ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಪ್ರಚಲಿತ

ಪ್ರಚಲಿತ

ಪಕ್ಷಾಂತರ, ಗತ್ಯಂತರ

ಕರ್ನಾಟಕದಲ್ಲಿ ಹದಿನಾಲ್ಕು ತಿಂಗಳ ಕಾಂಗ್ರೆಸ್-ಜೆ.ಡಿ.ಎಸ್. ಮೈತ್ರಿ ಸರ್ಕಾರ ಹದಿನೆಂಟು ದಿನಗಳ ತೀಕ್ಷ್ಣ ಸಮರದ ತರುವಾಯ ದಿನಾಂಕ ಜುಲೈ 23ರ ಸಂಜೆ ಧರಾಶಾಯಿಯಾಗಿದೆ (ಮೈತ್ರಿಕೂಟದ ಪರ ಮತಗಳು 99, ಭಾಜಪಾ ಪರ 105 ಮತಗಳು). ನಿರೀಕ್ಷಿತವೇ ಆಗಿದ್ದ ಈ ಫಲಿತದ ಸಂಪಾದನೆಗೆ ಇಷ್ಟು ಭಂಡತನದ ಜುಗುಪ್ಸಾಕರ ಜಗ್ಗಾಟದ ಆವಶ್ಯಕತೆ ಇತ್ತೆ? – ಎಂದು ಖೇದವಾಗುತ್ತದೆ. ಕರ್ನಾಟಕದ ಮರ್ಯಾದೆ ಹರಾಜಾಗುತ್ತಿದೆಯೆಂಬ ಪರಿವೆಯೂ ಇಲ್ಲದೆ ಮೈತ್ರಿಕೂಟದ ಬಣದವರು ಸಭಾಕಲಾಪಕ್ಕೆ ತಡೆಯೊಡ್ಡುತ್ತ ಸಭೆಯ ಸಮಯವನ್ನು ವ್ಯರ್ಥ ಮಾಡಿದರು. ನಿಜಕ್ಕೂ ಮಹತ್ತ್ವದ್ದಾಗಿದ್ದ ಚಂದ್ರಯಾನದ ಯಶಸ್ಸನ್ನು […]

ಬಾಣಲೆಯಿಂದ ಬೆಂಕಿಗೆ

ಬಾಣಲೆಯಿಂದ ಬೆಂಕಿಗೆ

ಈಗ್ಗೆ ನಾಲ್ಕು ದಶಕಗಳ ಹಿಂದೆ ದೇಶದ ರಾಜಕೀಯ ಪರಿಸರವನ್ನು ಪರಾಮರ್ಶಿಸಿದ ವಿಶ್ಲೇಷಕರನೇಕರು ದೇಶದಲ್ಲಿ ಏಕಪಕ್ಷಸರ್ಕಾರಗಳ ಕಾಲ ಮುಗಿದಿದೆಯೆಂದೂ ಇನ್ನು ಮುಂದೆ ಸಮ್ಮಿಶ್ರಸರ್ಕಾರಗಳಿಗಷ್ಟೆ ಅವಕಾಶ ಇರುತ್ತದೆಂದೂ ಅಭಿಪ್ರಾಯಪಟ್ಟಿದ್ದರು. ಅಲ್ಲಿಂದೀಚೆಗೆ ಬಗೆಬಗೆಯ ಪಕ್ಷಮಿಶ್ರಣಪ್ರಯೋಗಗಳು ನಡೆದಿರುವುದನ್ನು ಜನ ನೋಡಿದ್ದಾರೆ. ಮಿಶ್ರಸರ್ಕಾರಗಳ ಸಾಧಕಬಾಧಕಗಳ ಹಲವಾರು ರೀತಿಯ ಅನುಭವಗಳು ಆಗಿವೆ. ಕರ್ನಾಟಕದಲ್ಲಿಯೇ ಈ ಹಿಂದೆ ಮೈತ್ರಿಸರ್ಕಾರ ಪ್ರಯೋಗ ಹೇಗೆ ಸಾಗಿತ್ತೆಂಬುದನ್ನು ಜನ ಮರೆತಿರಲಾರರು. 1999ರಲ್ಲಿ ಪ್ರಧಾನಿಯಾದ ವಾಜಪೇಯಿಯವರು ನಾಲ್ಕಾರು ಪಕ್ಷಗಳನ್ನು ಸೇರಿಸಿಕೊಂಡು ಪೂರ್ಣಾವಧಿ ಸರ್ಕಾರವನ್ನು ಯಶಸ್ವಿಯಾಗಿ ನಡೆಸಿದುದು ಮೈತ್ರಿಸರ್ಕಾರಗಳ ಇತಿಹಾಸದ ಸುವರ್ಣಾಧ್ಯಾಯವೆಂದು ಅಂಕಿತಗೊಂಡಿತ್ತು. ಅದಕ್ಕೆ […]

`ಪದ್ಮಾವತ್’ ಭಾನಗಡಿ

`ಪದ್ಮಾವತ್’ ಭಾನಗಡಿ

  ಕಡೆಗೂ ಸಂಜಯ ಲೀಲಾ ಬನ್ಸಾಲಿ ನಿರ್ಮಿತ ’ಪದ್ಮಾವತ್’ ಚಲನಚಿತ್ರ ಕಳೆದ ಜನವರಿ ೨೫ಕ್ಕೆ ಬಿಡುಗಡೆಯಾಗಿದೆ. ಅದರೊಡಗೂಡಿದ ಪ್ರತಿಭಟನೆಗಳೂ ಹಿಂಸಾಚಾರಗಳೂ ಸಭ್ಯಸಮಾಜಕ್ಕೆ ಕಲಂಕ ತರುವಂತಿವೆ. ಯಾವುದೇ ವಿಷಯವನ್ನೂ ವಿವಾದಗ್ರಸ್ತಗೊಳಿಸಬಹುದಾದ ಪರಿಸರ ಹರಡಿರುವುದಕ್ಕೆ ಈ ಪ್ರಸಂಗಕ್ಕಿಂತ ಅನ್ಯ ನಿದರ್ಶನ ಬೇಕಿಲ್ಲ. ಸಂಸ್ಕೃತಿಸಂರಕ್ಷಣೆಯ ಹೆಸರಿನಲ್ಲಿ ’ಕರ್ನೀಸೇನಾ’ದಿಂದ ಸಂಸ್ಕೃತಿವಿಧ್ವಂಸ ನಡೆದಿರುವುದು ದೊಡ್ಡ ವಿಪರ್ಯಾಸ. ಹರ್ಯಾಣಾದ ಗುರುಗ್ರಾಮದಲ್ಲಿ ಮಕ್ಕಳನ್ನು ಶಾಲೆಗೆ ಒಯ್ಯುತ್ತಿದ್ದ ಬಸ್ಸಿನ ಮೇಲೆ ’ಸಂಸ್ಕೃತಿಸಂರಕ್ಷಕರು’ ಕಲ್ಲುಗಳ ಮಳೆಗರೆದರು. ಚಲನಚಿತ್ರದ ಕಥಾವಿನ್ಯಾಸದಲ್ಲಿ ಇತಿಹಾಸವಿಕೃತಿ ಇದೆಯೆಂದು ಆರಂಭಗೊಂಡ ಪ್ರತಿರೋಧವು ಇಡೀ ಪಶ್ಚಿಮಭಾರತದಲ್ಲೂ ಉತ್ತರಭಾರತದಲ್ಲೂ ಕಾನೂನುವ್ಯವಸ್ಥೆ […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ