಬುದು. ಚಲನಚಿತ್ರಗಳಲ್ಲಿನ ಹಿನ್ನೆಲೆ ಗಾಯನಕ್ಕೆ ಅಭೂತಪೂರ್ವ ಪ್ರತಿಷ್ಠೆಯನ್ನು ತಂದುಕೊಟ್ಟವರಲ್ಲಿ ಅವರು ಅಗ್ರಶ್ರೇಣಿಯವರು. ಭಾರತದ ಎಲ್ಲ ಭಾಷೆಗಳಲ್ಲಿ ಅವರ ಸಂಗೀತಸುಧೆ ಹರಿಯಿತು. ಸುಮಾರು ಮೂವತ್ತು ಸಾವಿರದಷ್ಟು ಗೀತಗಳಿಗೆ ಅವರು ಜೀವ ತುಂಬಿದುದು ಜಾಗತಿಕ ದಾಖಲೆಯೂ ಆಯಿತು. ಆರು ದಶಕಗಳಷ್ಟು ದೀರ್ಘಕಾಲ ನಡೆದ ಅವರ ನಿರಂತರ ನಾದಸೇವೆ ಸಾಟಿಯಿಲ್ಲದ್ದು. ಚಿತ್ರಗೀತೆಗಳು ಮಾತ್ರವಲ್ಲದೆ ಭಕ್ತಿಗೀತೆಗಳು, ದೇಶಪ್ರೇಮ ಗೀತೆಗಳು ಮೊದಲಾದ ಕ್ಷೇತ್ರಗಳನ್ನೂ ಅವರು ಶ್ರೀಮಂತಗೊಳಿಸಿದರು. ಭಾರತೀಯ ಜನಮಾನಸವನ್ನು ಗಾಯನಕಲೆಯ ಮೂಲಕ ಹೇಗೆ ತಲಪಬಹುದೆಂಬುದನ್ನು ಉಜ್ಜ್ವಲವಾಗಿ ಪ್ರಕಟೀಕರಿಸಿದವರು ಲತಾ ಮಂಗೇಶ್ಕರ್. ಅವರ ಶಾರೀರದ ವ್ಯಾಪ್ತಿಯನ್ನೂ ನಾದಮಾಧುರ್ಯವನ್ನೂ ದೈವದತ್ತವೆಂದೇ ಭಾವಿಸಬೇಕಾದೀತೇನೊ. ಅವರ ಸಾಧನೆಗೆ ಪ್ರಾಂತ-ಭಾಷೆಗಳ ಗಡಿಗಳು ಇರಲಿಲ್ಲ. ಚಲನಚಿತ್ರ ಕ್ಷೇತ್ರವೇ ಅವರ ಹಾಡಿಕೆಯಿಂದ ದೋಹದ ಪಡೆಯಿತು. ಹಿನ್ನೆಲೆಗಾಯನಕ್ಕೆ ಮಾನದಂಡವನ್ನು ನಿರ್ಮಿಸಿದರು ಅವರು. ಅಭಿಜ್ಞತೆಯಿಲ್ಲದ ಕೋಟ್ಯಂತರ ಜನರಿಗೆ ಸಂಗೀತವನ್ನು ಆಪ್ತವಾಗಿಸಿದುದು ಲತಾದೀದಿಯ ಅನುಪಮ ಸಾಂಸ್ಕೃತಿಕ ಕೊಡುಗೆ. ಹೀಗೆ ದೇಶದ ಇಡೀ ಜನತೆಯ ಅಂತರಂಗದ ಭಾಗವೇ ಆಗಿಬಿಟ್ಟಿದ್ದ ಅವರು ಉಳಿಸಿ ಹೋದದ್ದು ಎಂದಿಗೂ ಮಾಸದ ನೆನಪು.

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ