ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ದೀಪ್ತಿ

ದೀಪ್ತಿ

ದೀಪ್ತಿ

ಮನೋ ಧಾವತಿ ಸರ್ವತ್ರ ಮದೋನ್ಮತ್ತ ಗಜೇಂದ್ರವತ್ | ಜ್ಞಾನಾಂಕುಶಸಮಾ ಬುದ್ಧಿಃ ತಸ್ಯ ನಿಶ್ಚಲತೇ ಮನಃ || – ಸುಭಾಷಿತ ರತ್ನಭಾಂಡಾಗಾರ “ಮನಸ್ಸಿನ ಸ್ವಭಾವ ಉನ್ಮಾದಕ್ಕೊಳಗಾದ ಆನೆಯಂತೆ ಎತ್ತೆತ್ತಲೋ ಓಡುತ್ತಿರುವುದು. ಬುದ್ಧಿಯಾದರೋ ಜ್ಞಾನದ ಅಂಕುಶವಿದ್ದಂತೆ; ಅದರಿಂದ ಮನಸ್ಸು ಸ್ತಿಮಿತಕ್ಕೆ ಬರುತ್ತದೆ.” ಮನಸ್ಸಿನ ಚಂಚಲತೆಯನ್ನು ಅರಿತಿದ್ದರೂ ಅನೇಕ ಸಮಯಗಳಲ್ಲಿ ಅದರ ಸೂಚನೆಗಳನ್ನು ಪರೀಕ್ಷಣೆಗೊಳಪಡಿಸದೆ ಯಾಂತ್ರಿಕವಾಗಿ ಅನುಸರಿಸುವುದು ಒಂದು ಮಾನವದೌರ್ಬಲ್ಯ. ಅದರಿಂದ ಎಷ್ಟೋ ಸಂದರ್ಭಗಳಲ್ಲಿ ಹಾನಿಯಾಗುವ ಸಂಭವವಿರುತ್ತದೆ. ಅದು ಜೀವದ ಆಂತರಿಕ ಪಯಣಕ್ಕೂ ಅಪಕರ್ಷಕವಾದೀತು. ಮನೋನಿಯಂತ್ರಣದ ಅಭ್ಯಾಸವು ಅಧ್ಯಾತ್ಮಸಾಧನೆಯ ಒಂದು ಮುಖ್ಯ […]

ದೀಪ್ತಿ

ಕಿಂ ಯಜ್ಞೈರ್ವಿಪುಲಾಯಾಸೈಃ ಕಿಂ ವ್ರತೈಃ ಕಾಯಶೋಷಣೈಃ | ಅವ್ಯಾಜಸೇವಾ ಸುಭಗಾ ಭಕ್ತಿರ್ಯೇಷಾಂ ಮಹೇಶ್ವರೇ || – ಸುಭಾಷಿತ ಸುಧಾನಿಧಿ “ತುಂಬಾ ಆಯಾಸವನ್ನುಂಟುಮಾಡುವ ಯಜ್ಞಾಚರಣೆಗಳಿಂದಾಗಲಿ ದೇಹದಂಡನೆಗೆ ಕಾರಣವಾಗುವ ಕಠಿಣವ್ರತಗಳಿಂದಾಗಲಿ ಆಗುವುದೇನಿದೆ? ಆ ವಿಧಾನಗಳಿಂದ ದೊರೆಯಬಹುದಾದ ಆನಂದವು ಯಾರಿಗಾದರೂ ನಿರ್ನಿಮಿತ್ತವಾಗಿ ಸೇವೆ ಮಾಡುವ ಸುಲಭ ಮಾರ್ಗದಿಂದಲೇ ದೊರೆತೀತು. ಈಶ್ವರನಲ್ಲಿ ಭಕ್ತಿ ತಳೆಯುವುದೆಂದರೂ ಅದೇ.” ಭಗವದ್ಭಕ್ತಿ, ಯಾರಾದರೊಬ್ಬರಲ್ಲಿ ಪ್ರೇಮ, ಜೀವಸ್ನೇಹಾಭ್ಯಾಸ – ಇವುಗಳ ವಿಶೇಷತೆಯೆಂದರೆ ಮಾರ್ಗವೂ ಅದೇ, ಗಮ್ಯವೂ ಅದೇ. ಪರಮಪ್ರೇಮವು ತಾನೇ ಫಲಸ್ವರೂಪದ್ದೂ ಆಗಿದೆ – ಎಂದಿದ್ದಾರೆ ನಾರದರು. ಫಲಾಪೇಕ್ಷೆಯಿಂದ […]

ದೀಪ್ತಿ

ಮುಹೂರ್ತಮಪಿ ಜೀವೇತ ನರಃ ಶುಕ್ಲೇನ ಕರ್ಮಣಾ | ನ ಕಲ್ಪಮಪಿ ಕೃಷ್ಣೇನ ಲೋಕದ್ವಯವಿರೋಧಿನಾ || – ಸುಭಾಷಿತರತ್ನ–ಭಾಂಡಾಗಾರ “ಒಂದೇ ಘಳಿಗೆ ಬದುಕಿದ್ದರೂ ಅಷ್ಟು ಸಮಯವನ್ನು ಪರಿಶುದ್ಧ ಕರ್ಮಾಚರಣೆಯಲ್ಲಿ ತೊಡಗಿಸಬೇಕು. ಇಹಕ್ಕೆ, ಪರಕ್ಕೆ – ಯಾವುದಕ್ಕೂ ಪ್ರಯೋಜನಕರವಲ್ಲದ ವ್ಯವಹಾರಗಳಲ್ಲಿಯೆ ತೊಡಗಿರುತ್ತ ಒಂದು ಕಲ್ಪಕಾಲ ಬದುಕಿದ್ದರೂ ಅದು ನಿರರ್ಥಕವೇ.” ಈಶ್ವರನು ನಮಗೆ ಜಗಜ್ಜೀವನವನ್ನು ಅನುಗ್ರಹಿಸಿರುವುದು ಸಾರ್ಥಕವಾದ ಕಾರ್ಯಗಳನ್ನು ಮಾಡಲೆಂದು. ಧನ್ಯತೆಯುಂಟಾಗುವುದು ವಿಹಿತ ಕರ್ಮಾಚರಣೆಯಿಂದ ಮಾತ್ರವೇ ಹೊರತು ಯಾದೃಚ್ಛಿಕ ಕಾಲಯಾಪನೆಯಿಂದಲೊ ದುಷ್ಕರ್ಮಾಚರಣೆಯಿಂದಲೊ ಅಲ್ಲ. ಬದುಕಿಗೂ ದೇಹಕ್ಕೂ ಪಾವಿತ್ರ್ಯವನ್ನು ತಂದುಕೊಡಬಲ್ಲದ್ದು ಪುಣ್ಯಪ್ರದವೂ ಲೋಕೋಪಕಾರಕವೂ […]

ದೀಪ್ತಿ

ಅರ್ಥಾ ವೈ ವಾಚಿ ನಿಯತಾಃ ವಾಙ್ಮೂಲಾಃ ವಾಚಿ ಮಿಶ್ರಿತಾಃ | ಯೋ ವೈ ತಾಂ ಸ್ತೇಯಯೇದ್ವಾಚಂ ಸ ಸರ್ವಸ್ತೇಯಕೃನ್ನರಃ || – ನಾರದಸ್ಮೃತಿ “ಮಾತಿನಲ್ಲಿ ಅರ್ಥ ಅಡಗಿರುತ್ತದೆ. ಅರ್ಥಕ್ಕೆ ಮೂಲವು ಮಾತೇ. ಹೀಗೆ ಅರ್ಥವು ಮಾತಿನೊಡನೆ ಬೆರೆತಿರುತ್ತದೆ. ಯಾರು ಮಾತನ್ನು ಅಗ್ಗ ಮಾಡುತ್ತಾನೋ ಅವನು ಎಲ್ಲ ರೀತಿಯ ಕಳ್ಳತನ ಮಾಡಿದಂತೆ ಆಗುತ್ತದೆ.” ಮಾತು ಎಂಬುದು ಕೇವಲ ನಾಲಗೆಯ ವ್ಯವಹಾರವಲ್ಲ. ಒಂದೊಂದು ಮಾತಿನ ಹಿಂದೆಯೂ ವಿಶಾಲ ಅರ್ಥ ಹುದುಗಿರುತ್ತದೆ. ಹೀಗೆ ಮಾತನ್ನು ಅಪವ್ಯಯ ಮಾಡುವುದು ಕಳ್ಳತನಕ್ಕೆ ಸಮಾನವೆನಿಸುತ್ತದೆ. ಈ […]

ದೀಪ್ತಿ

ವಿಷಯಾನನುಕೂಲಯಿತುಂ ವಿಷಯಿಣಿ ಹೃದಯೇ ವಿಧೀಯತಾಂ ಯತ್ನಃ| ದೃಶಿದೇಯಮೌಷಧಂ ಕೋ ದೃಶ್ಯೇ ದತ್ವಾ ಸಖೀ ಭವತಿ|| – ಅಪ್ಪಯ್ಯ ದೀಕ್ಷಿತರ ‘ವೈರಾಗ್ಯಶತಕ’ “ರಸ-ಗಂಧಾದಿ ಹೊರಗಿನ ವಿಷಯಗಳನ್ನು ತಮಗೆ ಅನುಕೂಲಗಳನ್ನಾಗಿಸಿಕೊಳ್ಳಬೇಕಾದರೆ ಆ ವಿಷಯಗಳನ್ನು ಗ್ರಹಿಸುವ ಹೃದಯವನ್ನು ಪ್ರಕ್ಷಾಳನ ಮಾಡಿ ಪರಿಶುದ್ಧಗೊಳಿಸಲು ಯತ್ನಿಸಬೇಕು. ಚಿಕಿತ್ಸೆಗಾಗಿ ಕಣ್ಣಿಗೆ ಹಾಕಿಕೊಳ್ಳಬೇಕಾದ ಔಷಧವನ್ನು ಕಣ್ಣೆದುರಿಗೆ ಕಾಣುವ ಹೊರಗಿನ ವಸ್ತುವಿಗೆ ಹಾಕಿದರೆ ಅಂತಹವನು ಹೇಗೆ ಸುಖಿಯಾದಾನು?” ಸೌಂದರ್ಯವಿರುವುದು ನೋಡುವವನ ಕಣ್ಣಿನಲ್ಲಿ – ಎಂಬ ಗಾದೆಮಾತಿದೆ. ಇದರ ತಾತ್ಪರ್ಯ ಹೊರಗಿನ ಕುರೂಪವನ್ನು ವೈಭವೀಕರಿಸಬೇಕೆಂದಲ್ಲ. ಆರೋಗ್ಯಕರ ದೃಷ್ಟಿ ಇಲ್ಲದವನ ಪಾಲಿಗೆ […]

ದೀಪ್ತಿ

ಸತ್ಯಂ ದಿಶತ್ಯರ್ಥಿತಮರ್ಥಿತೋ ನೃಣಾಂ ನೈವಾರ್ಥದೋ ಯತ್ಪುನರರ್ಥಿತಾ ಯತಃ | ಸ್ವಯಂ ವಿಧತ್ತೇ ಭಜತಾಮನಿಚ್ಛತಾ – ಮಿಚ್ಛಾಪಿಧಾನಂ ನಿಜಪಾದಪಲ್ಲವಮ್ ||   – ಭಾಗವತ, ಸ್ಕಂಧ 5, ಅಧ್ಯಾಯ 19, ಶ್ಲೋಕ 27 “ತನ್ನನ್ನು ಬೇಡಿದವರಿಗೆ ಭಗವಂತನು ಅವರು ಕೋರಿದ ಇಷ್ಟಾರ್ಥಗಳನ್ನು ಕೊಡುವುದೇನೊ ದಿಟವೇ. ಆದರೆ ಅಪೇಕ್ಷೆಗಳನ್ನು ಈಡೇರಿಸಿಕೊಂಡವರು ಇನ್ನಷ್ಟು ಕೋರಿಕೆಗಳನ್ನು ಬೆಳೆಸಿಕೊಳ್ಳುತ್ತಾರಲ್ಲ! ಈ ಕಾರಣದಿಂದ ಭಗವಂತನು ಭಕ್ತರು ಕೋರಿದುದನ್ನೆಲ್ಲ ಮನಃಪೂರ್ವಕ ಕೊಡಲು ಮುಂದಾಗುವುದಿಲ್ಲ. ಹೆಚ್ಚಿನ ಕೋರಿಕೆಗಳಲ್ಲಿ ಪರಮಾರ್ಥವೇನೂ ಇರುವುದೂ ಇಲ್ಲ. ಯಾವ ಭಕ್ತರು ಸ್ವಾರ್ಥರಹಿತರೂ ನಿಷ್ಕಾಮರೂ ಆಗಿ […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ