ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಸಂಪಾದಕೀಯ

ಸಂಪಾದಕೀಯ

ದಲಿತಪ್ರೀತಿ

ಹೈದರಾಬಾದ್ ವಿಶ್ವವಿದ್ಯಾಲಯದ ರೋಹಿತ ವೇಮುಲ ಎಂಬ ವಿದ್ಯಾರ್ಥಿಯು ತನಗೆ ಆದ ‘ಅನ್ಯಾಯ’ದಿಂದ ಖಿನ್ನನಾಗಿ ಆತ್ಮಹತ್ಯೆ ಮಾಡಿಕೊಂಡನೆಂಬುದು ತಥೋಕ್ತ ಬುದ್ಧಿಜೀವಿಗಳಿಗೆ ಇತ್ತೀಚೆಗೆ ಗ್ರಾಸವಾಗಿರುವ ಒಂದು ಸರಕು. ಆ ವಿದ್ಯಾರ್ಥಿ ಯಾವ ಸಮುದಾಯದವನೆಂಬುದು ಇನ್ನೂ ಸ್ಪಷ್ಟವಿಲ್ಲ; ಆದರೆ ಈ ಪ್ರಸಂಗವನ್ನು ಮುಂದಿರಿಸಿಕೊಂಡು ಇಡೀ ವ್ಯವಸ್ಥೆಯೂ ಸರ್ಕಾರವೂ ದಲಿತವಿರೋಧಿಯಾಗಿದೆ ಎಂದು ಹುಯಿಲೆಬ್ಬಿಸಲಾಗಿದೆ. ಒಂದು ಕೂಟಮಂಡನೆಯ ಕಳೇಬರದ ಮೇಲೆರಗಿ ಅದನ್ನು ಅವೆಷ್ಟು ರಣಹದ್ದುಗಳು ಭೋಜನವನ್ನಾಗಿ ಮಾಡಿಕೊಂಡಿವೆ ಎಂಬುದು ಸೋಜಿಗ ತರುತ್ತದೆ, ಅದು ಹಾಗಿರಲಿ. ಇಲ್ಲಿ ಎದುರಾಗುವ ಪ್ರಶ್ನೆ – ಈ ಅಸಹಿಷ್ಣುತಾಪ್ರತಿಪಾದಕ ಬಣಗಳ […]

ರಾಜ್ಯಸಭೆಯ ಸಾರ್ಥಕತೆ

ಭಾರತದ ಸಂಸತ್ತಿನ ಸಂರಚನೆಯ ಸ್ವರೂಪದ ಬಗೆಗೆ ಪುನರಾಲೋಚನೆ ಮಾಡಬೇಕಾದ ಪರಿಸ್ಥಿತಿ ಈಗ ಉಂಟಾಗಿದೆ. ರಾಜ್ಯಾಂಗರಚನೆಯ ಸಮಯದಲ್ಲಿ ರಾಜ್ಯಸಭೆಯ ಅಸ್ತಿತ್ವಕ್ಕೆ ಪ್ರೇರಣೆಯನ್ನು ಒದಗಿಸಿದ್ದುದು ಬಹುಮಟ್ಟಿಗೆ ಸಂಖ್ಯಾಧಾರಿತವಾಗಿ ರಚನೆಗೊಳ್ಳುವ ಲೋಕಸಭೆಯ ನಡವಳಿಯಲ್ಲಿ ತೋರಬಹುದಾದ ಅಸಮರ್ಪಕತೆಗಳಿಗೆ ಪರಿಹಾರ ನೀಡಬಲ್ಲ ಪ್ರತಿಭಾರವಾಗಿ ರಾಜ್ಯಸಭೆಯು ಕೆಲಸ ಮಾಡಬೇಕೆಂಬುದು. ಈ ಹಿನ್ನೆಲೆಯಲ್ಲಿಯೆ ವಿವಿಧ ಜೀವನಕ್ಷೇತ್ರಗಳ ಅನುಭವಿಗಳಿಗೆ ರಾಜ್ಯಸಭೆಯಲ್ಲಿ ಸದಸ್ಯತ್ವವನ್ನು ಕಲ್ಪಿಸುವ ಪದ್ಧತಿಯನ್ನು ನೆಲೆಗೊಳಿಸಲಾಗಿತ್ತು. ಕೆಲವು ವರ್ಷಗಳ ಕಾಲ ಈ ವ್ಯವಸ್ಥೆಯು ತಕ್ಕಮಟ್ಟಿಗೆ ಕೆಲಸ ಮಾಡಿದ್ದುದೂ ಹೌದು. ಆದರೆ ಈಚಿನ ದಶಕಗಳಲ್ಲಿ ರಾಜ್ಯಸಭೆಯನ್ನು ಬಲಿಷ್ಠ ಪಕ್ಷದ ಉಪಜೀವಿಗಳಾದವರಿಗೆ […]

ಯುವಭಾರತ ನಿರ್ಮಾಣ ವಿಪುಲ ಅವಕಾಶಗಳು, ಸಾಧ್ಯತೆಗಳು ಮತ್ತು ಸವಾಲುಗಳು

ಯುವಶಕ್ತಿ ಎಂದರೆ ಅದು ಸ್ವಚ್ಛಂದ ಪ್ರವಾಹ. ಯುವಶಕ್ತಿಯೆಂದರೆ ಅದು – ಪುಟಿವ ಚೈತನ್ಯ, ವೀರ್ಯವತ್ತತೆಯ ಮಹೋನ್ನತ ಸ್ಥಿತಿ. ಅದಮ್ಯ ಛಲದ ಮಹಾಬಲ. ಹುರುಪು-ಉತ್ಸಾಹದ ಮಹೋದಧಿ. ಮಹತ್ತ್ವಾಕಾಂಕ್ಷೆ ಹಾಗೂ ಸರ್ಜನಶೀಲತೆಯ ವೈಭವ. ದೃಢಮನೋಭೂಮಿಕೆ, ಭರವಸೆಯ ತಾಣ. ಇಂದಿನ ಭಾರತ ಒಂದು ಯುವಶಕ್ತಿಸಂಪನ್ನ ರಾಷ್ಟ್ರ. ನಮ್ಮ ದೇಶದ ಒಟ್ಟಾರೆ ಜನಸಂಖ್ಯೆಯ ಶೇಕಡ ೬೫ರಷ್ಟು ಜನರ ವಯೋಮಾನ ೩೫ ಅಥವಾ ಅದಕ್ಕಿಂತಲೂ ಕಡಮೆಯಿದೆ; ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ನಮ್ಮ ಜನಸಂಖ್ಯೆಯ ೫೫% ಅಂದರೆ ೫೫,೫೦,೦೦,೦೦೦ ಜನರ ವಯಸ್ಸು ೨೫ಕ್ಕಿಂತಲೂ ಕಡಮೆ. ಮಹತ್ತರವಾದ […]

ಕಣ್ಣೀರೇಕೆ, ಬಿಸಿಯುಸಿರೇಕೆ?

ಹಿಂದೆ ಔರಂಗಜೇಬನ ಹೆಸರನ್ನಿರಿಸಿದ್ದ ರಸ್ತೆಗೆ ದೆಹಲಿಯ ನಗರಸಭೆ ಈಗ ಡಾ|| ಎ.ಪಿ.ಜೆ. ಅಬ್ದುಲ್ ಕಲಾಮ್ ರಸ್ತೆ ಎಂದು ಪುನರ್ನಾಮಕರಣ ಮಾಡಿದುದಕ್ಕೆ ಆಕ್ಷೇಪಿಸಿ ಹುಯಿಲೆಬ್ಬಿಸಿರುವ ಪಡೆಯವರು ಎಂದೂ ಯಾವುದೇ ಸಂದರ್ಭದಲ್ಲಿಯೂ ಮುಸ್ಲಿಮರ ಭಾವನೆಗಳಿಗೆ ಕೂದಲಷ್ಟೂ ಧಕ್ಕೆಯಾಗಬಾರದೆಂಬ ಧೋರಣೆಗೆ ಬದ್ಧರಾದವರಾದುದರಿಂದ ಅವರ ಅಭಿಪ್ರಾಯಗಳು ಎಂದೋ ಕಿಮ್ಮತ್ತನ್ನು ಕಳೆದುಕೊಂಡಿವೆ;

ನಡೆಯದ ಕಲಾಪ: ನಷ್ಟ ಯಾರಿಗೆ?

ಆಳುವ ಪಕ್ಷಕ್ಕೂ ವಿರೋಧಪಕ್ಷಕ್ಕೂ ನಡುವಣ ಸಂಘರ್ಷ ಹೊಸದೇನಲ್ಲ. ಸಂಸತ್ತಿನ ಎರಡು ಬಣಗಳ ನಡುವೆ ಚಕಮಕಿ ನಡೆಯುವುದೂ ಹೊಸದಲ್ಲ. ಆದರೂ ಸಂಸತ್ತಿನ ಕಳೆದ ಇಡೀ ಮಳೆಗಾಲದ ಅಧಿವೇಶನದ ಸಮಯವಷ್ಟೂ ತ್ವಂಚಾಹಂಚಗಳಲ್ಲಿ ವ್ಯಯವಾದುದು ನಾಗರಿಕರಿಗೆ ಬೇಸರವನ್ನೂ ತಳಮಳವನ್ನೂ ತಂದಿದೆ. ನಮ್ಮದು ಜಗತ್ತಿನಲ್ಲಿಯೆ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವೆಂದು ಪದೇಪದೇ ಹೇಳಿಕೊಳ್ಳುತ್ತೇವೆ. ಆ ಪ್ರಥೆಗೆ ಧಕ್ಕೆಬರುವ ರೀತಿಯಲ್ಲಿ ಜನಪ್ರತಿನಿಧಿಗಳು ವರ್ತಿಸಿದ್ದಾರೆ. ದೇಶದ ಯಾವುದೇ ಸಮಸ್ಯೆ ಕುರಿತ ಚರ್ಚೆಗಾಗಿ ಇರುವ ಅತ್ಯುನ್ನತ ವೇದಿಕೆಯೆಂದರೆ ಸಂಸತ್ತು. ಆ ಅತ್ಯುನ್ನತ ವೇದಿಕೆಯ ಘನತೆಯನ್ನು ಬೀದಿ ನಲ್ಲಿ ಕಟ್ಟೆ […]

ಅಚ್ಚರಿ ಮೂಡಿಸಿರುವ ಮತ್ತೊಂದು ತೀರ್ಪು

ಸಾರ್ವಜನಿಕರಲ್ಲಿ ತೀವ್ರ ಆಕ್ರೋಶವನ್ನು ಮೂಡಿಸುವಂತಹ ಯಾವುದೊ ಭ್ರಷ್ಟಾಚಾರ ಪ್ರಕರಣ ಬೆಳಕಿಗೆ ಬರುವುದು, ಅದು ಅಲಕ್ಷಿಸಲಾಗದ ಮಟ್ಟದ್ದೆನಿಸಿದಾಗ ಅದರ ಬಗೆಗೆ ತನಿಖೆ ಉಪಕ್ರಮಗೊಳ್ಳುವುದು, ತನಿಖೆಯು ಮಂದಗತಿಯಲ್ಲಿ ಸಾಗುವುದು, ಎಷ್ಟೊ ಸಮಯದ ನಂತರ ಅದು ನ್ಯಾಯಾಲಯದ ವರೆಗೆ ತಲಪುವುದು, ಇನ್ನಷ್ಟು ವಿಳಂಬ, ತೀರಾ ವಿರಳ ಪ್ರಸಂಗಗಳಲ್ಲಷ್ಟೆ ಏನೊ ಒಂದು ತೀರ್ಪು ಹೊರಬೀಳುವುದು, ಅನಂತರವೂ ಆಪಾದಿತರು ಈಗಿನ ವ್ಯವಸ್ಥಾಶೈಥಿಲ್ಯದ ಲಾಭ ಪಡೆದು ದಂಡನೆಯನ್ನು ತಪ್ಪಿಸಿಕೊಳ್ಳುವುದು – ಈ ರೀತಿಯ ನ್ಯಾಯವಿಡಂಬನೆ ಈಗ ಮಾಮೂಲೆನಿಸಿದೆ. ಜಯಲಲಿತಾ, ಸಲ್ಮಾನ್‌ಖಾನ್ ಪ್ರಹಸನಗಳ ನೆನಪು ಜನರ ಮನಸ್ಸಿನಲ್ಲಿ […]

ಜನ್ಮಶತಾಬ್ದ ಸ್ಮರಣೆ ಪಂಡಿತ ದೀನದಯಾಳ ಉಪಾಧ್ಯಾಯ

ಜನ್ಮಶತಾಬ್ದ ಸ್ಮರಣೆ ಪಂಡಿತ ದೀನದಯಾಳ ಉಪಾಧ್ಯಾಯ

ಪ್ರಾಸ್ತಾವಿಕ ಈಗ್ಗೆ ಹತ್ತಿರಹತ್ತಿರ ಏಳು ದಶಕಗಳ ಹಿಂದೆ ರೂಪ ತಳೆದ ಭಾರತೀಯ ರಾಜ್ಯಾಂಗವ್ಯವಸ್ಥೆಯು ಈ ದೇಶದ ಮನೋರಚನೆಗೆ ಹೊಂದಿಕೆಯಾಗುವ ರೀತಿಯದಾಗಿಲ್ಲವೆಂಬ ಅನಿಸಿಕೆ ಗಾಂಧಿಯವರಿಂದ ಮೊದಲ್ಗೊಂಡು ಅನೇಕ ಧೀಮಂತರಿಂದ ವ್ಯಕ್ತವಾಗಿದೆ. ಪ್ರಚಲಿತವಾಗಿರುವುದಕ್ಕಿಂತ ಮೇಲಾದ ಪರ್ಯಾಯ ಏನಿರಬಹುದೆಂಬ ಬಗೆಗೆ ವಿನೋಬಾ ಭಾವೆ, ಜಯಪ್ರಕಾಶ ನಾರಾಯಣ್ ಮೊದಲಾದ ಹಲವರು ಚಿಂತನೆ ನಡೆಸಿದ್ದಾರೆ. ಈಗ ಅಮಲಿನಲ್ಲಿರುವ ವ್ಯವಸ್ಥೆಯು ಪಾಶ್ಚಾತ್ಯಪ್ರೇರಿತವೆಂಬಷ್ಟೆ ಕಾರಣದಿಂದ ವಿಮರ್ಶನೀಯವೆನಿಸಿಲ್ಲ. ಒಟ್ಟಾರೆಯಾಗಿ ಸಂಸದೀಯ ಪ್ರಜಾಪ್ರಭುತ್ವ ಎಂದು ಈಗಿನದು ನಾಮಾಂಕನಗೊಂಡಿದೆ. ಪ್ರಾದೇಶಿಕ-ಭಾಷಿಕಾದಿ ವಿಶೇಷತೆಗಳನ್ನು ಮಾನ್ಯಮಾಡುವ ರೀತಿಯ ಪ್ರಾಂತಗಳು, ರಾಷ್ಟ್ರಸ್ತರೀಯ ಆವಶ್ಯಕತೆಗಳ ದೃಷ್ಟಿಯಿಂದ ಬಲಿಷ್ಠ […]

ಕತ್ತಲ ದಾರಿ ದೂರ

ಕಳೆದ ಜೂನ್ ೧೫ಕ್ಕೆ ಇಂಗ್ಲೆಂಡಿನಲ್ಲಿ `ಮ್ಯಾಗ್ನಾಕಾರ್ಟಾ’ ಒಡಂಬಡಿಕೆ ಅಮಲಿಗೆ ಬಂದು ೮೦೦ ವರ್ಷ ಕಳೆಯಿತು. ಹಲವರ ನಿಯಂತೃತ್ವಕ್ಕೆ ಬದಲಾಗಿ ಸಮಸ್ತ ಪ್ರಜೆಗಳಲ್ಲಿ ರಾಜ್ಯಾಂಗಾಧಿಕಾರವು ಅಧಿಷ್ಠಿತವಾಗಿರಬೇಕು – ಎಂಬ ಇದೀಗ ಜಗತ್ತಿನೆಲ್ಲೆಡೆ ತಾತ್ತ್ವಿಕವಾಗಿಯಂತೂ ಸ್ವೀಕೃತವಾಗಿರುವ ಪ್ರಣಾಳಿಕೆಯು ಮೊತ್ತಮೊದಲಿಗೆ ಗ್ರಂಥಸ್ಥವಾದುದು `ಮ್ಯಾಗ್ನಾಕಾರ್ಟಾ’ದೊಡನೆ – ಎಂಬುದು ಐತಿಹಾಸಿಕ ಸಂಗತಿ.

ಇದು ಅಧೋಬಿಂದು

ಈಗ್ಗೆ ಕೆಲವೇ ದಿನಗಳ ಹಿಂದೆ ನಡೆದ ಒಂದು ಮಾರ್ಮಿಕ ಘಟನೆ. ಬೇಲ್‌ಪುರಿ-ಚಾಟ್ಸ್ ಅಂಗಡಿಗೆ ಬಂದಿದ್ದ ಗಿರಾಕಿಯೊಬ್ಬ ಬೇಲ್‌ಪುರಿಯನ್ನು ಬೇಗ ಮಾಡಿಕೊಡುವಂತೆ ಅಂಗಡಿಯವನನ್ನು ಅವಸರಿಸಿದ.

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ