ಇದ್ದಕ್ಕಿದ್ದಂತೆ ಅಪ್ಪಳಿಸಿದ ಬಾಣ ಚಂಪೆಯ ಸ್ವಪ್ನ ಸಾಮ್ರಾಜ್ಯವನ್ನು ಪುಡಿಗುಟ್ಟಿತು. ಅವಳು ದಿಗ್ಭ್ರಾಂತಳಂತೆ ಸುತ್ತ ನೋಡಿದಳು. ಈಗ ಶಂಖನೂ ಜಾಗೃತನಾಗಿದ್ದ. “ಓ… ಇಲ್ಲಿಗೂ ಬಂದುಬಿಟ್ಟರು!’’ ಎಂದು ಉದ್ಗರಿಸಿದ. ಅವನ ಕೈಗಳು ಚುರುಕಾದವು. ಅವನ ಕಣ್ಣುಗಳು ಬಲ ದಂಡೆಯ ಮೇಲೆ ಚಲಿಸುತ್ತಿರುವ ಆಕೃತಿಗಳನ್ನು ನೋಡುತ್ತಿದ್ದವು. “ಚಂಪಾ, ದೋಣಿಗಾರನನ್ನು ಎಬ್ಬಿಸು. ಬೇಗ ಬೇಗ…’’ ಎಂದು ಅವಸರಿಸಿದ. ಅವನ ಧ್ವನಿಯನ್ನು ಕೇಳಿಯೇ ಜಯ ಎಚ್ಚರಗೊಂಡ. ತಡಮಾಡದೆ ಹುಟ್ಟನ್ನು ಕೈಗೆತ್ತಿಕೊಂಡ. “ಅಯ್ಯ, ನಾವು ತಪ್ಪು ಮಾಡಿದೆವು ನದಿಯ ಮಧ್ಯಕ್ಕೆ ದೋಣಿಯನ್ನು ತರಬಾರದಿತ್ತು. ಈಗ ಅವರ […]










