ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಸಂಪಾದಕೀಯ

ಸಂಪಾದಕೀಯ

ವಿಷದ ನಂಟು

ಆಸುರೀಶಕ್ತಿಗಳ ಪ್ರಾಬಲ್ಯದಿಂದ ಧರೆಯನ್ನು ರಕ್ಷಿಸುವುದು ಎಷ್ಟು ದುರ್ಗಮವೆಂಬುದನ್ನು ಸಾಕ್ಷ್ಯಪಡಿಸಿರುವ ಒಂದು ಇತ್ತೀಚಿನ ಪ್ರಕರಣವೆಂದರೆ ಎಂಡೋಸಲ್ಫಾನ್ ವಿರುದ್ಧ ಜನರು ನಡೆಸಬೇಕಾಗಿಬಂದ ದೀರ್ಘಸಮರ. ಈ ಕೀಟನಾಶಕ ಎಷ್ಟು ಮಾರಕವೆಂಬುದು ಈಗ್ಗೆ ಇಪ್ಪತ್ತು ವರ್ಷ ಹಿಂದೆಯೇ ಮನವರಿಕೆಯಾಗಿತ್ತು. ಇದರಿಂದ ಜನ್ಯವಾದ ವಿಷವು ನೆಲಜಲಮೂಲಗಳನ್ನೆಲ್ಲ ವ್ಯಾಪಿಸಿ ಜನರ ಮೆದುಳಿನ ಜೋಗರಿಕೆ, ದೈಹಿಕ-ಮಾನಸಿಕ ಮಾಂದ್ಯ, ಅಪಸ್ಮಾರ, ಪಿತ್ತಕೋಶದ ಮತ್ತು ರಕ್ತದ ಕ್ಯಾನ್ಸರ್, ಆಸ್ತಮಾ, ಸಂತಾನಹೀನತೆ ಮೊದಲಾದ ಹಲವಾರು ವ್ಯಾಧಿಗಳಿಗೆ ಎಂಡೋಸಲ್ಫಾನ್ ಕಾರಣವಾಗುವುದೆಂಬುದು ಸಿದ್ಧಪಟ್ಟಿದೆ. ಈ ಹಿನ್ನೆಲೆಯಿದ್ದರೂ – ವಿಶೇಷವಾಗಿ ದಕ್ಷಿಣಕನ್ನಡ, ಕಾಸರಗೋಡು, ಕೇರಳ ಭಾಗಗಳಲ್ಲಿ […]

ಯಾರ ಗೆಲವು, ಯಾರ ಸೋಲು?

ಯಾರ ಗೆಲವು, ಯಾರ ಸೋಲು?

ವ್ಯಾವಹಾರಿಕ ಜಗತ್ತಿನಲ್ಲಿ ದಂಡನೆಯ ಭೀತಿ ಮಾತ್ರ ಸಮಾಜಸ್ವಾಸ್ಥ್ಯಕ್ಕೆ ಪೋಷಕವಾಗಬಲ್ಲದು ಎಂಬುದು ಕಡೆಗಣಿಸಲಾಗದ ತಥ್ಯ.     ತಮಿಳುನಾಡಿನ ಈಚಿನ ವಿದ್ಯಮಾನವನ್ನು ಒಂದು ಬಣದ ವಿಜಯವೆನ್ನುವುದಕ್ಕಿಂತ ಪ್ರಜಾಪ್ರಭುತ್ವಪದ್ಧತಿಯ ಪರಾಭವವೆಂದು ವರ್ಣಿಸುವುದೇ ಸೂಕ್ತವಾದೀತೆನಿಸುತ್ತದೆ. ಭ್ರಷ್ಟಾಚಾರಕ್ಕಾಗಿ ಕಾರಾಗೃಹ ಸೇರಿರುವ ಶಶಿಕಲಾ ತಮ್ಮ ಅನುಯಾಯಿ ಪಳನಿಸ್ವಾಮಿ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಪ್ರತಿಷ್ಠಾಪನೆ ಮಾಡಿದ್ದಾರೆ. ಮತದಾನದ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ನಡೆದ ದುರ್ವರ್ತನಸರಣಿಯು ಅಧಿಕಾರಾಕಾಂಕ್ಷೆ ಎಷ್ಟು ನೀಚ ಸ್ಥಿತಿಗೆ ತಲಪಬಹುದೆಂಬುದನ್ನು ಪುರಾವೆಗೊಳಿಸಿದೆ. ಸಭಾಧ್ಯಕ್ಷರ ಮೇಲೆಯೇ ದಾಳಿ ನಡೆಸಲೂ ಸದಸ್ಯರು ಹಿಂದೆಗೆಯಲಿಲ್ಲ. ಶಶಿಕಲಾ ಅವರಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆಯನ್ನು ಸರ್ವೋಚ್ಚ ನ್ಯಾಯಾಲಯ ದೃಢೀಕರಿಸಿದ್ದರೂ ಜನಾಭಿಪ್ರಾಯವನ್ನಾಗಲಿ ಔಚಿತ್ಯವನ್ನಾಗಲಿ ಲೆಕ್ಕಿಸದೆ ಶಶಿಕಲಾ ಬಣ ಎ.ಐ.ಎ.ಡಿ.ಎಂ.ಕೆ. ಪಕ್ಷವನ್ನು […]

ಸ್ವಾಗತಾರ್ಹ ಕಾಯದೆ

ಸ್ವಾಗತಾರ್ಹ ಕಾಯದೆ

ಗುಡ್ಸ್ ಅಂಡ್ ಸರ್ವಿಸಸ್ ಟ್ಯಾಕ್ಸ್ (ಜಿ.ಎಸ್.ಟಿ.) ಮುಸೂದೆಯು ಕಡೆಗೂ ಸಂಸತ್ತಿನ ಅಂಗೀಕಾರ ಪಡೆಯಲು ಸಾಧ್ಯವಾದದ್ದು ಒಂದು ಸಮಾಧಾನಕರ ಸಂಗತಿ. ಕೆಲವು ವಿವರಾಂಶಗಳ ಹೊರತು ಮಸೂದೆಯ ಆವಶ್ಯಕತೆಯ ಬಗೆಗೆ ವಿವಿಧ ಪಕ್ಷಗಳ ನಡುವೆ ಮೂಲಭೂತ ಭೇದಗಳೇನೂ ಇರದಿದ್ದರೂ 2006-2007ರಷ್ಟು ಹಿಂದಿನಿಂದ ರಾಜಕೀಯ ಲೆಕ್ಕಾಚಾರಗಳ ಕಾರಣದಿಂದ ಈ ಜನಹಿತಪರ ಮಸೂದೆ ನೆನೆಗುದಿಗೆ ಬಿದ್ದಿತ್ತು. ವಿರೋಧಪಕ್ಷಗಳ ಮಾತಿರಲಿ; ಆರೂಢಪಕ್ಷ ಸರ್ಕಾರಗಳಿರುವ ರಾಜ್ಯಗಳೇ ತಮ್ಮ ಆದಾಯ ಈ ವ್ಯವಸ್ಥೆಯಿಂದ ಕಡಮೆಯಾದೀತೆಂದು ಶಂಕಿಸಿ ಮಸೂದೆಗೆ ಅಸಮ್ಮತಿ ಸೂಚಿಸಿದ್ದವು; ಸರ್ಕಾರ ಸರಕುಸಾಗಾಣಿಕೆಗೆ ಸೂಚಿಸಿದ್ದ ಶೇ. 1 […]

ದಲಿತಪ್ರೀತಿ

ಹೈದರಾಬಾದ್ ವಿಶ್ವವಿದ್ಯಾಲಯದ ರೋಹಿತ ವೇಮುಲ ಎಂಬ ವಿದ್ಯಾರ್ಥಿಯು ತನಗೆ ಆದ ‘ಅನ್ಯಾಯ’ದಿಂದ ಖಿನ್ನನಾಗಿ ಆತ್ಮಹತ್ಯೆ ಮಾಡಿಕೊಂಡನೆಂಬುದು ತಥೋಕ್ತ ಬುದ್ಧಿಜೀವಿಗಳಿಗೆ ಇತ್ತೀಚೆಗೆ ಗ್ರಾಸವಾಗಿರುವ ಒಂದು ಸರಕು. ಆ ವಿದ್ಯಾರ್ಥಿ ಯಾವ ಸಮುದಾಯದವನೆಂಬುದು ಇನ್ನೂ ಸ್ಪಷ್ಟವಿಲ್ಲ; ಆದರೆ ಈ ಪ್ರಸಂಗವನ್ನು ಮುಂದಿರಿಸಿಕೊಂಡು ಇಡೀ ವ್ಯವಸ್ಥೆಯೂ ಸರ್ಕಾರವೂ ದಲಿತವಿರೋಧಿಯಾಗಿದೆ ಎಂದು ಹುಯಿಲೆಬ್ಬಿಸಲಾಗಿದೆ. ಒಂದು ಕೂಟಮಂಡನೆಯ ಕಳೇಬರದ ಮೇಲೆರಗಿ ಅದನ್ನು ಅವೆಷ್ಟು ರಣಹದ್ದುಗಳು ಭೋಜನವನ್ನಾಗಿ ಮಾಡಿಕೊಂಡಿವೆ ಎಂಬುದು ಸೋಜಿಗ ತರುತ್ತದೆ, ಅದು ಹಾಗಿರಲಿ. ಇಲ್ಲಿ ಎದುರಾಗುವ ಪ್ರಶ್ನೆ – ಈ ಅಸಹಿಷ್ಣುತಾಪ್ರತಿಪಾದಕ ಬಣಗಳ […]

ರಾಜ್ಯಸಭೆಯ ಸಾರ್ಥಕತೆ

ಭಾರತದ ಸಂಸತ್ತಿನ ಸಂರಚನೆಯ ಸ್ವರೂಪದ ಬಗೆಗೆ ಪುನರಾಲೋಚನೆ ಮಾಡಬೇಕಾದ ಪರಿಸ್ಥಿತಿ ಈಗ ಉಂಟಾಗಿದೆ. ರಾಜ್ಯಾಂಗರಚನೆಯ ಸಮಯದಲ್ಲಿ ರಾಜ್ಯಸಭೆಯ ಅಸ್ತಿತ್ವಕ್ಕೆ ಪ್ರೇರಣೆಯನ್ನು ಒದಗಿಸಿದ್ದುದು ಬಹುಮಟ್ಟಿಗೆ ಸಂಖ್ಯಾಧಾರಿತವಾಗಿ ರಚನೆಗೊಳ್ಳುವ ಲೋಕಸಭೆಯ ನಡವಳಿಯಲ್ಲಿ ತೋರಬಹುದಾದ ಅಸಮರ್ಪಕತೆಗಳಿಗೆ ಪರಿಹಾರ ನೀಡಬಲ್ಲ ಪ್ರತಿಭಾರವಾಗಿ ರಾಜ್ಯಸಭೆಯು ಕೆಲಸ ಮಾಡಬೇಕೆಂಬುದು. ಈ ಹಿನ್ನೆಲೆಯಲ್ಲಿಯೆ ವಿವಿಧ ಜೀವನಕ್ಷೇತ್ರಗಳ ಅನುಭವಿಗಳಿಗೆ ರಾಜ್ಯಸಭೆಯಲ್ಲಿ ಸದಸ್ಯತ್ವವನ್ನು ಕಲ್ಪಿಸುವ ಪದ್ಧತಿಯನ್ನು ನೆಲೆಗೊಳಿಸಲಾಗಿತ್ತು. ಕೆಲವು ವರ್ಷಗಳ ಕಾಲ ಈ ವ್ಯವಸ್ಥೆಯು ತಕ್ಕಮಟ್ಟಿಗೆ ಕೆಲಸ ಮಾಡಿದ್ದುದೂ ಹೌದು. ಆದರೆ ಈಚಿನ ದಶಕಗಳಲ್ಲಿ ರಾಜ್ಯಸಭೆಯನ್ನು ಬಲಿಷ್ಠ ಪಕ್ಷದ ಉಪಜೀವಿಗಳಾದವರಿಗೆ […]

ಯುವಭಾರತ ನಿರ್ಮಾಣ ವಿಪುಲ ಅವಕಾಶಗಳು, ಸಾಧ್ಯತೆಗಳು ಮತ್ತು ಸವಾಲುಗಳು

ಯುವಶಕ್ತಿ ಎಂದರೆ ಅದು ಸ್ವಚ್ಛಂದ ಪ್ರವಾಹ. ಯುವಶಕ್ತಿಯೆಂದರೆ ಅದು – ಪುಟಿವ ಚೈತನ್ಯ, ವೀರ್ಯವತ್ತತೆಯ ಮಹೋನ್ನತ ಸ್ಥಿತಿ. ಅದಮ್ಯ ಛಲದ ಮಹಾಬಲ. ಹುರುಪು-ಉತ್ಸಾಹದ ಮಹೋದಧಿ. ಮಹತ್ತ್ವಾಕಾಂಕ್ಷೆ ಹಾಗೂ ಸರ್ಜನಶೀಲತೆಯ ವೈಭವ. ದೃಢಮನೋಭೂಮಿಕೆ, ಭರವಸೆಯ ತಾಣ. ಇಂದಿನ ಭಾರತ ಒಂದು ಯುವಶಕ್ತಿಸಂಪನ್ನ ರಾಷ್ಟ್ರ. ನಮ್ಮ ದೇಶದ ಒಟ್ಟಾರೆ ಜನಸಂಖ್ಯೆಯ ಶೇಕಡ ೬೫ರಷ್ಟು ಜನರ ವಯೋಮಾನ ೩೫ ಅಥವಾ ಅದಕ್ಕಿಂತಲೂ ಕಡಮೆಯಿದೆ; ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ನಮ್ಮ ಜನಸಂಖ್ಯೆಯ ೫೫% ಅಂದರೆ ೫೫,೫೦,೦೦,೦೦೦ ಜನರ ವಯಸ್ಸು ೨೫ಕ್ಕಿಂತಲೂ ಕಡಮೆ. ಮಹತ್ತರವಾದ […]

ಕಣ್ಣೀರೇಕೆ, ಬಿಸಿಯುಸಿರೇಕೆ?

ಹಿಂದೆ ಔರಂಗಜೇಬನ ಹೆಸರನ್ನಿರಿಸಿದ್ದ ರಸ್ತೆಗೆ ದೆಹಲಿಯ ನಗರಸಭೆ ಈಗ ಡಾ|| ಎ.ಪಿ.ಜೆ. ಅಬ್ದುಲ್ ಕಲಾಮ್ ರಸ್ತೆ ಎಂದು ಪುನರ್ನಾಮಕರಣ ಮಾಡಿದುದಕ್ಕೆ ಆಕ್ಷೇಪಿಸಿ ಹುಯಿಲೆಬ್ಬಿಸಿರುವ ಪಡೆಯವರು ಎಂದೂ ಯಾವುದೇ ಸಂದರ್ಭದಲ್ಲಿಯೂ ಮುಸ್ಲಿಮರ ಭಾವನೆಗಳಿಗೆ ಕೂದಲಷ್ಟೂ ಧಕ್ಕೆಯಾಗಬಾರದೆಂಬ ಧೋರಣೆಗೆ ಬದ್ಧರಾದವರಾದುದರಿಂದ ಅವರ ಅಭಿಪ್ರಾಯಗಳು ಎಂದೋ ಕಿಮ್ಮತ್ತನ್ನು ಕಳೆದುಕೊಂಡಿವೆ;

ನಡೆಯದ ಕಲಾಪ: ನಷ್ಟ ಯಾರಿಗೆ?

ಆಳುವ ಪಕ್ಷಕ್ಕೂ ವಿರೋಧಪಕ್ಷಕ್ಕೂ ನಡುವಣ ಸಂಘರ್ಷ ಹೊಸದೇನಲ್ಲ. ಸಂಸತ್ತಿನ ಎರಡು ಬಣಗಳ ನಡುವೆ ಚಕಮಕಿ ನಡೆಯುವುದೂ ಹೊಸದಲ್ಲ. ಆದರೂ ಸಂಸತ್ತಿನ ಕಳೆದ ಇಡೀ ಮಳೆಗಾಲದ ಅಧಿವೇಶನದ ಸಮಯವಷ್ಟೂ ತ್ವಂಚಾಹಂಚಗಳಲ್ಲಿ ವ್ಯಯವಾದುದು ನಾಗರಿಕರಿಗೆ ಬೇಸರವನ್ನೂ ತಳಮಳವನ್ನೂ ತಂದಿದೆ. ನಮ್ಮದು ಜಗತ್ತಿನಲ್ಲಿಯೆ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವೆಂದು ಪದೇಪದೇ ಹೇಳಿಕೊಳ್ಳುತ್ತೇವೆ. ಆ ಪ್ರಥೆಗೆ ಧಕ್ಕೆಬರುವ ರೀತಿಯಲ್ಲಿ ಜನಪ್ರತಿನಿಧಿಗಳು ವರ್ತಿಸಿದ್ದಾರೆ. ದೇಶದ ಯಾವುದೇ ಸಮಸ್ಯೆ ಕುರಿತ ಚರ್ಚೆಗಾಗಿ ಇರುವ ಅತ್ಯುನ್ನತ ವೇದಿಕೆಯೆಂದರೆ ಸಂಸತ್ತು. ಆ ಅತ್ಯುನ್ನತ ವೇದಿಕೆಯ ಘನತೆಯನ್ನು ಬೀದಿ ನಲ್ಲಿ ಕಟ್ಟೆ […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : utthana1965@gmail.com

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ


vulkan vegas, vulkan casino, vulkan vegas casino, vulkan vegas login, vulkan vegas deutschland, vulkan vegas bonus code, vulkan vegas promo code, vulkan vegas österreich, vulkan vegas erfahrung, vulkan vegas bonus code 50 freispiele, 1win, 1 win, 1win az, 1win giriş, 1win aviator, 1 win az, 1win azerbaycan, 1win yukle, pin up, pinup, pin up casino, pin-up, pinup az, pin-up casino giriş, pin-up casino, pin-up kazino, pin up azerbaycan, pin up az, mostbet, mostbet uz, mostbet skachat, mostbet apk, mostbet uz kirish, mostbet online, mostbet casino, mostbet o'ynash, mostbet uz online, most bet, mostbet, mostbet az, mostbet giriş, mostbet yukle, mostbet indir, mostbet aviator, mostbet casino, mostbet azerbaycan, mostbet yükle, mostbet qeydiyyat