ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

  • ಜುಲೈ 2024ರ ಸಂಚಿಕೆಯಲ್ಲಿ: ಪತ್ತೇದಾರಿ ವೈಜ್ಞಾನಿಕ ಕಥೆಗಳು

  • ಉತ್ಥಾನ ವಿಶೇಷಾಂಕಗಳು

  • ತೆಂಕಣ ಗಾಳಿ ಸೋಂಕಿದೊಡಂ?!

  • ಉತ್ಥಾನ ವಿಷಯ-ವ್ಯಾಪ್ತಿ

  • ಅಂಬೇಡ್ಕರ್ ಕುರಿತ ವಿಶೇಷ ಸಂಚಿಕೆ

  • ಉತ್ಥಾನದ ಚಂದಾದಾರಾಗಿ..

  • ಉತ್ಥಾನ ಮೇ 2024ರ ಸಂಚಿಕೆ

ಬೆಂಗಳೂರು ನಗರದ ಪ್ರಪ್ರಥಮ ಸೇವಾ ಸಂಸ್ಥೆ  ‘ಶ್ರೀನಿವಾಸ ಮಂದಿರಂ’
ಬೆಂಗಳೂರು ನಗರದ ಪ್ರಪ್ರಥಮ ಸೇವಾ ಸಂಸ್ಥೆ  ‘ಶ್ರೀನಿವಾಸ ಮಂದಿರಂ’

ಸಮಾಜಸುಧಾರಕರಾಗಿ ಅತ್ಯುನ್ನತ ಧ್ಯೇಯವನ್ನು ಇಟ್ಟುಕೊಂಡಿದ್ದ ಗೋಪಾಲಾಚಾರ್ಲು ಅವರು ಬರೀ ದೇವಸ್ಥಾನವಷ್ಟರಿಂದ ತೃಪ್ತಿ ಹೊಂದದೆ ಅನಾಥ ಮಕ್ಕಳಿಗಾಗಿ ಅನಾಥಾಲಯವನ್ನು ಪ್ರಾರಂಭಿಸಲು ಸಂಕಲ್ಪಿಸಿದರು. ಇದಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಗೋಪಾಲಾಚಾರ್ಲು ೧೮೮೮ರ ಪ್ರಾರಂಭದಲ್ಲಿ ದೇಶಾದ್ಯಂತ ಸಂಚರಿಸಿ ರಾಜ–ಮಹಾರಾಜರುಗಳನ್ನೂ ಹಾಗೂ ಶ್ರೀಮಂತರನ್ನೂ ಕಂಡು ಹಣವನ್ನು ಶೇಖರಿಸಿಕೊಂಡು...

ಫಾಲ್ಕೆ ಪ್ರಶಸ್ತಿ ಪುರಸ್ಕೃತ ಸಿನೆಮಾಟೋಗ್ರಾಫರ್ ವಿ.ಕೆ. ಮೂರ್ತಿ
ಫಾಲ್ಕೆ ಪ್ರಶಸ್ತಿ ಪುರಸ್ಕೃತ ಸಿನೆಮಾಟೋಗ್ರಾಫರ್ ವಿ.ಕೆ. ಮೂರ್ತಿ

ಮೂರ್ತಿ ಅವರ ಸಾಧನೆಗೆ ಕಲಶವಿಟ್ಟಂತೆ ಅವರಿಗೆ ದೇಶದ ಚಲನಚಿತ್ರರಂಗದ ಅತ್ಯುನ್ನತ ಪ್ರಶಸ್ತಿಯಾದ ದಾದಾಸಾಹೆಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಲಾಯಿತು. ವಿಶೇಷವೆಂದರೆ ಈ ಪ್ರಶಸ್ತಿಗೆ ಪಾತ್ರರಾದ ದೇಶದ ಮೊದಲ ತಂತ್ರಜ್ಞ ಹಾಗೂ ಮೊದಲ ಚಲನಚಿತ್ರ ಛಾಯಾಗ್ರಾಹಕ ಅವರಾಗಿದ್ದರು. ಈ ಮಹೋನ್ನತ ಸಾಧನೆಯನ್ನು ತಮ್ಮದಾಗಿಸಿಕೊಂಡ ಮೂರ್ತಿ...

ರಾಮಮಂದಿರ ಪುನರ್ನಿರ್ಮಾಣ: ಆಧ್ಯಾತ್ಮಿಕ, ಸಾಮಾಜಿಕ ಮಾತ್ರವಲ್ಲದೆ ಆರ್ಥಿಕ ನವೋನ್ಮೇಷದ ಪ್ರತೀಕ
ರಾಮಮಂದಿರ ಪುನರ್ನಿರ್ಮಾಣ: ಆಧ್ಯಾತ್ಮಿಕ, ಸಾಮಾಜಿಕ ಮಾತ್ರವಲ್ಲದೆ ಆರ್ಥಿಕ ನವೋನ್ಮೇಷದ ಪ್ರತೀಕ

ಶ್ರೀರಾಮಮಂದಿರ ನಿರ್ಮಾಣವು ನಿಸ್ಸಂದೇಹವಾಗಿ ಅಯೋಧ್ಯೆ ಮಾತ್ರವಲ್ಲದೇ ಸಂಪೂರ್ಣ ಉತ್ತರಪ್ರದೇಶದ ಆರ್ಥಿಕ ಬೆಳವಣಿಗೆಯ ವೇಗವರ್ಧಕವಾಗಿ ಹೊರಹೊಮ್ಮುತ್ತಿದೆ. ಇದು ವಿವಿಧ ಕ್ಷೇತ್ರಗಳಲ್ಲಿ ಹೊಸಅಲೆಯನ್ನು ಸೃಷ್ಟಿಸಿದ್ದು, ಆರ್ಥಿಕ ಸಮೃದ್ಧಿಯ ಹೊಸಯುಗಕ್ಕೆ ನಾಂದಿ ಹಾಡಿದೆ. ಹೀಗೆ ಅಯೋಧ್ಯೆಯು ಮುಂದಿನ ಪೀಳಿಗೆಯ ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಕೇಂದ್ರವಾಗಿ...

ಯಹೂದಿ ‘ಟಿಕ್ಕುನ್ ಓಲಂ’ ಸದಾಶಯ / ರೆಬ್ಬೈ ಬೋಧನೆಗಳ ಸಾರ “ನೀವುಜಗತ್ತನ್ನು ದುರಸ್ತಿ ಮಾಡಬೇಕು”
ಯಹೂದಿ ‘ಟಿಕ್ಕುನ್ ಓಲಂ’ ಸದಾಶಯ / ರೆಬ್ಬೈ ಬೋಧನೆಗಳ ಸಾರ “ನೀವುಜಗತ್ತನ್ನು ದುರಸ್ತಿ ಮಾಡಬೇಕು”

ಇಸ್ರೇಲ್ ರಾಷ್ಟ್ರೀಯ ಲಾಂಛನ ಮೆನೋರಾ. ಇದು ಏಳು ಶಾಖೆಗಳಿರುವ ದೀಪಸ್ತಂಭ. ಜಗತ್ತಿಗೆ ಬೆಳಕಿನ ಮೂಲವಾಗುವ ಇಚ್ಛೆ ಇಸ್ರೇಲ್‌ಗಿದೆ ಎಂಬುದನ್ನು ಸಾಂಕೇತಿಕವಾಗಿ ಹೇಳುತ್ತದೆ. ಇಂದಿಗೂ ಇಸ್ರೇಲ್‌ನಲ್ಲಿ ‘ಮರಾಠಿ ಡೇಲಿ’ ಪತ್ರಿಕೆ ಚಾಲ್ತಿಯಲ್ಲಿದೆ! ಅಷ್ಟೇ ಅಲ್ಲ ಮೂರು ಬಾರಿ ಜಾಗತಿಕ ಮರಾಠಿ ಸಮ್ಮೇಳನ ಕೂಡ...

ಕಪ್ಪೆಗಳು ಪಾರಿಸರಿಕ ಸ್ವಸ್ಥ ಆರೋಗ್ಯ ಸೂಚಕಗಳು
ಕಪ್ಪೆಗಳು ಪಾರಿಸರಿಕ ಸ್ವಸ್ಥ ಆರೋಗ್ಯ ಸೂಚಕಗಳು

ಕೆಲ ವರ್ಷಗಳ ಹಿಂದೆ ಇದ್ದ ಕಪ್ಪೆಗಳು ಈಗ ನಮ್ಮ ವಾಸಸ್ಥಳ, ಕೃಷಿಭೂಮಿಯಲ್ಲಿ ಕಾಣಸಿಗದಿದ್ದರೆ ಪರಿಸರ ಬದಲಾವಣೆಯ ಅಡ್ಡಪರಿಣಾಮಗಳಿಗೆ ನಮ್ಮ ಆ ಭೂಮಿ ಒಳಗಾಗಿದೆ ಎಂದೇ ಕಪ್ಪೆಗಳ ತಜ್ಞರು (ಬಾಟ್ರಾಕಾಲಜಿಸ್ಟ್) ತೀರ್ಮಾನಿಸುತ್ತಾರೆ. ಇದರರ್ಥ, ನಮ್ಮ ಸುತ್ತಮುತ್ತಲಿನಲ್ಲಿರುವ ಕ್ರಿಮಿ, ಕೀಟ ಮತ್ತು ಸೊಳ್ಳೆಗಳಂತಹ ಉಪದ್ರವಕಾರಿ...

‘ಡಿಪ್ರೆಸ್ಸ್ಡ್ ಕ್ಲಾಸಸ್ ಸ್ಟುಡೆಂಟ್ಸ್ ಹಾಸ್ಟೆಲ್, ಧಾರವಾಡ’ಅಂಬೇಡ್ಕರ್  ದಂಪತಿ ಕರಕಮಲ ಸಂಜಾತ ದಲಿತ ಮಕ್ಕಳ ವಸತಿ ಶಾಲೆ
‘ಡಿಪ್ರೆಸ್ಸ್ಡ್ ಕ್ಲಾಸಸ್ ಸ್ಟುಡೆಂಟ್ಸ್ ಹಾಸ್ಟೆಲ್, ಧಾರವಾಡ’ಅಂಬೇಡ್ಕರ್  ದಂಪತಿ ಕರಕಮಲ ಸಂಜಾತ ದಲಿತ ಮಕ್ಕಳ ವಸತಿ ಶಾಲೆ

“ಮಾತೃಶ್ರೀ ರಮಾಬಾಯಿ ಪತಿ ಬಾಬಾಸಾಹೇಬರ ಆಜ್ಞೆಯಂತೆ, ೧೯೩೧ರಲ್ಲಿ ಧಾರವಾಡಕ್ಕೆ ಬರುತ್ತಾರೆ. ಡಿಪ್ರೆಸ್ಡ್ ಕ್ಲಾಸಸ್ ಸ್ಟುಡೆಂಟ್ಸ್ ವಸತಿ ನಿಲಯ ಆಗ್ಗೆ ತುಂಬ ಅಧೋಗತಿಗೆ ಇಳಿದಿರುತ್ತದೆ. ತಮ್ಮ ಮೈಮೇಲಿದ್ದ ಎಲ್ಲ ಬಂಗಾರದ ಒಡವೆಗಳನ್ನು ಮಾರಿ, ಅಲ್ಲಿನ ಮಕ್ಕಳಿಗಾಗಿ ಸುಸ್ಥಿತಿಯ ಕಟ್ಟಡ ಮತ್ತು ಊಟೋಪಚಾರಕ್ಕೆ ರೇಷನ್...

ಶ್ರೀ ಸಿದ್ಧಾರೂಢ ಸದ್ಗುರುನಾಥ; ಉದ್ಧಾರಾದೆವು ನಿಮ್ಮಿಂದ...
ಶ್ರೀ ಸಿದ್ಧಾರೂಢ ಸದ್ಗುರುನಾಥ; ಉದ್ಧಾರಾದೆವು ನಿಮ್ಮಿಂದ…

ದೈನಂದಿನ ಹೋರಾಟದಲ್ಲಿ ಬಸವಳಿದ ಜೀವಕ್ಕೆ ಮನುಷ್ಯತ್ವ, ಮಾಧವತ್ವ, ಒಳ್ಳೆಯತನದಲ್ಲಿ ನಂಬಿಕೆ, ದಾಸೋಹಕ್ಕಾಗಿ ಕಾಯಕ ತತ್ತ್ವಪರಿಪಾಲನೆ, ದುಡಿದೇ ಉಣ್ಣುವ ‘ಕಾಯಕವೇ ಕೈಲಾಸ’ ಎಂಬ ಅನುಭಾವದ ಅರಿವು, ಹೃದಯವೀಣೆಯ ತಂತಿ ಮೀಟಿದವರು ಸಿದ್ಧರು–ಸಾಧಕರು, ತಪಸ್ವಿಗಳು, ಅನುಭಾವಿಗಳು, ಶರಣರು, ವಚನಕಾರರು. ನಿತ್ಯದ ದಾಸರು, ಬದುಕಿನ ಮೌಲ್ಯಾದರ್ಶಗಳನ್ನು...

ವಲಸೆ ಹಕ್ಕಿಗಳ ವಿಳಾಸ ಹುಡುಕುತ್ತ ಉಂಗುರಗಳ ತೊಟ್ಟ ರೆಕ್ಕೆಯ ಮಿತ್ರರ ಪಾದಾನ್ವೇಷಣೆ!
ವಲಸೆ ಹಕ್ಕಿಗಳ ವಿಳಾಸ ಹುಡುಕುತ್ತ ಉಂಗುರಗಳ ತೊಟ್ಟ ರೆಕ್ಕೆಯ ಮಿತ್ರರ ಪಾದಾನ್ವೇಷಣೆ!

ಪಕ್ಷಿಗಳ ದೇಹದ ಗಾತ್ರಕ್ಕೆ ಅನುಗುಣವಾಗಿ, ಅತ್ಯಂತ ಕಡಮೆ ತೂಕದ ಪುಟ್ಟ ಅಲ್ಯೂಮಿನಿಯಂನ ಸಂಕೇತಾಕ್ಷರ ಕೆತ್ತಿದ `ರಿಂಗ್’ ಮತ್ತು `ಟ್ಯಾಗ್‍’ ತೊಡಿಸಿ, ಎಲ್ಲಿಯೋ ಯಾರಿಗೋ ಈ ಹಕ್ಕಿ ಗೋಚರಿಸಿ, ನಮಗೆ ಚಿತ್ರಸಮೇತ ಸಂದೇಶ ಕಳುಹಿಸಿದಾಗ, ಆ ಪುಟ್ಟ ಹಕ್ಕಿಯ ವಲಸೆಯನ್ನು ವೈಜ್ಞಾನಿಕವಾಗಿ ಅಭ್ಯಸಿಸಲು...

ಸಮೂಹ ಬಂಡವಾಳಕ್ಕೆ ಮೋದಿ ಮಾಂತ್ರಿಕ ಸ್ಪರ್ಶ ಸಾರ್ವಜನಿಕ ವಲಯ ಉದ್ಯಮಗಳ ಮುನ್ನಡೆ
ಸಮೂಹ ಬಂಡವಾಳಕ್ಕೆ ಮೋದಿ ಮಾಂತ್ರಿಕ ಸ್ಪರ್ಶ ಸಾರ್ವಜನಿಕ ವಲಯ ಉದ್ಯಮಗಳ ಮುನ್ನಡೆ

ಕಳೆದ ಕೆಲವು ವರ್ಷಗಳಿಂದ ವಿವಿಧ ಅಂಶಗಳಲ್ಲಿ ಸಾರ್ವಜನಿಕ ವಲಯವು ಸುಧಾರಣೆಯ ಹಾದಿಯಲ್ಲಿ ಸಾಗಿವೆ. ಅನೇಕ ಉದ್ಯಮಗಳು ಹೆಚ್ಚಿದ ಆದಾಯ ಮತ್ತು ಲಾಭಗಳೊಂದಿಗೆ ಸುಧಾರಿತ ಹಣಕಾಸಿನ ಕಾರ್ಯಕ್ಷಮತೆಯನ್ನು ವರದಿ ಮಾಡಿವೆ. ಈ ಸುಧಾರಣೆಗಳು ಉತ್ತಮ ನಿರ್ವಹಣಾ ಅಭ್ಯಾಸಗಳು, ವೆಚ್ಚ ನಿಯಂತ್ರಣ ಮತ್ತು ಹೊಸ...

ಚಂದಿರನೇತಕೆ ತಿರುಗುವನಮ್ಮ?
ಚಂದಿರನೇತಕೆ ತಿರುಗುವನಮ್ಮ?

‘ಚಂದಿರನೇತಕೆ ಓಡುವನಮ್ಮಾ’ ಎಂಬ ಪ್ರಸಿದ್ಧ ಶಿಶುಗೀತೆಯ ಸಾಲುಗಳನ್ನು ‘ಚಂದಿರನೇತಕೆ ತಿರುಗುವನಮ್ಮಾ’ ಎಂದು ಬದಲಾಯಿಸಿ ಹಾಡಿಕೊಳ್ಳಬೇಕಾದ ಪ್ರಸಂಗ ಬಂದೊದಗಿತು. ಆಗ ನಾನು ಭಾರತಕ್ಕಿಂತ ಬಹಳಷ್ಟು ಉತ್ತರಕ್ಕಿದ್ದು ಅಲ್ಲಿಂದ ಚಂದ್ರನನ್ನು ನೋಡುವ ಕೋನ ಬೇರೆ ಆದುದ್ದರಿಂದ ಹೀಗಾಗಿರಬಹುದು ಎಂದು ಊಹಿಸಲು ನನಗೆ ಹೆಚ್ಚು ಸಮಯ...

ಭಾರತದ ಈಶಾನ್ಯ ರಾಜ್ಯಗಳು ಅನಿಷ್ಟದಿಂದ ಅಷ್ಟಲಕ್ಷ್ಮಿಗಳಾಗಿದ್ದು ಹೇಗೆ?
ಭಾರತದ ಈಶಾನ್ಯ ರಾಜ್ಯಗಳು ಅನಿಷ್ಟದಿಂದ ಅಷ್ಟಲಕ್ಷ್ಮಿಗಳಾಗಿದ್ದು ಹೇಗೆ?

ಮೋದಿಯವರು ಹೇಳುವಂತೆ ನಮ್ಮ ಈಶಾನ್ಯ ರಾಜ್ಯಗಳು ಭಾರತದ ಅಷ್ಟಲಕ್ಷ್ಮಿಗಳು. ಹೀಗಾಗಿ ೨೦೧೪ರ ನಂತರ ದೇಶದ ಪ್ರಧಾನಿಗಳು ಅಲ್ಲಿಗೆ ೭೦ ಬಾರಿ ಭೇಟಿ ಕೊಟ್ಟಿದ್ದರೆ ಅವರ ಮಂತ್ರಿಮಂಡಲದ ಸಚಿವರು ೬೮೦ ಬಾರಿ ಭೇಟಿ ಕೊಟ್ಟಿದ್ದಾರೆ. ದೆಹಲಿಯ ಮಂತ್ರಿಮಂಡಲವನ್ನು ಈಶಾನ್ಯ ರಾಜ್ಯದ ಆಗುಹೋಗುಗಳ ಜೊತೆ...

ಬ್ರಿಟಿಷ್ ಪ್ರಧಾನಿ ಚರ್ಚಿಲ್ ಭಾರತದೊಂದಿಗೆ ಮುಖಾಮುಖಿ
ಬ್ರಿಟಿಷ್ ಪ್ರಧಾನಿ ಚರ್ಚಿಲ್ ಭಾರತದೊಂದಿಗೆ ಮುಖಾಮುಖಿ

ಭಾರತದ ವಿಷಯದಲ್ಲಿ ಚರ್ಚಿಲ್‌ರದ್ದು ಅತಿರೇಕದ ಹಾದಿ. ಭಾರತದ ಸಾಂವಿಧಾನಿಕ ಬದಲಾವಣೆ ಬಗ್ಗೆ ಅಸಹನೆ, ಗಾಂಧಿ ಬಗೆಗಿನ ದ್ವೇಷ, ದೇಶದ ರಾಷ್ಟ್ರೀಯ (ಸ್ವಾತಂತ್ರ್ಯ) ಚಳವಳಿಯ ಬಗ್ಗೆ ಸಿಟ್ಟು ‘ಹಿಂದು’ ಎಂದು ಗುರುತಿಸಲ್ಪಟ್ಟ ಎಲ್ಲದರ ಬಗೆಗೆ ದ್ವೇಷ – ಇವು ಚರ್ಚಿಲ್ ಸಾರ್ವಜನಿಕ ವ್ಯಕ್ತಿತ್ವದ...

ಈಗ ಬೇಕು ಜನಸಂಖ್ಯಾಸ್ಫೋಟ!
ಈಗ ಬೇಕು ಜನಸಂಖ್ಯಾಸ್ಫೋಟ!

ನಮ್ಮದು ‘ಯುವಭಾರತ’ವೆಂದು ಹೆಮ್ಮೆಪಡುವುದು ತಪ್ಪಲ್ಲ. ಆದರೆ ಈ ಘೋಷಣೆಗೆ ಅಸ್ಥಿಭಾರ ಗಟ್ಟಿಯಾಗಿರಬೇಕಷ್ಟೆ. ೧೯೮೦ಕ್ಕೆ ಹೋಲಿಸಿದರೆ ನಮ್ಮ ಹಲವಾರು ರಾಜ್ಯಗಳಲ್ಲಿ ಟಿ.ಎಫ್.ಆರ್. (ಟೋಟಲ್ ಫರ್ಟಿಲಿಟಿ ರೇಟ್) ಈಗ ಇಳಿಮುಖವಾಗಿದೆ. ಆಗ ಇದ್ದ ಉತ್ಪಾದಕತೆಯ ಪ್ರಮಾಣ ಈಗ ಅರ್ಧದಷ್ಟು ಅಥವಾ ಅದಕ್ಕಿಂತ ಕಡಮೆಯಾಗಿದೆ. ಈ...

ಸಮರಸ ಸಮಾಜ
ಸಮರಸ ಸಮಾಜ

‘ಕರೆದು ಬಂದವ ಅಭ್ಯಾಗತ, ಕರೆಯದೆ ಬಂದವ ಅತಿಥಿ’ ಎಂಬ ಪದವಿವರವೊಂದಿದೆ. ಆಮಂತ್ರಣದ ಮೇರೆಗೆ ಬಂದ ಅಭ್ಯಾಗತರನ್ನು ಎಷ್ಟು ಚೆನ್ನಾಗಿ ಉಪಚರಿಸಿದರೂ ಕಡಮೆಯೇ. ಅಂಥಲ್ಲಿ ಆಗಂತುಕನಾಗಿ ಬಂದ ಅತಿಥಿಯು ಸಾಕ್ಷಾತ್ ದೇವರೇ ಎಂಬುದು ಶ್ರದ್ಧೆ. ಆತಿಥ್ಯದ ಸ್ವರೂಪವನ್ನು ಈ ನೆಲೆಯಿಂದ ನೋಡಬೇಕು. ಶಿರಸಿ...

ಅರಣ್ಯರಕ್ಷಕ  ಕೆ.ಎಂ. ಚಿಣ್ಣಪ್ಪ
ಅರಣ್ಯರಕ್ಷಕ  ಕೆ.ಎಂ. ಚಿಣ್ಣಪ್ಪ

ಅರಣ್ಯರಕ್ಷಣೋದ್ಯಮದಲ್ಲಿ ಮುಳುಗಿದಂತೆಲ್ಲ ಜನಶಿಕ್ಷಣದ ಆವಶ್ಯಕತೆಯೂ ಇದೆಯೆಂದು ಚಿಣ್ಣಪ್ಪನವರಿಗೆ ಮನವರಿಕೆಯಾಯಿತು. ಹೀಗೆ ಜನರೊಡನೆ ನಿರಂತರ ಸಂವಾದ ಕಾರ್ಯಕ್ರಮಗಳನ್ನು ನಡೆಸತೊಡಗಿದರು. ಚಿಣ್ಣಪ್ಪನವರ ಇಂತಹ ಒಂದೊಂದು ಪ್ರಯಾಸವೂ ಅಭೂತಪೂರ್ವವೇ ಆಗಿತ್ತು. ಅವರು ಜನರಿಗೆ ಪದೇಪದೇ ಹೇಳುತ್ತಿದ್ದ ಮಾತು: “ಮನುಷ್ಯರಿಲ್ಲದಿದ್ದರೂ ಕಾಡು ಉಳಿಯುತ್ತದೆ. ಆದರೆ ಕಾಡು ಇಲ್ಲದಿದ್ದರೆ...

ಮೈಸೂರಿನ ಅಭಿನವ ಶಂಕರಾಲಯ  ಇತಿಹಾಸದ ಸಂಕ್ಷಿಪ್ತ ಪಕ್ಷಿನೋಟ ಡಾ. ಎ.ವಿ. ನರಸಿಂಹಮೂರ್ತಿ
ಮೈಸೂರಿನ ಅಭಿನವ ಶಂಕರಾಲಯ  ಇತಿಹಾಸದ ಸಂಕ್ಷಿಪ್ತ ಪಕ್ಷಿನೋಟ ಡಾ. ಎ.ವಿ. ನರಸಿಂಹಮೂರ್ತಿ

ಕಿರಿಯ ಕುಣಿಗಲ ರಾಮಶಾಸ್ತ್ರಿಗಳು ತಮ್ಮ ಮನೆಯನ್ನು ಯಾವುದಾದರೂ ಧರ್ಮಕಾರ್ಯಕ್ಕೆ ವಿನಿಯೋಗಿಸಬೇಕೆಂದು ಯೋಚಿಸಿದ್ದರು. ಇದಕ್ಕೆ ಅವಕಾಶ ತಾನಾಗಿಯೇ ಒದಗಿಬಂದಿತು. ಶೃಂಗೇರಿಯ ಶ್ರೀಶಾರದಾಪೀಠದ ಪೀಠಾಧಿಪತಿಗಳಾಗಿದ್ದ ಜಗದ್ಗುರು ಶ್ರೀ ಚಂದ್ರಶೇಖರಭಾರತೀ ಸ್ವಾಮಿಗಳು {ಕ್ರಿ.ಶ. ೭-೪-೧೯೧೨ ರಿಂದ ೨೬-೯-೧೯೫೪} ತಮ್ಮ ಗುರುಗಳಾಗಿದ್ದ ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹಭಾರತೀ...

ಭಾರತದ ಬಾಹ್ಯಾಕಾಶ ತಂತ್ರಜ್ಞಾನ ವಿಕಸನ  ಮತ್ತು ಸಾಧನೆಗಳು
ಭಾರತದ ಬಾಹ್ಯಾಕಾಶ ತಂತ್ರಜ್ಞಾನ ವಿಕಸನ  ಮತ್ತು ಸಾಧನೆಗಳು

ಭಾರತದ ಬಾಹ್ಯಾಕಾಶ ಕಾರ್ಯಕ್ರಮವು ೧೯೬೨ರಲ್ಲಿ ಪ್ರಾರಂಭವಾದಾಗಿನಿಂದ ಗಮನಾರ್ಹವಾಗಿ ವಿಕಸನಗೊಂಡಿದೆ. ಇದರ ನೇತೃತ್ವ ವಹಿಸಿರುವ ‘ಇಸ್ರೋ’ ಸಂಸ್ಥೆಯು ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಪರಿಶೋಧನೆ ಕ್ಷೇತ್ರದಲ್ಲಿ ವಿಶೇಷ ಸಾಧನೆಗಳನ್ನು ಮಾಡಿದೆ. ಸಂಸ್ಥೆಯ ತಾಂತ್ರಿಕ ಕಾರ್ಯಕ್ರಮಗಳಾದ ಉಪಗ್ರಹಗಳ ಉಡಾವಣೆ ಮತ್ತು ಇತರ ಗ್ರಹಗಳ ಅನ್ವೇಷಣೆಯಲ್ಲಿ ಭಾರತವನ್ನು...

ಕನ್ನಡದಲ್ಲಿ ಅನ್ಯ ಭಾಷೆಗಳ ಕಥನ ಸಾಹಿತ್ಯ
ಕನ್ನಡದಲ್ಲಿ ಅನ್ಯ ಭಾಷೆಗಳ ಕಥನ ಸಾಹಿತ್ಯ

“ಒಂದು ಸಂಸ್ಕೃತಿಯ ಸಾಹಿತ್ಯ ಇನ್ನೊಂದು ಸಂಸ್ಕೃತಿಯಲ್ಲಿ ಮೊದಲು ಪ್ರವೇಶಿಸುವುದು ಭಾಷಾಂತರದ ಮೂಲಕ. ಆಮೇಲೆ ಅದು ಭಾವಾಂತರ, ಸ್ವತಂತ್ರ ಸಾಹಿತ್ಯಗಳಿಗೆ ದಾರಿ ಮಾಡಿಕೊಡುತ್ತದೆ. ಇದಕ್ಕೆ ಅನುಗುಣವಾಗಿ ಆರಂಭದ ಕನ್ನಡ ಭಾವಗೀತೆ ಮತ್ತು ನಾಟಕಗಳು ಅನುವಾದದ ದಾರಿ ಹಿಡಿದೇ ಕನ್ನಡದೊಳಗೆ ಬಂದವು. ಅಂದರೆ ಇಂಗ್ಲಿಷ್‌ನಿಂದ...

ಲೇಖಕರೇ ರಸ್ತೆಯಲ್ಲಿ ನಿಂತು  ಪುಸ್ತಕ ಮಾರುವ ಅಭಿಯಾನ
ಲೇಖಕರೇ ರಸ್ತೆಯಲ್ಲಿ ನಿಂತು  ಪುಸ್ತಕ ಮಾರುವ ಅಭಿಯಾನ

ಈ ಅಭಿಯಾನದಿಂದ ತಂಡ ಯಾವುದೇ ಲಾಭವನ್ನು ನಿರೀಕ್ಷಿಸಿಲ್ಲ. ಕೇವಲ ಮಾರಾಟದ ದೃಷ್ಟಿಯಿಂದಲೂ ಈ ಅಭಿಯಾನವನ್ನು ನಡೆಸುತ್ತಿಲ್ಲ. ಕ್ಷೀಣಿಸುತ್ತಿರುವ ಓದುಗರ ವರ್ಗವನ್ನು ಹೆಚ್ಚಿಸುವುದಕ್ಕಾಗಿಯೇ ನಿಃಸ್ವಾರ್ಥದಿಂದ ರಸ್ತೆಗಿಳಿದಿದ್ದಾರೆ. ಈಗಾಗಲೇ ಬೆಂಗಳೂರು, ಮೈಸೂರು ಮತ್ತು ಮಂಡ್ಯ ಸೇರಿದಂತೆ ಹಲವೆಡೆ ‘ಬಾ ಗುರು ಬುಕ್ ತಗೋ’ ಅಭಿಯಾನವನ್ನು...

ಅಯೋಧ್ಯಾ ಸಚಿತ್ರ ರಾಮಾಯಣ
ಅಯೋಧ್ಯಾ ಸಚಿತ್ರ ರಾಮಾಯಣ

ಶ್ರೀ ಮದ್ರಾಮಾಯಣಕ್ಕೆ ರಾಷ್ಟ್ರೀಯ ಮಹಾಕಾವ್ಯ ಎಂಬ ಗೌರವದ ಸ್ಥಾನವನ್ನು ಭಾರತೀಯ ಸಮಾಜ ಶತಮಾನಗಳ ಹಿಂದೆಯೇ ನೀಡಿದೆ. ಭಾರತೀಯ ಸಮಾಜದ ಮೇಲೆ ರಾಮಾಯಣ ಮಾಡಿರುವಷ್ಟು ಪ್ರಭಾವವನ್ನು ಬೇರೆ ಯಾವ ಗ್ರಂಥವೂ ಬೇರೆ ಯಾವ ದೇಶದ ಮೇಲೂ ಮಾಡಿಲ್ಲ. ಈ ದೇಶದ ಜನ ಶ್ರೀರಾಮ,...

ಸುಕೃತಿ ಪುಸ್ತಕ ಪರಿಚಯವೆಂಬ ಸಾಹಿತ್ಯ ದೀವಿಗೆ
ಸುಕೃತಿ ಪುಸ್ತಕ ಪರಿಚಯವೆಂಬ ಸಾಹಿತ್ಯ ದೀವಿಗೆ

ಪುಸ್ತಕದ ಪರಿಚಯವನ್ನು 8-10 ನಿಮಿಷದ ವಿಡಿಯೋಗಳ ಮೂಲಕ ಫೇಸ್‌ಬುಕ್ ಮತ್ತು ಯೂಟ್ಯೂಬ್ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರಿಗೂ ಒದಗುವಂತೆ ಮಾಡುವ ಪ್ರಯತ್ನವಾಗಿ ಸುಕೃತಿ ಪುಸ್ತಕ ಪರಿಚಯ ಅರಳಿಕೊಂಡಿತು. ಸಹೃದಯಿ ಓದುಗರ ತಂಡವನ್ನೊದು ರೂಪಿಸಿಕೊಂಡು ಒಂದೊಂದೇ ಪುಸ್ತಕದ ಪರಿಚಯಾತ್ಮಕ ವಿಡಿಯೋವನ್ನು ಪ್ರಚುರಪಡಿಸುವ ಈ...

ಶಿಷ್ಟ ಕನ್ನಡಕ್ಕೆ ಒಂದು ಕೈಪಿಡಿ
ಶಿಷ್ಟ ಕನ್ನಡಕ್ಕೆ ಒಂದು ಕೈಪಿಡಿ

ಭಾಷಾಶ್ರದ್ಧೆ ಇರುವವರಿಗೆ ನಾವು ಹೇಳಬಹುದಾದ ಕಿವಿಮಾತು: ಅವರು ಅಳವಡಿಸಿಕೊಳ್ಳಬಹುದಾದ ಮೊದಲ ಅಭ್ಯಾಸವೆಂದರೆ ಪುಸ್ತಕವನ್ನೋ ಪತ್ರಿಕೆಯನ್ನೋ ಓದುವಾಗ ಎಲ್ಲೆಲ್ಲಿ ಯಾವಾವ ಶಬ್ದರೂಪಗಳು ಹೇಗೆಹೇಗೆ ಬಳಕೆಗೊಂಡಿವೆ ಎಂಬುದನ್ನು ತಪ್ಪದೆ ಗಮನಿಸುವುದು. ಇದು ಮಾತ್ರ ವಿಶ್ಲೇಷಣೆಗೂ ಪರೀಕ್ಷಣೆಗೂ ದಾರಿ ಮಾಡಬಲ್ಲದು. ಎರಡನೆಯದು: ಬರಹಗಾರರು ತಮ್ಮ ಮಟ್ಟಿಗಾದರೂ...

ಇಂಗ್ಲಿಷ್ ಗೀತಗಳು
ಇಂಗ್ಲಿಷ್ ಗೀತಗಳು

ಡಿ.ವಿ.ಜಿ.ಯವರ (೧೭.೩.೧೮೮೭–೭.೧೦.೧೯೭೫) ೪೮ನೇ ಪುಣ್ಯತಿಥಿಯ ಸಂದರ್ಭದಲ್ಲಿ ಈ ವಿಶೇಷ ಲೇಖನ ಪ್ರಕಟವಾಗುತ್ತಿದೆ. ೧೯೨೭ರ ಆರಂಭದಲ್ಲಿ ಡಿ.ವಿ.ಜಿ. ಇಂಗ್ಲಿಷಿನಲ್ಲಿ ಬರೆದ ಈ ಲೇಖನ ಇದೀಗ ಮೊತ್ತಮೊದಲಿಗೆ ಕನ್ನಡದಲ್ಲಿ ಅನುವಾದಗೊಂಡು ಪ್ರಕಟಗೊಳ್ಳುತ್ತಿದೆ. ಲೇಖನದ ವಿಷಯವೂ ವಿಶಿಷ್ಟವಾಗಿದೆ: ಬಿ.ಎಂ. ಶ್ರೀಕಂಠಯ್ಯನವರ ‘ಇಂಗ್ಲಿಷ್ ಗೀತಗಳು’. ೧೯ನೇ ಶತಾಬ್ದದ...

ಬಿಡದೆ ಕಾಡುವ ಚಂದಮಾಮಾ!
ಬಿಡದೆ ಕಾಡುವ ಚಂದಮಾಮಾ!

ಚಂದಮಾಮಾ ಎಂದ ಕೂಡಲೇ ನೆನಪಾಗುವುದು ತಿಂಗಳಿಗೊಮ್ಮೆ ಬರುತ್ತಿದ್ದ ಮಕ್ಕಳ ಮಾಸಪತ್ರಿಕೆ. ಈಗಿನ ಮಧ್ಯವಯಸ್ಕ ತಲೆಮಾರಿನವರ ಬಾಲ್ಯದ ಸಂಗಾತಿ ಈ ಮಾಸಪತ್ರಿಕೆ. ಹಳೆಯ ಚಂದಮಾಮಾ ಕಥೆಗಳೇ ಹಾಗೆ. ಮಕ್ಕಳು ಬಿಡಿ ದೊಡ್ಡವರನ್ನೇ ಸಮ್ಮೋಹನಗೊಳಿಸುತ್ತಿದ್ದ ಪುಸ್ತಕವದು. ಮುಖಪುಟ ಚಿತ್ರ, ಒಳಗೆ ಕಥೆಗಳ ನಡುವೆ ಇರುತ್ತಿದ್ದ...

ಮಹತ್ತಿನ ಉಪಾಸನೆ ದೇವುಡು ನರಸಿಂಹಶಾಸ್ತ್ರಿಗಳ ‘ಮಹಾತ್ರಯ’ದ ಸಂಸ್ತವ
ಮಹತ್ತಿನ ಉಪಾಸನೆ ದೇವುಡು ನರಸಿಂಹಶಾಸ್ತ್ರಿಗಳ ‘ಮಹಾತ್ರಯ’ದ ಸಂಸ್ತವ

ಪೌರಾಣಿಕ ವಸ್ತುಗಳಲ್ಲಿ ವಿಸ್ತೃತ ಕಥನಕ್ಕೆ ಒಗ್ಗುವ ಸನ್ನಿವೇಶಗಳೆಂಬ ಋಕ್ಕುಗಳನ್ನು ಗ್ರಹಿಸಿ, ಅವನ್ನು ಸಾಮವಾಗಿ ಉಪಬೃಂಹಣ ಮಾಡಿ ರಸಮಯ ಕಾದಂಬರಿಗಳಾಗಿ ದೇವುಡು ರಚಿಸಿದ್ದಾರೆ. ಇದೇ ಒಂದು ಸಾಧನೆ. ಇದೊಂದು ಪ್ರಯೋಗವಾಗಿ ಮಾತ್ರ ಉಳಿಯದೆ ಮೊದಲ ಪ್ರಯತ್ನದಲ್ಲಿಯೇ ಸೀಮೋಲ್ಲಂಘನ ಮಾಡಿದುದು ವಿಸ್ಮಯವೇ ಸರಿ. ಇಂದಿಗೂ...

ದೀನದಯಾಳ ಉಪಾಧ್ಯಾಯ ಏಕಾತ್ಮ ಮಾನವತೆ
ದೀನದಯಾಳ ಉಪಾಧ್ಯಾಯ ಏಕಾತ್ಮ ಮಾನವತೆ

ನಮ್ಮ ಶಾಲೆ-ಕಾಲೇಜುಗಳ ಪಠ್ಯಪುಸ್ತಕಗಳು ಈಗಲೂ ಕೂಡ ಪಾಶ್ಚಾತ್ಯ ದೇಶಗಳೊಂದಿಗೆ ನಮ್ಮನ್ನು ಹೋಲಿಸಿಕೊಂಡು ನಮ್ಮಲ್ಲಿ ಕೀಳರಿಮೆಯನ್ನು ಬೆಳೆಸುವಂತಹ ಕೆಲಸವನ್ನು ಮಾಡುತ್ತಿವೆ ಎನಿಸುತ್ತದೆ. ಅಮೆರಿಕದ ಪ್ರಜೆಗಳ ತಲಾ ಆದಾಯ ಇಷ್ಟು; ಭಾರತೀಯರದ್ದು ಇಷ್ಟು ಮಾತ್ರ. ಆಹಾರ, ಬಟ್ಟೆ ಮುಂತಾದವುಗಳ ಬಳಕೆಯ ವಿಚಾರದಲ್ಲೂ ಅಷ್ಟೆ. ಅಲ್ಲಿ...

ಕಂಪೆನಿ ಸರ್ಕಾರವನ್ನು ನಡುಗಿಸಿದ ’ಸಂನ್ಯಾಸಿ ಆಂದೋಲನ’
ಕಂಪೆನಿ ಸರ್ಕಾರವನ್ನು ನಡುಗಿಸಿದ ’ಸಂನ್ಯಾಸಿ ಆಂದೋಲನ’

ಟಿಪ್ಪು ಸುಲ್ತಾನ್ ದೇಶಪ್ರೇಮಿಯೋ ಅಲ್ಲವೋ? ಆತ ನಡೆಸಿದ್ದು ಸ್ವಾತಂತ್ರ್ಯ ಹೋರಾಟವೋ ಅಲ್ಲವೋ ಎನ್ನುವುದು ನಮ್ಮಲ್ಲಿ ಬಹುದೊಡ್ಡ ಚರ್ಚೆಯ ವಿಷಯವಾಗಿದೆ. ಇತ್ತೀಚೆಗೆ ನಮ್ಮಲ್ಲಿ ಸಾಮಾನ್ಯವಾಗಿ ಕಾಣುವಂತೆ ಇದನ್ನು ಎರಡೂ ಕಡೆಯಿಂದ ಬಹಳ ಶಕ್ತಿಶಾಲಿಯಾಗಿ ವಾದಿಸಲಾಗುತ್ತದೆ. ಕೆಲವರದ್ದು ಕೇವಲ ವಾದಕ್ಕಾಗಿ ವಾದ ಅನ್ನಿಸಿದರೂ ಕೂಡ...

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : utthana1965@gmail.com

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ


vulkan vegas, vulkan casino, vulkan vegas casino, vulkan vegas login, vulkan vegas deutschland, vulkan vegas bonus code, vulkan vegas promo code, vulkan vegas österreich, vulkan vegas erfahrung, vulkan vegas bonus code 50 freispiele, 1win, 1 win, 1win az, 1win giriş, 1win aviator, 1 win az, 1win azerbaycan, 1win yukle, pin up, pinup, pin up casino, pin-up, pinup az, pin-up casino giriş, pin-up casino, pin-up kazino, pin up azerbaycan, pin up az, mostbet, mostbet uz, mostbet skachat, mostbet apk, mostbet uz kirish, mostbet online, mostbet casino, mostbet o'ynash, mostbet uz online, most bet, mostbet, mostbet az, mostbet giriş, mostbet yukle, mostbet indir, mostbet aviator, mostbet casino, mostbet azerbaycan, mostbet yükle, mostbet qeydiyyat