ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ದೀಪ್ತಿ

ದೀಪ್ತಿ

ದೀಪ್ತಿ

ದೀಪ್ತಿ

ಕ್ಷಮಯಾ ರೋಚತೇ ಲಕ್ಷ್ಮೀರ್ಬ್ರಾಹ್ಮೀ ಸೌರೀ ಯಥಾ ಪ್ರಭಾ | ಕ್ಷಮಿಣಾಮಾಶು ಭಗವಾಂಸ್ತುಷ್ಯತೇ ಹರಿರೀಶ್ವರಃ |||      – ಭಾಗವತ “ಕ್ಷಮೆಯಿಂದ ಮನುಷ್ಯನ ಬ್ರಹ್ಮತೇಜಸ್ಸು ಸೂರ್ಯನ ಅತಿಶಯ ಪ್ರಕಾಶದಂತೆ ಬೆಳಗುತ್ತದೆ. ಎಲ್ಲ ಲೋಕಗಳ ಒಡೆಯನಾದ ಪರಮಾತ್ಮನು ಕ್ಷಮಾಗುಣವುಳ್ಳವರಲ್ಲಿ ಬಹಳ ಬೇಗ ಸಂತೋಷ ಪಡುತ್ತಾನೆ.” ಮುಯ್ಯಿಗೆ ಮುಯ್ಯಿ, ಅಕಾರ್ಯಕ್ಕೆ ದಂಡನೆ ಆಗಲೇಬೇಕು – ಎಂಬ ಧೋರಣೆ ಲೌಕಿಕ-ವ್ಯಾವಹಾರಿಕ ಕಕ್ಷೆಗೆ ಸ್ವಲ್ಪಮಟ್ಟಿಗೆ ಸರಿಹೋಗಬಹುದು. ಆದರೆ ವಿಶಾಲ ಮನಸ್ಸಿನಿಂದಲೂ ಕಾರುಣ್ಯಪ್ರವೃತ್ತಿಯಿಂದಲೂ ಜನಿಸಿದ ಕ್ಷಮಾಗುಣವು ಸರ್ವರಿಗೂ ಹಿತಕರವೂ ಸಂಸ್ಕಾರಕಾರಿಯೂ ಸಂಸ್ಥಿತಿಪೋಷಕವೂ ಆಗುತ್ತದೆಂಬ ಇನ್ನೊಂದು ಪಕ್ಷವೂ […]

ದೀಪ್ತಿ

ದೀಪ್ತಿ

ಸಜ್ಜನಸ್ಯ ಹೃದಯಂ ನವನೀತಂ ಯದ್ವದಂತಿ ಕವಯಸ್ತದಲೀಕಂ | ಅನ್ಯದೇಹವಿಲಸತ್ಪರಿತಾಪಾತ್ ಸಜ್ಜನೋ ದ್ರವತಿ ನೋ ನವನೀತಮ್||      – ಸುಭಾಷಿತರತ್ನ-ಭಂಡಾಗಾರ “ಕವಿಗಳು ಸಜ್ಜನರ ಹೃದಯವನ್ನು ಮೃದುವಾದ ಬೆಣ್ಣೆಗೆ ಹೋಲಿಸುತ್ತಾರೆ. ಇದು ಅಷ್ಟು ಸರಿಯೆನಿಸುವುದಿಲ್ಲ. ಬೇರೆಯವರು ಕಷ್ಟದಲ್ಲಿದ್ದಾರೆಂದು ತಿಳಿದೊಡನೆ ಸಜ್ಜನರು ಕರಗಿಹೋಗುತ್ತಾರೆ. ಬೆಣ್ಣೆ ಹಾಗೆ ತಾನಾಗಿ ಕರಗುವುದಿಲ್ಲ.” ಉದಾತ್ತ ಮಾನಸಿಕತೆಯನ್ನು ಬೆಳೆಸಿಕೊಂಡವರಲ್ಲಿ ಅನ್ಯರ ಬಗೆಗೆ ಅನುಕಂಪ, ಕಾರುಣ್ಯ ಮೊದಲಾದ ಸ್ಪಂದನವು ಸ್ವಭಾವಸಹಜವಾಗಿರುತ್ತದೆ. ಸಾಮಾನ್ಯ ಜನರಲ್ಲಿಯೂ ಇಂತಹ ಆಂತರಗಿಕ ಭಾವನೆಗಳಿದ್ದರೂ ಹೆಚ್ಚಿನವರು ಅವನ್ನು ಒಳಗೇ ಅಣಗಿಸಿಕೊಂಡು ನಿಷ್ಕ್ರಿಯರಾಗಿರುತ್ತಾರೆ. ಆದರೆ ಒಮ್ಮೆ ಎಲ್ಲಿಯಾದರೂ […]

ದೀಪ್ತಿ

ದೀಪ್ತಿ

ನಮಂತಿ ಫಲಿತಾ ವೃಕ್ಷಾ ನಮಂತಿ ಚ ಬುಧಾ ಜನಾಃ| ಶುಷ್ಕಕಾಷ್ಠಾನಿ ಮೂರ್ಖಾಶ್ಚ ಭಿದ್ಯಂತೇ ನ ನಮಂತಿ ಚ|| – ಸುಭಾಷಿತಸುಧಾನಿಧಿ “ಕೊಂಬೆಗಳ ತುಂಬಾ ಹಣ್ಣು ಬಿಟ್ಟ ಮರಗಳು ಬಾಗುತ್ತವೆ. ಜ್ಞಾನಿಗಳಾದ ಜನರು ವಿನಯದಿಂದ ಬಾಗಿ ನಡೆಯುತ್ತಾರೆ. ಆದರೆ ಒಣಗಿದ ಮರಗಳೂ ಮೂರ್ಖರೂ ಸೆಟೆದುಕೊಂಡಿರುವ ಕಾರಣ ಬಾಗುವುದಿಲ್ಲ; ಅಂತಹವರ ಮೊಂಡುತನ ಖಂಡನೆಗೊಳಗಾಗುತ್ತದೆ.” ನಮ್ರತೆಯಿಂದ ಬಾಗಿ ನಡೆಯುವವರು ಎಲ್ಲರ ಆದರಣೆಗೆ ಪಾತ್ರರಾಗುತ್ತಾರೆ. ದುರಹಂಕಾರದಿಂದ ಮೆರೆಯುವ ಅಭ್ಯಾಸ ಮಾಡಿಕೊಂಡವರು ಉಳಿದವರ ತಾತ್ಸಾರಕ್ಕೆ ಗುರಿಯಾಗುತ್ತಾರೆ. ವಿನಯಪೂರ್ವಕ ವರ್ತನೆಯನ್ನೂ ಮೆದುಮಾತನ್ನೂ ಇತರರು ದೌರ್ಬಲ್ಯವೆಂದುಕೊಂಡಾರು – […]

ದೀಪ್ತಿ

ಅರ್ಕೇ ಚೇನ್ಮಧು ವಿಂದೇತ ಕಿಮರ್ಥಂ ಪರ್ವತಂ ವ್ರಜೇತ್| ಇಷ್ಟಸ್ಯಾರ್ಥಸ್ಯ ಸಂಸಿದ್ಧೌ ಕೋ ವಿದ್ವಾನ್ ಯತ್ನಮಾಚರೇತ್||   – ಶಾಬರಭಾಷ್ಯ “ದಾರಿಯಲ್ಲಿ ನಡೆದು ಹೋಗುವಾಗ ರಸ್ತೆಬದಿಯಲ್ಲಿರುವ ಎಕ್ಕದ ಗಿಡದಲ್ಲಿ ಜೇನು ಇರುವುದು ಕಂಡರೆ ಅದನ್ನು ಸವಿಯುವುದನ್ನು ಬಿಟ್ಟು ಬೇರೆಡೆ ತುಂಬಾ ಜೇನು ಸಿಗುತ್ತದೆಂದು ಯಾರೋ ಹೇಳಿದ್ದುದನ್ನು ನೆನೆದು ಕಡಿದಾದ ಬೆಟ್ಟವನ್ನು ಏಕಾದರೂ ಹತ್ತಬೇಕು? ಇಚ್ಛಿತ ವಸ್ತು ಕಣ್ಣಿಗೆ ಕಾಣುತ್ತಿರುವಾಗ ಅದನ್ನು ಉದಾಸೀನ ಮಾಡಿ ಕಲ್ಪಿತವಾದ್ದಾವುದನ್ನೋ ಅರಸುತ್ತ ಹೋಗುವವನು ವಿವೇಕಿ ಎನಿಸುವುದಿಲ್ಲ.” ಈ ಉಕ್ತಿಯಲ್ಲಿ ಹಲವು ಅರ್ಥಸೂಕ್ಷ್ಮಗಳು ಅಡಗಿವೆ. ಸದಾ […]

ದೀಪ್ತಿ

ಪ್ರಣವೋ ಧನುಃ ಶರೋ ಹ್ಯಾತ್ಮಾ ಬ್ರಹ್ಮ ತಲ್ಲಕ್ಷ್ಯಮುಚ್ಯತೇ | ಅಪ್ರಮತ್ತೇನ ವೇದ್ಧವ್ಯಂ ಶರವತ್ತನ್ಮಯೋ ಭವೇತ್ || – ಮುಂಡಕೋಪನಿಷತ್ “ಓಂಕಾರವೇ ಧನುಸ್ಸು. ಆತ್ಮನೇ ಬಾಣ. ಬ್ರಹ್ಮವೇ ಅದರ ಗುರಿ – ಎಂದು ಹೇಳಲ್ಪಟ್ಪಿದೆ. ಪ್ರಮತ್ತನಾಗದೆ (ಏಕಾಗ್ರತೆಯಿಂದ) ಗುರಿಯೆಡೆಗೆ ಹೊಡೆಯಬೇಕು. ಬಿಲ್ಲುಗಾರನು ಬಾಣದಂತೆ ತನ್ಮಯನಾಗಬೇಕು.” ಇಲ್ಲಿ ಜೀವಾತ್ಮನೇ ಬಾಣ; ದೃಶ್ಯಪ್ರಪಂಚದೊಡನೆ ಮೈಮರೆಯದೆ ಅಂತರ್ಮುಖನಾಗಿ ಲಕ್ಷ್ಯವಾದ ಬ್ರಹ್ಮದ ಕಡೆಗೆ ಗಮನವನ್ನು ಕೇಂದ್ರೀಕರಿಸಬೇಕು – ಎಂಬುದು ಸಂಕ್ಷೇಪದಲ್ಲಿ ಮೇಲಣ ವಾಕ್ಯದ ಸೂಚನೆ. ದುಗ್ರ್ರಾಹ್ಯ ತತ್ತ್ವಗಳನ್ನು ಸುಬೋಧಗೊಳಿಸುವುದಕ್ಕಾಗಿ ಉಪನಿಷತ್ತುಗಳಲ್ಲಿ ಆಖ್ಯಾನಗಳ ಮತ್ತು ಉಪಮೆಗಳ […]

ದೀಪ್ತಿ

ಯದಿ ಸಂತಿ ಗುಣಾಃ ಪುಂಸಾಂ ವಿಕಸಂತ್ಯೇವ ತೇ ಸ್ವಯಂ | ನ ಹಿ ಕಸ್ತೂರಿಕಾಮೋದಃ ಶಪಥೇನ ವಿಭಾವ್ಯತೇ || – ಕುವಲಯಾನಂದ “ಜನರಲ್ಲಿ ಸ್ವಭಾವಗತವಾದ ಔದಾರ್ಯಾದಿ ಒಳ್ಳೆಯ ಗುಣಗಳಿದ್ದರೆ ಅವು ಯಾವ ಅನ್ಯಪ್ರೋತ್ಸಾಹನವೂ ಇಲ್ಲದೆ ತಾವಾಗಿ ಪ್ರಕಾಶಗೊಳ್ಳುತ್ತವೆ. ಕಸ್ತೂರಿಯ ಸುಗಂಧವನ್ನು ಯಾರೂ ಬಲವಂತದಿಂದ ಹೊರಹೊಮ್ಮಿಸಬೇಕಾಗಿಲ್ಲವಷ್ಟೆ?” ಬೇರೆಯವರಿಗೆ ಉಪಕಾರ ಮಾಡುವುದು ಉತ್ತಮ ವರ್ತನೆ. ಸಂದರ್ಭವಶದಿಂದಲೊ ವ್ಯವಸ್ಥಾನುಗುಣವಾಗಿಯೊ ಅನ್ಯಪ್ರೇರಣೆಯಿಂದಲೊ ಯಾರಿಗೋ ಉಪಕಾರ ಮಾಡಿದರೂ ಅದಕ್ಕೆ ಮೆಚ್ಚಿಕೆ ಸಲ್ಲತಕ್ಕದ್ದೇ. ಆದರೆ ಪರೋಪಕಾರದ ಶ್ರೇಷ್ಠ ರೂಪವೆಂದರೆ ಅವಕಾಶ ಗೋಚರಿಸಿದೊಡನೆ ಯಾವುದಕ್ಕೂ ಕಾಯದೆ ನೆರವಿಗೆ […]

ದೀಪ್ತಿ

ನ ಕಿಂಚಿತ್ ಸಾಧವೋ ಧೀರಾ ಭಕ್ತಾ ಹ್ಯೇಕಾಂತಿನೋ ಮಮ | ವಾಂಛಂತ್ಯಪಿ ಮಯಾ ದತ್ತಂ ಕೈವಲ್ಯಮಪುನರ್ಭವಮ್ || – ಭಾಗವತ “ಧೀರರೂ (=ಧೀಮಂತರೂ) ಸಾಧುಗಳೂ ಏಕಾಂತಿಗಳೂ ಆದ ನನ್ನ ಭಕ್ತರು ನನ್ನಿಂದ ಏನನ್ನೂ ಅಪೇಕ್ಷಿಸುವುದಿಲ್ಲ. ಅಷ್ಟೇಕೆ, ನನ್ನಿಂದ ನೀಡಲ್ಪಟ್ಟ ಮುಕ್ತಿಯನ್ನಾಗಲಿ ಪುನರ್ಜನ್ಮರಾಹಿತ್ಯವನ್ನಾಗಲಿ ಕೂಡಾ ಅವರು ಆಶಿಸುವುದಿಲ್ಲ.” ಭಗವತ್ಸಾಕ್ಷಾತ್ಕಾರ, ಶಾಶ್ವತ ಮೋಕ್ಷ ಮೊದಲಾದವನ್ನು ಪರಮಲಕ್ಷ್ಯವಾಗಿರಿಸಿಕೊಂಡು ಅವನ್ನು ಸಾಧಿಸಲು ಶ್ರಮಿಸಬೇಕೆಂಬುದು ಸಾಮಾನ್ಯ ಆದೇಶ. ಅದಕ್ಕೆ ಸಾಧನವೆಂದರೆ ಆತ್ಯಂತಿಕ ಭಕ್ತಿ ಎಂಬುದೂ ವಿದಿತವೇ. ಆದರೆ ಭಕ್ತಿಯ ಪರಾಕಾಷ್ಠಸ್ಥಿತಿಯೆಂದರೆ ಭಗವಂತನಿಂದ ಏನನ್ನಾದರೂ ಬೇಡಬೇಕೆಂಬ […]

ದೀಪ್ತಿ

ಕೃತ್ವಾ ಪಾಪಂ ಹಿ ಸಂತಪ್ಯ ತಸ್ಮಾತ್ಪಾಪಾತ್ ಪ್ರಮುಚ್ಯತೇ | ನೈವಂ ಕುರ್ಯಾಂ ಪುನರಿತಿ ನಿವೃತ್ತ್ಯಾ ಪೂಯತೇ ತು ಸಃ || – ಮನುಸ್ಮೃತಿ “ಯಾವುದೊ ಅಕಾರ್ಯವನ್ನು ಮಾಡಿದವನು ಪಶ್ಚಾತ್ತಾಪಪಟ್ಟು ನಾನು ಹೀಗೆ ಮತ್ತೆ ಎಂದೂ ಮಾಡಬಾರದು ಎಂದು ಮನಸ್ಸು ಮಾಡಿದರೆ ಅವನು ಪಾಪದಿಂದ ಮುಕ್ತನಾಗಿ ಪವಿತ್ರನಾಗುತ್ತಾನೆ.” ಎಷ್ಟೋ ವೇಳೆ ತಮ್ಮಿಂದ ತಪ್ಪು ಘಟಿಸಿದ್ದರೂ ಅದನ್ನು ಮುಚ್ಚಿಹಾಕಲು ಯತ್ನಿಸುವುದುಂಟು. ಇನ್ನು ತಮ್ಮಿಂದ ತಪ್ಪು ನಡೆಯಿತೆಂದು ಹೇಳಿ ಕ್ಷಮೆ ಕೇಳುವುದಂತೂ ಅನಿವಾರ್ಯವಾದಾಗ ಮಾತ್ರವೆನ್ನಬಹುದು. ತಪ್ಪನ್ನು ಬಹಿರಂಗವಾಗಿ ಒಪ್ಪಿಕೊಳ್ಳಲೂ ದಾಢ್ರ್ಯ ಬೇಕಾಗುತ್ತದೆ. […]

ದೀಪ್ತಿ

ಹೃದಯಂ ಸದಯಂ ಯಸ್ಯ ಭಾಷಿತಂ ಸತ್ಯಭೂಷಿತಮ್| ಕಾಯಃ ಪರಹಿತೋಪಾಯಃ ಕಲಿಃ ಕುರ್ವೀತ ತಸ್ಯ ಕಿಮ್|| “ಯಾರ ಹೃದಯದಲ್ಲಿ ದಯೆಯು ತುಂಬಿಕೊಂಡಿದೆಯೋ, ಯಾರ ಮಾತು ಎಂದೂ ಸತ್ಯದಿಂದ ದೂರ ಸರಿಯದೋ, ಯಾರ ಶರೀರವು ಸದಾ ಇತರರ ಹಿತಕ್ಕಾಗಿ ಮೀಸಲಿರುತ್ತದೆಯೋ, ಅಂಥವನನ್ನು ಕಲಿಪುರುಷನು ಹೇಗೆ ತಾನೆ ಬಾಧಿಸಿಯಾನು?” ಯಾರ ಅಂತರಂಗದಲ್ಲಿ ಉದಾರತೆಯೂ ಉದಾತ್ತತೆಯೂ ಪರಹಿತಕಾರಕ ಪ್ರವೃತ್ತಿಯೂ ಸಹಜವಾಗಿ ಮನೆಮಾಡಿಕೊಂಡಿರುತ್ತವೆಯೋ ಅಂಥವನು ಎಂದೂ ಪಾಪವನ್ನೆಸಗಲಾರನಾದುದರಿಂದ ಅವನನ್ನು ಬಾಧಿಸುವ ಅವಕಾಶ ಕಲಿಪುರುಷನಿಗೆ ದೊರೆಯುವುದೇ ಇಲ್ಲ. ಅಂಥವನಿಗೆ ಸದ್ಗತಿ ನಿಶ್ಚಿತ. ಒಂದು ಸತ್ಯಕಥೆ ಇದು. […]

ದೀಪ್ತಿ

ಮಣಿನಾ ವಲಯಂ ವಲಯೇನ ಮಣಿರ್ಮಣಿನಾ ವಲಯೇನ ವಿಭಾತಿ ಕರಃ | ಕವಿನಾ ಚ ವಿಭುರ್ವಿಭುನಾ ಚ ಕವಿಃ ಕವಿನಾ ವಿಭುನಾ ಚ ವಿಭಾತಿ ಸಭಾ | ಶಶಿನಾ ಚ ನಿಶಾ ನಿಶಯಾ ಚ ಶಶೀ ಶಶಿನಾ ನಿಶಯಾ ಚ ವಿಭಾತಿ ನಭಃ | ಪಯಸಾ ಕಮಲಂ ಕಮಲೇನ ಪಯಃ ಪಯಸಾ ಕಮಲೇನ ವಿಭಾತಿ ಸರಃ || – ಸುಭಾಷಿತರತ್ನ-ಭಾಂಡಾಗಾರ “ಥಳಥಳಿಸುವ ಮುತ್ತು-ಹವಳಗಳಿಂದ ಬಳೆಯ ಶೋಭೆ ಹೆಚ್ಚುತ್ತದೆ; ಹಾಗೆಯೇ ಬಳೆಯ ವಿನ್ಯಾಸದಿಂದಾಗಿ ಮುತ್ತು-ಹವಳಗಳಿಗೂ ಹೆಚ್ಚಿನ ಶೋಭೆ ಬರುತ್ತದೆ. ಮುತ್ತು-ಹವಳ, […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ