ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಸ್ಫುರಣ

ಸ್ಫುರಣ

ಭಗವಂತನ ಮೇಲೆ ಪೂರ್ಣನಿಷ್ಠೆಯನ್ನಿಡಬೇಕು

* ಶ್ರೀ ಸದ್ಗುರು ಬ್ರಹ್ಮಚೈತನ್ಯ ಗೋಂದಾವಲೇಕರ ಮಹಾರಾಜರು ತಾಯಿಗಾಗಿ ಅಳುತ್ತಿರುವ ಮಗು ತಾಯಿಯನ್ನು ನೋಡುವವರೆಗೆ ಅಳುವುದನ್ನು ನಿಲ್ಲಿಸುವುದಿಲ್ಲ. ಅದರಂತೆ ಸಮಾಧಾನಕ್ಕಾಗಿ, ಆನಂದಕ್ಕಾಗಿ ಧಡಪಡಿಸುವ ನಮ್ಮ ಮನಸ್ಸು ಭಗವತ್ಪ್ರಾಪ್ತಿಯಾದ ಹೊರತು ಶಾಂತವಾಗಲು ಶಕ್ಯವಿಲ್ಲ. ಆದ್ದರಿಂದ ಪ್ರಪಂಚದ ಚಿಂತೆ ಮಾಡದೇ ಭಗವಂತನ ದರ್ಶನವು ಹೇಗಾದೀತು ಎಂಬ ಚಿಂತೆ ಮಾಡಿರಿ. ಭಗವಂತನ ಮೇಲೆ ಸಂಪೂರ್ಣವಾಗಿ ನಿಷ್ಠೆಯನ್ನಿಟ್ಟ ಹೊರತು ನಮ್ಮ ಪ್ರಪಂಚದ ಚಿಂತೆ ದೂರವಾಗುವುದಿಲ್ಲ. ಸಂಪೂರ್ಣ ಜಗತ್ತನ್ನೇ ಸಂರಕ್ಷಿಸುವ ಭಗವಂತನು ನನ್ನನ್ನು ಸಂರಕ್ಷಿಸಲಾರನೆ? ಪ್ರತಿಯೊಂದು ಘಟನೆಯು ಅವನ ಸತ್ತೆಯಿಂದಲೇ ನಡೆಯುತ್ತದೆ ಎಂದು ತಿಳಿಯಬೇಕು. […]

ಯಾವುದೇ ಪರಿಸ್ಥಿತಿಯಲ್ಲಿ ಭಗವನ್ನಾಮಸ್ಮರಣೆ ಶಕ್ಯವಿರುತ್ತದೆ

ಮನುಷ್ಯನ ಎಲ್ಲ ಪ್ರಯತ್ನವೂ ಶಾಶ್ವತ ಸಮಾಧಾನವನ್ನು ಸಂಪಾದಿಸುವುದಕ್ಕಾಗಿ ಇರುತ್ತದೆ. ಆ ಸಮಾಧಾನವು ಕೇವಲ ಭಗವಂತನ ಹತ್ತಿರವೇ ಇರುವುದರಿಂದ ಸಮಾಧಾನಕ್ಕಾಗಿ ಪ್ರತಿಯೊಬ್ಬ ಮನುಷ್ಯನಿಗೂ ಭಗವಂತನ ಆವಶ್ಯಕತೆಯಿರುತ್ತದೆ. ನಮ್ಮ ಯಾವುದೇ ಪ್ರಯತ್ನಗಳಿಂದಲೂ ‘ಭಗವತ್ಪ್ರಾಪ್ತಿಯಿಂದ ಉಂಟಾಗುವ ಸಮಾಧಾನವು’ ನಮಗೆ ಸಿಗುವುದಿಲ್ಲ. ಇದಕ್ಕೆ ಪರಿಸ್ಥಿತಿಯು ಕಾರಣವೆಂದು ಎಲ್ಲರೂ ಹೇಳುತ್ತಾರೆ. ಆದರೆ ನಿಜವಾಗಿಯೂ ಪರಿಸ್ಥಿತಿ ಅಡ್ಡಬರುವುದೋ ಅಥವಾ ಇಲ್ಲವೋ ಎಂಬುದನ್ನು ಈಗ ನಾವು ನೋಡಬೇಕು. ಪರಿಸ್ಥಿತಿಯನ್ನು ಕುರಿತು ವಿಚಾರ ಮಾಡುವಾಗ ಒಂದು ಬಾಹ್ಯಪರಿಸ್ಥಿತಿ ಹಾಗೂ ಇನ್ನೊಂದು ಆಂತರಿಕಪರಿಸ್ಥಿತಿ ಎಂದು ಎರಡು ಭಾಗ ಮಾಡಿ, ಇವುಗಳ […]

ನಾಮವು ಸತ್ ಸ್ವರೂಪವಾಗಿರುತ್ತದೆ

ಸಮರ್ಥ ಸದ್ಗುರು ಶ್ರೀ ಬ್ರಹ್ಮಚೈತನ್ಯ ಗೋಂದಾವಲೇಕರ ಮಹಾರಾಜರು ನಾಮವು ರೂಪಕ್ಕಿಂತ ನಿಶ್ಚಿತವಾಗಿಯೂ ಶ್ರೇಷ್ಠವಾಗಿರುತ್ತದೆ. ಆದ್ದರಿಂದ ರೂಪದ ಧ್ಯಾನವು ಮನಸ್ಸಿನಲ್ಲಿ ಬರದೇ ಇದ್ದರೂ ನಾಮವನ್ನು ಬಿಡಬಾರದು. ಮುಂದೆ ರೂಪವು ತಾನಾಗಿಯೇ ಬರತೊಡಗುತ್ತದೆ. ರೂಪವು ಜಡ ಹಾಗೂ ದೃಶ್ಯವಾಗಿರುವುದರಿಂದ ಅದಕ್ಕೆ ಉತ್ಪತ್ತಿ, ಸ್ಥಿತಿ, ವಿನಾಶ, ಬೆಳೆಯುವುದು, ಕ್ಷೀಣವಾಗುವುದು, ವ್ಯಾಪಿಸುವುದು, ತನ್ನ ಸ್ಥಾನ ಬದಲಾಯಿಸುವುದು ಹಾಗೂ ಕಾಲಮಾನಕ್ಕನುಸಾರವಾಗಿ ಬದಲಾಗುವುದು ಮುಂತಾದ ಬಂಧನಗಳು ಬರುತ್ತವೆ. ಆದರೆ ನಾಮವು ದೃಶ್ಯದ ಆಚೆಗೆ ಹಾಗೂ ಸೂಕ್ಷ್ಮವಾಗಿರುವುದರಿಂದ ಅದಕ್ಕೆ ಉತ್ಪತ್ತಿ, ಸ್ಥಿತಿ, ವಿನಾಶ, ವೃದ್ಧಿ, ಕ್ಷಯ, ದೇಶಕಾಲ […]

ಭಾವಸಾಮರ್ಥ್ಯ

ಭಾವಸಾಮರ್ಥ್ಯ ಶ್ರೀ ಸಿದ್ಧೇಶ್ವರಸ್ವಾಮಿಗಳು, ವಿಜಾಪುರ  ಭಾವದ ಸಾಮರ್ಥ್ಯ ಅದ್ಭುತ! ಜೀವನದಲ್ಲಿ ಬರುವ ಅಸಂಖ್ಯ ಸುಖ-ದುಃಖಗಳನ್ನು ಅದು ಅನುಭವಿಸುತ್ತದೆ. ನಮ್ಮ ಬದುಕಿಗೆ ಒಂದು ಹೊಸ ರೂಪವನ್ನು, ಮೆರಗನ್ನು ತರುತ್ತದೆ. ಹಿರಿಯರಿಗಿರುವ ಅನುಭವ ಕಿರಿಯರಿಗಿಲ್ಲ? ಕಿರಿಯರಿಗೆ ಇರುವ ಅನುಭವ ಬಾಲಕರಿಗಿಲ್ಲ. ಏಕೆಂದರೆ ಹಿರಿಯರು ದಶಕಗಳವರೆಗೆ ಅನೇಕ ಕಷ್ಟ-ನಷ್ಟಗಳನ್ನು, ಸುಖ-ದುಃಖಗಳನ್ನು ಅನುಭವಿಸಿ ಪರಿಪಕ್ವರಾಗಿರುತ್ತಾರೆ. ಅಂತೆಯೇ ಹಿರಿಯರಿಗೆ ಅಷ್ಟು ಘನತೆ-ಗೌರವಗಳನ್ನು ನಾವು ಕೊಡುತ್ತೇವೆ. ಅದು, ಭಾವ-ಅನುಭಾವದ ಸಾಮರ್ಥ್ಯ. ಈ ಭಾವವು ಮಧುರವಾದರೆ ಸುಖಾನುಭವ. ಅದು ಕಹಿಯಾದರೆ ದುಃಖಾನುಭವ! ಈ ಬದುಕೊಂದು ಅನಂತ ಆಗಸದಲ್ಲಿ […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ