![ಮಾತು ದೊರೆಯಬಹುದೆ ಹೇಳಿ, ಮೌನ ಹರಿಯದೆ?](https://utthana.in/wp-content/uploads/2020/05/Page_00066-150x150.jpg)
ಹಿಂದೂ ಮಹಾಸಾಗರವನ್ನಾದರೂ ದಾಟಬಹುದೇನೋ, ಆದರೆ ಮೌನ-ಮಹಾಸಾಗರವನ್ನು ಈಜಿದವರುಂಟೆ? ಮೌನದ ವಿಧವು ನೂರಿರುವಾಗ ಯಾವ ಮೌನವನ್ನು ಹೇಗೆ ಅರ್ಥೈಸಿಕೊಳ್ಳುವುದೋ ಆ ಮೌನವನ್ನು ಸೃಷ್ಟಿಸಿದ ಭಗವಂತನನ್ನೇ ಕೇಳಬೇಕಷ್ಟೆ. ಹಾಗೆಂದು ಸದಾ ಮೌನವಾಗಿರುವ ಸದಾಶಿವನೇ ಮೌನವನ್ನು ದಾಟಿದನೇ ಎಂದರೆ ಅವನ ಮೌನದಿಂದಲೇ ಗೌರಿ ದಕ್ಷಯಜ್ಞಕ್ಕೆ ಹೋದಳಲ್ಲ! ಮೌನವನ್ನು ಸಮ್ಮತಿ ಎಂಬುದಾಗಿ ಭ್ರಮಿಸಿ ಪರಿಣಾಮವೇನಾಯಿತು? ಗೌರಿ ಯೋಗಾಗ್ನಿಯಲ್ಲಿ ಬೆಂದುಹೋದಳು, ಕ್ರುದ್ಧನಾದ ಮಹಾದೇವ ವೀರಭದ್ರನನ್ನು ಸೃಷ್ಟಿಸುವ ಮೂಲಕ ದಕ್ಷನನ್ನು ಮಡುಹಿದ. ಮತ್ತೆ ಆಡಿನ ಶಿರವನ್ನು ಜೋಡಿಸಿ ಜೀವದಾನ ಮಾಡಿದರೆನ್ನಿ. ಮತ್ತೆಲ್ಲವೂ ಭಗವತ್ಸಂಕಲ್ಪ ಎನ್ನುವುದು ನಮಗೇನೋ […]