ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಮಾರ್ಚ್ 2023 > ನಿವಾರಣೀಯ ದುರಂತಗಳು

ನಿವಾರಣೀಯ ದುರಂತಗಳು

ನಂಬಿ ಕೆಟ್ಟವರಿಲ್ಲವೋ ಎಂಬಂತೆ ಪ್ರಕೃತಿಯನ್ನು ಕೆಣಕಿ ಬದುಕಿದವರಿಲ್ಲವೋ ಎಂದೂ ಹೇಳಬಹುದೇನೊ. ಹಿಮಾಲಯದಲ್ಲಿ ಈಚಿನ ವರ್ಷಗಳಲ್ಲಿಯೂ ಘಟಿಸಿರುವ ದುರಂತಗಳ ಹಿಂದುಗೂಡಿ ಇದೇ ವರ್ಷದ ಆರಂಭದಲ್ಲಿ ಜೋಶಿಮಠ ಭಾಗದಲ್ಲಿ ನೆಲ ಬಿರುಕುಬಿಟ್ಟು ಅನೇಕ ಕಡೆ ನೆಲ ಕುಸಿದು ಜನಜೀವನವನ್ನು ಉಧ್ವಸ್ತಗೊಳಿಸಿದೆ. ೭೦೦ಕ್ಕೂ ಹೆಚ್ಚು ಮನೆಗಳ ಗೋಡೆಗಳು ಸೀಳಿಹೋಗಿವೆ. ಅಲ್ಲಿಯ ನಿವಾಸಿಗಳು ಸ್ಥಾನಾಂತರಗೊಳ್ಳಬೇಕಾಗಿಬAದಿದೆ. ನೂರಾರು ಕುಟುಂಬಗಳು ಸುರಕ್ಷಿತತೆಯನ್ನರಸಿ ಬೇರೆಡೆಗಳಿಗೆ ವಲಸೆ ಹೋಗುವುದು ಉತ್ತರಾಖಂಡ ಪ್ರಾಂತದಲ್ಲಿ ಮಾಮೂಲೆನಿಸಿಬಿಟ್ಟಿದೆ. ಹೀಗೆ ಲೆಕ್ಕವಿಲ್ಲದಷ್ಟು ಜನರ ಬದುಕನ್ನು ಬಲಿಗೊಟ್ಟಾದರೂ ಊರ್ಜೋತ್ಪಾದನಾದಿ ಯೋಜನೆಗಳಿಗೆ ಆದ್ಯತೆ ನೀಡಬೇಕೆ? ಅಭಿವೃದ್ಧಿಯೋಜನೆಗಳು ಬೇಡವೆಂದು ಯಾರೂ ಹೇಳರು. ಆದರೆ ಯೋಜನೆಗಳು ಯಾರಿಗಾಗಿ? ತಿಳಿದೂ ತಿಳಿದೂ ಅವಘಡಗಳನ್ನು ಆಹ್ವಾನಿಸಬೇಕೆ? ಭೂಗರ್ಭರಚನೆಯ ದೃಷ್ಟಿಯಿಂದ ಹಿಮಾಲಯ ಪ್ರಾಂತದ ನೆಲದಡಿಯ ತಳಭಾಗಗಳು ತುಂಬಾ ಸೂಕ್ಷö್ಮವೂ ನಾಜೂಕಿನದೂ ಆದವೆಂಬುದು ಹಿಂದಿನಿಂದ ತಿಳಿದಿರುವುದೇ ಆಗಿದೆ. ಆದರೂ ಅವುಗಳ ಮೇಲೆ ಪ್ರಕೃತಿಸ್ವಾಸ್ಥ್ಯಕ್ಕೆ ಪ್ರತಿಕೂಲವಾದ ಭಾರದ ಯೋಜನೆಗಳನ್ನು ಹೇರಲಾಗುತ್ತಿದೆ. ದೈತ್ಯಪ್ರಮಾಣದ ವಿದ್ಯುದುತ್ಪಾದನ ಯೋಜನೆಗಾಗಿ ನ್ಯಾಶನಲ್ ಥರ್ಮಲ್ ಪವರ್ ಕಾರ್ಪೊರೇಶನ್ ಸುರಂಗ(ಟನಲ್)ಗಳ ನಿರ್ಮಾಣಕ್ಕಾಗಿ ಸ್ಫೋಟಕ(ಡೈನಮೈಟ್)ಗಳನ್ನು ಬಳಸಿದುದರ ಪರಿಣಾಮವಾಗಿಯೆ ಜೋಶಿಮಠ ಮೊದಲಾದೆಡೆ ಭೂಕುಸಿತಗಳಾಗುತ್ತಿರುವುದು ಎಂದು ತಜ್ಞರ ಅಭಿಮತವಿದೆ. ಪ್ರಕೃತಿಯ ಮೇಲೆ ಇಂತಹ ಪ್ರಹಾರ ತಗ್ಗದಿದ್ದಲ್ಲಿ ಆ ಭಾಗದ ಜನರಿಗೆ ನೆಮ್ಮದಿಯ ಜೀವನ ಕನಸಿನ ಮಾತು.

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ