ಮನೋ ಧಾವತಿ ಸರ್ವತ್ರ ಮದೋನ್ಮತ್ತ ಗಜೇಂದ್ರವತ್ | ಜ್ಞಾನಾಂಕುಶಸಮಾ ಬುದ್ಧಿಃ ತಸ್ಯ ನಿಶ್ಚಲತೇ ಮನಃ || – ಸುಭಾಷಿತ ರತ್ನಭಾಂಡಾಗಾರ “ಮನಸ್ಸಿನ ಸ್ವಭಾವ ಉನ್ಮಾದಕ್ಕೊಳಗಾದ ಆನೆಯಂತೆ ಎತ್ತೆತ್ತಲೋ ಓಡುತ್ತಿರುವುದು. ಬುದ್ಧಿಯಾದರೋ ಜ್ಞಾನದ ಅಂಕುಶವಿದ್ದಂತೆ; ಅದರಿಂದ ಮನಸ್ಸು ಸ್ತಿಮಿತಕ್ಕೆ ಬರುತ್ತದೆ.” ಮನಸ್ಸಿನ ಚಂಚಲತೆಯನ್ನು ಅರಿತಿದ್ದರೂ ಅನೇಕ ಸಮಯಗಳಲ್ಲಿ ಅದರ ಸೂಚನೆಗಳನ್ನು ಪರೀಕ್ಷಣೆಗೊಳಪಡಿಸದೆ ಯಾಂತ್ರಿಕವಾಗಿ ಅನುಸರಿಸುವುದು ಒಂದು ಮಾನವದೌರ್ಬಲ್ಯ. ಅದರಿಂದ ಎಷ್ಟೋ ಸಂದರ್ಭಗಳಲ್ಲಿ ಹಾನಿಯಾಗುವ ಸಂಭವವಿರುತ್ತದೆ. ಅದು ಜೀವದ ಆಂತರಿಕ ಪಯಣಕ್ಕೂ ಅಪಕರ್ಷಕವಾದೀತು. ಮನೋನಿಯಂತ್ರಣದ ಅಭ್ಯಾಸವು ಅಧ್ಯಾತ್ಮಸಾಧನೆಯ ಒಂದು ಮುಖ್ಯ […]
ದೀಪ್ತಿ
Month : April-2020 Episode : Author :