ಅರ್ಜುನ, ಕಣ್ಣುಗಳಿಂದ ನೋಡುವಲ್ಲಿ, ಕಿವಿಯಿಂದ ಕೇಳುವಲ್ಲಿ, ಮನಸ್ಸಿನಿಂದ ಚಿಂತಿಸುವಲ್ಲಿ ಹಾಗೂ ಬಾಯಿಯಿಂದ ನುಡಿಯುವಲ್ಲಿ ಹೀಗೆ ನಡೆಯುವ ಎಲ್ಲ ವ್ಯವಹಾರಗಳಲ್ಲಿ, ಒಳಹೊರಗೆ ನನ್ನನ್ನೇ ಅನುಸರಿಸು. ಅಂದರೆ ಅವೆಲ್ಲವೂ ನನ್ನ ವಿಷಯವಾಗಿಯೇ ಇರಲಿ. ಹೀಗೆ ಮಾಡಲು, ಎಲ್ಲ ಕಾಲಗಳಲ್ಲಿ ಯಾವಾಗಲೂ ನಾನೇ ಇರುವೆನು. ಈ ಅಭ್ಯಾಸವನ್ನು ಒಳ್ಳೆಯ ರೀತಿಯಿಂದ ಚಿತ್ತಕ್ಕೆ ಅಂಟಿಸು. ಎಲೊ! ಪ್ರಯತ್ನದ ಬಲದಿಂದ ಹೆಳವನಾದರೂ ಗುಡ್ಡವನ್ನೇರಬಲ್ಲನು. ಅದರಂತೆ ಸತತವಾದ ಅಭ್ಯಾಸದಿಂದ ನಿನ್ನ ಚಿತ್ತಕ್ಕೆ ಪರಮಾತ್ಮನ ವಿಷಯವನ್ನು ಆಗ್ರಹದ್ದನ್ನಾಗಿ ಮಾಡಿಕೊ. ಅಷ್ಟಾದ ಬಳಿಕ ಶರೀರವು ಉಳಿಯಲಿ, ಇಲ್ಲವೆ ಹೋಗಲಿ. […]
ಇಂದ್ರಿಯನಿಗ್ರಹದಿಂದ ಅಕ್ಷರಸ್ಥಿತಿ ಪ್ರಾಪ್ತಿ
Month : July-2023 Episode : Author : ಸಂತ ಜ್ಞಾನೇಶ್ವರ ಮಹಾರಾಜರು