ಶಾ ಕಮಿಷನ್ ವರದಿ ಆಧಾರಿತ ವಿಶೇಷ ಲೇಖನ.
ದೇಶದ ಜನತೆಯ ಬಾಯಿ ಮುಚ್ಚಿಸಿದ ಕಾಂಗ್ರೆಸ್ ಸರ್ಕಾರದ ತುರ್ತುಪರಿಸ್ಥಿತಿ”
Month : June-2023 Episode : Author : ಎಚ್ ಮಂಜುನಾಥ ಭಟ್
Month : June-2023 Episode : Author : ಎಚ್ ಮಂಜುನಾಥ ಭಟ್
ಶಾ ಕಮಿಷನ್ ವರದಿ ಆಧಾರಿತ ವಿಶೇಷ ಲೇಖನ.
Month : June-2023 Episode : ಕ್ಷೀರಕ್ರಾಂತಿಯ ಯಶೋಗಾಥೆ Author : ಎಚ್ ಮಂಜುನಾಥ ಭಟ್
ಕೆಲವು ಪ್ರಧಾನಿಗಳಂತೆಯೇ ರಾಜೀವ್ಗಾಂಧಿ ಅವರೊಂದಿಗೆ ಕೂಡ ಡಾ|| ಕುರಿಯನ್ ಅವರಿಗೆ ಆತ್ಮೀಯ ಸಂಬಂಧವಿತ್ತು. “ರಾಜೀವ್ ಒಳ್ಳೆಯ ಮನುಷ್ಯ. ಕಾಂಪ್ಲಿಕೇಶನ್ ಇಲ್ಲದ ವ್ಯಕ್ತಿ. ಆತ ಮಾಡಿದ ಏಕೈಕ ತಪ್ಪೆಂದರೆ ಎಲ್ಲ ಬಗೆಯ ಭ್ರಷ್ಟ ಮಂತ್ರಿಗಳನ್ನು ತನ್ನ ಸುತ್ತ ಇಟ್ಟುಕೊಂಡದ್ದು. ಒಮ್ಮೆ ಏನನ್ನೋ ಉದ್ಘಾಟಿಸಲು ಆನಂದ್ಗೆ ಬಂದಾಗ ಆತ ನನ್ನ ಜೊತೆ ಒಂದು ಸಮಸ್ಯೆಯನ್ನು ಹೇಳಿಕೊಂಡರು” ಎಂದು ಕುರಿಯನ್ ಆ ಬಗ್ಗೆ ವಿವರಿಸಿದ್ದಾರೆ. ‘ಕುರಿಯನ್ಜೀ, ನಾನೊಂದು ದೊಡ್ಡ ತಪ್ಪು ಮಾಡಿದೆ. ನನ್ನ ಕ್ಷೇತ್ರ ರಾಯ್ಬರೇಲಿಯಲ್ಲಿ ೧೦೦ ಕೋಟಿ ರೂ. ಖರ್ಚು […]
Month : June-2023 Episode : ಕಾಂಗ್ರೆಸ್ ನ ಪೂರ್ವಕತೆ -ಭಾಗ 1 Author : ಎಚ್ ಮಂಜುನಾಥ ಭಟ್
ತುರ್ತುಪರಿಸ್ಥಿತಿಯ ವೇಳೆ ದೇಶದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಯಾವೆಲ್ಲ ದೌರ್ಜನ್ಯಗಳು ನಡೆದವು; ಪ್ರಜಾಪ್ರಭುತ್ವ ವ್ಯವಸ್ಥೆಗೆ ಎಂತಹ ಶೋಚನೀಯ ಸ್ಥಿತಿಯನ್ನು ತಂದೊಡ್ಡಲಾಗಿತ್ತು; ಸಂವಿಧಾನಕ್ಕೆ ಎಂತಹ ನಗೆಪಾಟಲು ಪರಿಸ್ಥಿತಿಯನ್ನು ಉಂಟುಮಾಡಲಾಗಿತ್ತು ಎನ್ನುವ ಕುರಿತು ತುರ್ತುಪರಿಸ್ಥಿತಿಯನ್ನು ಹೇರಿ ೪೮ ವರ್ಷಗಳಾಗುತ್ತಿರುವ ಈ ಸಂದರ್ಭದಲ್ಲಿ ಇನ್ನೊಮ್ಮೆ ನೋಡುವುದು ಕಾಲೋಚಿತ ಎನಿಸುತ್ತದೆ. ತುರ್ತುಪರಿಸ್ಥಿತಿಗಿರುವ ಅದ್ಭುತ ದಾಖಲೆಯೇ ಶಾ ಕಮಿಷನ್ ವರದಿ. ಜನಸಂಖ್ಯೆಯಲ್ಲಿ ಇದೀಗ ಚೀನಾವನ್ನು ಹಿಂದೆ ಹಾಕಿ ಒಂದನೇ ಸ್ಥಾನವನ್ನು ಅಲಂಕರಿಸಿರುವ ಭಾರತವು ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ ಎಂದು ನಾವು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. […]
Month : May-2023 Episode : ಕ್ಷೀರಕ್ರಾಂತಿಯ ಯಶೋಗಾಥೆ-3 Author : ಎಚ್ ಮಂಜುನಾಥ ಭಟ್
“ಮ್ಯಾನೇಜರಾಗಿ ಇಲ್ಲಿ ನನ್ನ ಕೆಲಸವೆಂದರೆ ಡೈರಿಗೆ ಹಾಲು ನೀಡುವ ರೈತರಿಗೆ ತೃಪ್ತಿಯಾಗುವಂತೆ ನಡೆದುಕೊಳ್ಳುವುದು. ಉತ್ಪಾದನೆ ಹೆಚ್ಚಿಸುವುದಕ್ಕಾಗಿ ನಾನು ರೈತರಿಗೆ ಮೂಲಸವಲತ್ತು ಒದಗಿಸಬೇಕಿತ್ತು. ಅವರಿಗೆ ಲಾಭವಾಗುವಂತೆ ಉತ್ಪಾದನೆಯನ್ನು ಹೆಚ್ಚಿಸಬೇಕಿತ್ತು. ಅವರು ಒದಗಿಸಿದ ಹಾಲನ್ನು ನಾನು ಖರೀದಿಸಲೇಬೇಕಿತ್ತು. ಇದು ರೈತರ ಬೇಡಿಕೆಗಳಿಗೆ ಸದಾ ಸ್ಪಂದಿಸುವ ಡೈರಿಯಾಗಿದೆ. ಆನಂದ್ನಂತೆಯೇ ಹೈನುಗಾರಿಕೆಯಲ್ಲಿ ಮುಂದುವರಿದ ಎಲ್ಲ ದೇಶಗಳಲ್ಲಿ ರೈತರೇ ಡೈರಿಗಳ ಮಾಲೀಕರು. ನ್ಯೂಜಿಲೆಂಡ್, ಹಾಲೆಂಡ್, ಡೆನ್ಮಾರ್ಕ್, ಅಮೆರಿಕಗಳಲ್ಲಿ ನಿಜವಾದದ್ದು ಭಾರತಕ್ಕೂ ಅನ್ವಯ ಆಗುತ್ತದೆ ಎಂಬುದನ್ನು ನಾವು ಆನಂದ್ನಲ್ಲಿ ಸಾಬೀತುಪಡಿಸಿದ್ದೇವೆ” ಎಂದು ಕುರಿಯನ್ ಪ್ರಧಾನಿ ಶಾಸ್ತ್ರಿಯವರಿಗೆ […]
Month : April-2023 Episode : ಕ್ಷೀರಕ್ರಾಂತಿಯ ಯಶೋಗಾಥೆ-2 Author : ಎಚ್ ಮಂಜುನಾಥ ಭಟ್
ಅಮುಲ್ ಸಂಸ್ಥೆಯ ಸರ್ವತೋಮುಖ ಯಶಸ್ಸು ದೇಶಾದ್ಯಂತ ಅಲೆಗಳನ್ನು ಎಬ್ಬಿಸಿತು. ಗುಜರಾತ್ನ ಹಳ್ಳಿ ಮೂಲೆಯಿಂದ ಹಬ್ಬಿದ ಅಲೆ ಎಲ್ಲೆಡೆ ಪಸರಿಸಿತು. ‘ಆನಂದ್ ಪ್ಯಾಟರ್ನ್’ (ಮಾದರಿ) ನೋಡಲು ಜನ ಬಂದರು. ರೈತರಿಗೆ ಸಲ್ಲಬೇಕಾದ್ದನ್ನು ದಿಟ್ಟತನದಿಂದ ಪಡೆದವರೆಂದು ಕುರಿಯನ್ರನ್ನು ಗುರುತಿಸಿದರು. ಹಾಗೆ ಗುರುತಿಸಿದವರಲ್ಲಿ ಒಬ್ಬರು ೧೯೬೪ರ ಹೊತ್ತಿಗೆ ಕೇಂದ್ರದ ಜನಪ್ರಿಯ ಕೃಷಿ ಸಚಿವರಾಗಿದ್ದ ಸಿ. ಸುಬ್ರಹ್ಮಣ್ಯಮ್ ಅವರು. ದೆಹಲಿಯ ತಮ್ಮ ಕಚೇರಿಗೆ ಕರೆದ ಅವರು ಇದ್ದಕ್ಕಿದ್ದಂತೆ “ದೆಹಲಿಯ ಮಿಲ್ಕ್ ಸ್ಕೀಂನ (ಡಿಎಂಎಸ್) ಹೊಣೆಯನ್ನು ವಹಿಸಿಕೊಳ್ಳಬೇಕು” ಎಂದರು. ಕುರಿಯನ್ರಿಗೆ ಆಶ್ಚರ್ಯ. ೧೯೫೩ರ ಏಪ್ರಿಲ್ನಲ್ಲಿ […]
Month : March-2023 Episode : ಕ್ಷೀರಕ್ರಾಂತಿಯ ಯಶೋಗಾಥೆ Author : ಎಚ್ ಮಂಜುನಾಥ ಭಟ್
ಒಂದೊಮ್ಮೆ ಭಾರತದ ಹೆಚ್ಚಿನೆಡೆಗಳಲ್ಲಿ ಹಾಲಿನ ಕೊರತೆಯಿತ್ತು. ಆ ಸ್ಥಿತಿಯಿಂದ ಹೊರಬಂದು ಭಾರತ ಈಗ ವಿಶ್ವದಲ್ಲೇ ಅತಿ ಹೆಚ್ಚು ಹಾಲನ್ನು ಉತ್ಪಾದಿಸುವ ದೇಶವಾಗಿದೆ. ನಾಡಿನ ಮೂಲೆಮೂಲೆಗಳಿಗೂ ಈಗ ಹಾಲು ಸರಬರಾಜಿನ ಜಾಲ ತಲಪಿರುವುದಲ್ಲದೆ, ಲಕ್ಷಾಂತರ ರೈತರಿಗೆ ‘ಕ್ಷೀರಕ್ರಾಂತಿ’ ಸ್ವಾವಲಂಬಿ ಸಮೃದ್ಧ ಬದುಕನ್ನು ಕಲ್ಪಿಸಿದೆ. ಇಡೀ ಜಗತ್ತಿನಲ್ಲಿ ಮಾರಾಟವಾಗುತ್ತಿರುವ ಹಾಲಿನ ಶೇ. ೨೨ರಷ್ಟನ್ನು ಭಾರತವೇ ಉತ್ಪಾದಿಸುತ್ತಿದೆ. ಇದೀಗ ಪ್ರತಿವರ್ಷ ೨೨ ಕೋಟಿ ಟನ್ನಿನಷ್ಟು ಹಾಲು ಭಾರತದಲ್ಲಿ ಉತ್ಪಾದಿತವಾಗುತ್ತಿದೆ. ಈ ಪವಾಡವನ್ನು ಆಗುಮಾಡಿಸಿದ ರೂವಾರಿ ಡಾ|| ವರ್ಗೀಸ್ ಕುರಿಯನ್. ‘ಶ್ವೇತಕ್ರಾಂತಿಯ ಪಿತಾಮಹ’ […]
Month : February-2023 Episode : Author : ಎಚ್ ಮಂಜುನಾಥ ಭಟ್
ಹಗಲಿಗಿಂತ ಮುಖ್ಯವಾಗಿ ನಿಶ್ಶಬ್ದ ರಾತ್ರಿಯಲ್ಲಿ ಜನಸಮುದಾಯದ ಪ್ರಜ್ಞೆಯನ್ನು ಆಳುವ ಯಕ್ಷಗಾನದ (ಕನ್ನಡದ) ನೆಲವೇ ಆಗಿದ್ದ ಕುಂಬಳೆ–ಕಾಸರಗೋಡು ಪರಿಸರದಿಂದ ಬಂದವರು ಸುಂದರರಾವ್. ತೆಂಕುತಿಟ್ಟು ಯಕ್ಷಗಾನಕ್ಕೆ ಈಗಲೂ ಆ ಭಾಗ ದೊಡ್ಡ ಸಂಖ್ಯೆಯಲ್ಲಿ ಕಲಾವಿದರನ್ನು ಒದಗಿಸುತ್ತಿದೆ. ಆದರೆ ಈಗ ಅಲ್ಲಿ ಭಾಷೆಯೊಂದಿಗೆ ಧರ್ಮೀಯ (ಮತೀಯ) ಆಕ್ರಮಣ ಕೂಡ ನಡೆಯುತ್ತಿದ್ದು, ಯಕ್ಷಗಾನದ ಪ್ರದರ್ಶನಗಳು ನಡೆಯುವುದು, ಆ ಮೂಲಕ ಪ್ರೇಕ್ಷಕ ವರ್ಗದ ಬೆಳವಣಿಗೆಗೆ ದೊಡ್ಡ ಪೆಟ್ಟು ಬೀಳುತ್ತಿದೆ ಎಂದು ಬಲ್ಲ ಸ್ನೇಹಿತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ತಮ್ಮ ಎಣೆಯಿಲ್ಲದ ಮಾತುಗಾರಿಕೆಯ ಮೂಲಕ ಯಕ್ಷಗಾನ, ತಾಳಮದ್ದಳೆಗಳ […]
Month : December-2022 Episode : Author : ಎಚ್ ಮಂಜುನಾಥ ಭಟ್
ಪ್ರತಿಭಾವಂತ ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರು ಒಮ್ಮೆ ತಾನು ತುಂಬ ಗೌರವದಿಂದ ಕಾಣುವ ಇಬ್ಬರು ಕನ್ನಡ ಸಾಹಿತಿಗಳನ್ನು ಹೆಸರಿಸಿ ಅದಕ್ಕೆ ಕಾರಣ ನೀಡಿದ್ದರು. ಶಿವರಾಮ ಕಾರಂತರ ಪ್ರಯೋಗಶೀಲತೆ ಮತ್ತು ಕುವೆಂಪು ಅವರ ಕಲಾತ್ಮಕತೆ ತಮಗಿಷ್ಟ ಎಂದು ಅವರು ಹೇಳಿದ್ದರು. ಕಾರಂತರು ಸಾಹಿತ್ಯದಲ್ಲಿ ಮಾತ್ರವಲ್ಲ; ತಮ್ಮ ಜೀವನದಲ್ಲೇ ಪ್ರಯೋಗಶೀಲತೆಯನ್ನು ಮೆರೆದವರು. ಅವರು ಕಾಲೇಜು ಮೆಟ್ಟಿಲನ್ನು ತುಳಿಯಲಿಲ್ಲ. ದೇಶ ಸುತ್ತಿದರು; ಕೋಶ ಓದಿದರು. ಯಾವುದೇ ಉದ್ಯೋಗ, ಸಂಪಾದನೆಯ ಮೂಲಕ್ಕೆ ಅಂಟಿಕೊಳ್ಳದೆ ಸ್ವಾತಂತ್ರ್ಯ ಹೋರಾಟ, ಖಾದಿಪ್ರಚಾರ, ರಂಗಭೂಮಿ, ನಾಟಕ ರಚನೆ-ನಿರ್ದೇಶನ, […]
Month : November-2022 Episode : Author : ಎಚ್ ಮಂಜುನಾಥ ಭಟ್
Month : November-2022 Episode : Author : ಎಚ್ ಮಂಜುನಾಥ ಭಟ್
ಪಶ್ಚಿಮಘಟ್ಟದ ಸಂರಕ್ಷಣೆಯ ಅಗತ್ಯವನ್ನು ಮನಗಂಡ ಸುಪ್ರೀಂಕೋರ್ಟಿನ ಹಸಿರುಪೀಠ ಮತ್ತು ಕೇಂದ್ರಸರ್ಕಾರಗಳು ಈ ಸಂಬಂಧವಾಗಿ ಚಾಲನೆಗೊಂಡ ಉಪಕ್ರಮಗಳನ್ನು ಗುರಿಮುಟ್ಟಿಸಬೇಕೆಂದು ನಿರಂತರವಾಗಿ ಶ್ರಮಿಸುತ್ತಿವೆ. ಆದರೆ ಸಂಬಂಧಪಟ್ಟ ರಾಜ್ಯಗಳಲ್ಲಿ ಅಂತಹ ಉತ್ಸಾಹ ಕಾಣಿಸುತ್ತಿಲ್ಲ. ಕಸ್ತೂರಿರಂಗನ್ ಸಮಿತಿಯು ಮಾಡಿದ ಶಿಫಾರಸುಗಳನ್ನು ಅನುಷ್ಠಾನಗೊಳಿಸುವುದು ಸದ್ಯದ ಅಗತ್ಯವಾಗಿದೆ. ಕೇರಳದಂತಹ ಕೆಲವು ರಾಜ್ಯಗಳು ಈ ನಿಟ್ಟಿನಲ್ಲಿ ಸ್ವಲ್ಪವಾದರೂ ಕಾರ್ಯಪ್ರವೃತ್ತವಾಗಿ ತಮ್ಮಿಂದ ಎಷ್ಟು ಸಾಧ್ಯ ಎಂಬುದನ್ನಾದರೂ ಹೇಳಿವೆ. ಕರ್ನಾಟಕ ರಾಜ್ಯದ ವಿವಿಧ ಸರ್ಕಾರಗಳು ಪಕ್ಷಭೇದವಿಲ್ಲದೆ “ನೀವು ಏನು ಬೇಕಾದರೂ ಮಾಡಿಕೊಳ್ಳಿ. ನಮ್ಮಲ್ಲಿ ಜಾರಿ ಅಸಾಧ್ಯ” ಎಂದೇ ಹೇಳುತ್ತ ಬಂದಿವೆ; […]