ಸಾರ್ಧ ಶತಾಬ್ದ ಸ್ಮರಣೆ “ಗೋಖಲೆಯವರ ದೇಶಭಕ್ತಿಯ ಪ್ರಖರತೆಯೇ ಅವರು ಅಗ್ಗದ ಜನಪ್ರಿಯತೆಯನ್ನು ಅರಸುವುದಕ್ಕೆ ಅಡ್ಡಿ ಬಂದಿತ್ತು. ಬಡಾಯಿಮಾತಿನವರನ್ನೂ ಧೈರ್ಯಹೀನರನ್ನೂ ಅವರು ರವೆಯಷ್ಟೂ ಸಹಿಸುತ್ತಿರಲಿಲ್ಲ. ನೈತಿಕವಾಗಿಯೂ ಬೌದ್ಧಿಕವಾಗಿಯೂ ತಾವು ನಿರ್ಣಯಿಸಿಕೊಂಡಿದ್ದ ಸ್ಥಿತಿಯನ್ನು ಅವರು ಎಂದೂ ಸಡಿಲಗೊಳಿಸಲು ಒಪ್ಪುತ್ತಿದ್ದವರಲ್ಲ.” ಕೆಲಕಾಲ ದೇಶದ ಆಗಿನ ಅತ್ಯುನ್ನತ ಶಾಸನಮಂಡಳಿಯಾಗಿದ್ದ ಇಂಪೀರಿಯಲ್ (’ವೈಸರಾಯ್ಸ್) ಲೆಜಿಸ್ಲೆಟಿವ್ ಕೌನ್ಸಿಲಿನ ಸದಸ್ಯರಾಗಿದ್ದವರು, ಒಂದು ಅವಧಿಯಲ್ಲಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿದ್ದವರು, ಪುಣೆಯಲ್ಲಿ ಸರ್ವೆಂಟ್ಸ್ ಆಫ್ ಇಂಡಿಯ ಸೊಸೈಟಿ ಸಂಸ್ಥೆಯನ್ನು ಸ್ಥಾಪಿಸಿದವರು- ಎಂದು ಇತಿಹಾಸಗ್ರಂಥಗಳು ಗೋಪಾಲ ಕೃಷ್ಣ […]
ಅಪ್ರತಿಮ ರಾಷ್ಟ್ರಾರಾಧಕ – ಗೋಪಾಲಕೃಷ್ಣ ಗೋಖಲೆ
Month : May-2016 Episode : Author : ಡಾ|| ಎಸ್.ಆರ್. ರಾಮಸ್ವಾಮಿ