ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಪ್ರಚಲಿತ

ಪ್ರಚಲಿತ

ಚೀಣಾ ವಿಸ್ತರಣವಾದದ ಬೇರೊಂದು ಮುಖ

ಚೀಣಾ ವಿಸ್ತರಣವಾದದ ಬೇರೊಂದು ಮುಖ

ಚೀಣಾದಿಂದ ಟಿಬೆಟ್ ದುರಾಕ್ರಮಣ, ಭಾರತದ ಈಶಾನ್ಯ ಭಾಗ ಪ್ರದೇಶದ ಒತ್ತುವರಿ, ಈಚಿನ ವರ್ಷಗಳಲ್ಲಿ ಜಗತ್ತಿನ ಹಲವಾರೆಡೆಗಳಲ್ಲಿ ಬಗೆಬಗೆಯಾಗಿ ನೇರವಾಗಿಯೂ ಛದ್ಮಮಾರ್ಗಗಳಲ್ಲಿಯೂ ಚೀಣಾ ತನ್ನ ಮಾರುಕಟ್ಟೆಗಳನ್ನು ನಿರ್ಮಿಸಿಕೊಳ್ಳುತ್ತಿರುವುದು – ಇವೆಲ್ಲ ಸರ್ವವಿದಿತವೇ ಆಗಿವೆ. ಚೀಣಾದ ವಿಸ್ತರಣ ಪ್ರಯತ್ನಗಳ ಇನ್ನು ಹಲವು ಮುಖಗಳು ಇತ್ತೀಚೆಗೆ ಬೆಳಕಿಗೆ ಬಂದಿವೆ. ಈಗ್ಗೆ ಒಂದು ವರ್ಷ ಹಿಂದೆ (ಫೆಬ್ರುವರಿ 2020) ಅಮೆರಿಕದ ‘ವಾಲ್ ಸ್ಟ್ರೀಟ್ ಜರ್ನಲ್’ನಡೆಸಿದ ಒಂದು ತನಿಖೆಯಿಂದ ಹೊರಪಟ್ಟ ಸಂಗತಿ – ಅಮೆರಿಕದ ಎರಡು ಜಗತ್ಪ್ರಸಿದ್ಧ ವಿಶ್ವವಿದ್ಯಾಲಯಗಳಿಗೆ ಚೀಣಾದಿಂದಲೂ ಸೌದಿ ಅರೇಬಿಯ, ಖಟಾರ್, […]

ಅಗ್ರರಾಷ್ಟ್ರದ ನೂತನಾಧ್ಯಕ್ಷ ಮತ್ತು ಭಾರತ

ಜಗತ್ತಿನಾದ್ಯಂತ ಹಿಂದೆಂದಿಗಿಂತ ಹೆಚ್ಚು ಕುತೂಹಲವನ್ನು ಮೂಡಿಸಿದ್ದ ಅಮೆರಿಕದ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಇದೀಗ (ನವೆಂಬರ್ 7) ಹೊರಬಿದ್ದು ಡೆಮೊಕ್ರ್ಯಾಟಿಕ್ ಪಕ್ಷದ 77 ವರ್ಷ ವಯಸ್ಸಿನ ಜೋ ಬೈಡೆನ್ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್‍ರನ್ನು ಹಿಂದಿಕ್ಕಿ ಅಮೆರಿಕದ 46ನೇ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. ಪರಿಣಾಮವಾಗಿ ಭಾರತಮೂಲ ಮನೆತನಕ್ಕೆ ಸೇರಿದ ಕಮಲಾ ಹ್ಯಾರಿಸ್ ಉಪಾಧ್ಯಕ್ಷರಾಗಲಿರುವುದು ಭಾರತೀಯರಿಗೆ ಹೆಮ್ಮೆಯ ಸಂಗತಿಯಾಗಿದೆ. ಅಮೆರಿಕದ ಇತಿಹಾಸದಲ್ಲೇ ಮಹಿಳೆಯೊಬ್ಬರು ಉಪಾಧ್ಯಕ್ಷರಾಗುತ್ತಿರುವುದು ಮೊದಲ ಬಾರಿಗೆ ಎಂಬ ವೈಶಿಷ್ಟ್ಯವೂ ಇದೆ. ಅಧಿಕಾರಾವಧಿಯುದ್ದಕ್ಕೂ ವಿವಾದಗಳನ್ನು ಸೃಷ್ಟಿಸುತ್ತಿದ್ದ ಡೊನಾಲ್ಡ್ ಟ್ರಂಪ್‍ರ ತಮಗೆ ಜನಸಾಮಾನ್ಯರ […]

ನ ದೈನ್ಯಂ, ನ ಪಲಾಯನಂ

ನ ದೈನ್ಯಂ, ನ ಪಲಾಯನಂ

ಒಂದಕ್ಕೆ ಒಂದನ್ನು ಸೇರಿಸಿದರೆ ಎರಡು ಆಗುವುದಕ್ಕೆ ಬದಲು ಹನ್ನೊಂದು ಆಗುವ ಸಂದರ್ಭಗಳು ಇರುತ್ತವೆ. ಕಳೆದ ಜುಲೈ ಮೂರರಂದು ನಸುಕಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನಿಮು ಪರ್ವತಾಗ್ರ ಪ್ರಾಂತಕ್ಕೆ ನೀಡಿದ ಭೇಟಿ ಅಂತಹ ಒಂದು ಸಂದರ್ಭ. ವಾಸ್ತವವಾಗಿ ಪೂರ್ವನಿಶ್ಚಿತ ಯೋಜನೆಯಂತೆ ರಕ್ಷಣಾ ಸಚಿವ ರಾಜನಾಥಸಿಂಗ್ ಅಲ್ಲಿಗೆ ಭೇಟಿ ನೀಡುವುದಿತ್ತು. ಆದರೆ ಕೊನೆಯ ಘಳಿಗೆಯಲ್ಲಿ ಪ್ರಧಾನಿಗಳೇ ಗಡಿಭಾಗಕ್ಕೆ ಧಾವಿಸಿದುದು ಅತ್ಯಂತ ಪ್ರೇರಣಾದಾಯಕವೆನಿಸಿತು. ಸೈನಿಕರನ್ನು ಉದ್ದೇಶಿಸಿ ಮಾತನಾಡುವಾಗ ಪ್ರಧಾನಿಗಳ ಚಹರೆಯಲ್ಲಿ ಎದ್ದುಕಾಣುತ್ತಿದ್ದ ಆತ್ಮವಿಶ್ವಾಸ ಮತ್ತು ದಾಢ್ರ್ಯವಂತೂ ಅತುಲನೀಯವಾಗಿದ್ದವು. ನಮ್ಮ ಸಮರ್ಪಿತ ಸೈನಿಕರನ್ನು […]

ಬೀದಿ ರಂಪಾಟ ಮತ್ತು ಸಾಂವಿಧಾನಿಕತೆ

ಬೀದಿ ರಂಪಾಟ ಮತ್ತು ಸಾಂವಿಧಾನಿಕತೆ

ಕಳೆದೆರಡು ತಿಂಗಳಲ್ಲಿ ಕೊರೋನಾದಷ್ಟೆ ವ್ಯಾಪಕವಾಗಿ ಸುದ್ದಿ ಮಾಡಿರುವ ಘಟನೆಯೆಂದರೆ ರಾಷ್ಟ್ರ ರಾಜಧಾನಿಯಲ್ಲಿನ ಶಹೀನ್‍ಬಾಗ್ ರಸ್ತೆತಡೆ. ಅದು ಅಷ್ಟು ದೀರ್ಘಕಾಲ ನಡೆಯಿತೆಂಬುದೇ ಅದು ಯಾರಿಂದಲೋ ಪೋಷಣೆ ಪಡೆಯುತ್ತಿದ್ದಿರಬೇಕೆಂಬ ಊಹೆಗೆ ಅವಕಾಶ ಮಾಡಿಕೊಟ್ಟೀತು; ಅದು ಹಾಗಿರಲಿ. ಈ ತಥಾಕಥಿತ ‘ಪ್ರತಿಭಟನೆ’ ನಡೆದ ರೀತಿಯು ಗೌರವ ತರುವಂತಹದಲ್ಲ. ರಸ್ತೆತಡೆಗೆ ಅದರ ಪ್ರವರ್ತಕರು ನೀಡಿದ ಕಾರಣ ತಾವು ನಾಗರಿಕತ್ವ ತಿದ್ದುಪಡಿ ಕಾಯ್ದೆಗೆ (ಸಿಎಎ) ಪ್ರತಿರೋಧ ತೋರುತ್ತಿದ್ದೇವೆಂಬುದು. ಆದರೆ ಪ್ರತಿಭಟನಕಾರರಲ್ಲಿ ಕಾಯ್ದೆಯ ಯಾವುದೇ ಊಹಿತ ಅಡ್ಡಪರಿಣಾಮಗಳಿಂದ ಬಾಧಿತರಾಗಿದ್ದೇವೆನ್ನಬಲ್ಲವರು ಕಾಣಲಿಲ್ಲವೆಂಬುದೊಂದು ವೈಚಿತ್ರ್ಯ. ಹೀಗಾಗಿ ಇಡೀ ಘಟನೆಯನ್ನು […]

‘ವಿರೋಧಕ್ಕಾಗಿ ವಿರೋಧ’

ಎಸ್.ಆರ್.ಆರ್. ಸಾತ್ತ್ವಿಕ ವರ್ತನೆ ಸೌಮ್ಯವಾಗಿರುವುದರಿಂದ ಅದರಲ್ಲಿ ಆಕರ್ಷಣೆ ಕಡಮೆ; ರಾಜಸಿಕ ಸಂಚಲನಗಳಲ್ಲಿ ಹೆಚ್ಚಿನ ಉರುಬು, ಉನ್ಮಾದ, ಉರವಣೆಗಳು ಇರುತ್ತವಾದ್ದರಿಂದ ಇವುಗಳಲ್ಲಿ ಸೆಳೆತ ಹೆಚ್ಚು. ಈಗಲಾದರೋ ರಾಷ್ಟ್ರದ ಅತ್ಯುನ್ನತ ನಿರ್ಣಯಸ್ಥಾನಗಳಾದ ಸಂಸತ್ತು ಸರ್ವೋಚ್ಚ ನ್ಯಾಯಾಲಯಗಳ ತೀರ್ಪುಗಳ ವಿರುದ್ಧವೂ ವಿಕ್ಷಿಪ್ತ ವ್ಯಕ್ತಿಗಳಂತೆ ರಾಜ್ಯಸರ್ಕಾರಗಳೂ ಸೆಡವನ್ನು ತೋರುವ ಪ್ರವೃತ್ತಿ ಬೆಳೆದಿದೆ. ಇದನ್ನು ಒಂದು ಅಧೋಬಿಂದು ಎನ್ನಬೇಕಾಗಿದೆ. ವ್ಯವಸ್ಥೆಯಿಂದ ನಾವು ಒತ್ತಾಸೆಯನ್ನು ಅಪೇಕ್ಷಿಸಿದರೆ ವ್ಯವಸ್ಥೆಯನ್ನು ನಾವು ಗೌರವಿಸಲೇಬೇಕೆಂಬುದು ಅನಿವಾರ್ಯ. ಅಸಮ್ಮತಿಯ ಅಭಿವ್ಯಕ್ತಿಗೆ ಶಿಷ್ಟಮಾರ್ಗಗಳು ಲಭ್ಯವಿವೆ. ಬೀದಿಕಲಹಗಾರಿಕೆಯು ಸಂಸದೀಯ ಪ್ರಜಾಪ್ರಭುತ್ವ ಮರ್ಯಾದೆಗೆ ಹೊಂದುವ ವಿಧಾನವಲ್ಲ. […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ