ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
61ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ದೀಪ್ತಿ

ದೀಪ್ತಿ

ದೀಪ್ತಿ

ದರಿದ್ರಾನ್ ಭರ ಕೌನ್ತೇಯ ನ ಸಮೃದ್ಧಾನ್ ಕದಾಚನ | ವ್ಯಾಧಿತಸ್ಯೌಷಧಂ ಪಥ್ಯಂ ನೀರೋಗಸ್ಯ ಕಿಮೌಷಧೈಃ || – ಮಹಾಭಾರತ “ಮಹಾರಾಜ! ಪ್ರಜಾರಕ್ಷಕರ ಗಮನ ಕೇಂದ್ರೀಕೃತವಾಗಿರಬೇಕಾದದ್ದು ಆರ್ತ-ದೀನರ ಮೇಲೆಯೇ ಹೊರತು ಸಂಪನ್ನರ ಮೇಲಲ್ಲ. ಔ?ಧ-ಪಥ್ಯಾದಿಗಳಿಂದ ಪ್ರಯೋಜನವಾಗುವುದು ಕಾಯಿಲೆಯಲ್ಲಿರುವವರಿಗೇ ಹೊರತು ಆರೋಗ್ಯವಂತರಿಗಲ್ಲ.” ಎಷ್ಟು ನಾಗರಿಕ ವ್ಯವಸ್ಥೆಗಳು ಬೆಳೆದರೂ ಜೀವನಾನುಕೂಲವಂಚಿತರ ದೊಡ್ಡ ವರ್ಗ ಇದ್ದೇ ಇರುತ್ತದೆ. ಬಹುಶಃ ಇದು ಪ್ರಕೃತಿನಿಯಮ. ಅಂತಹ ಆರ್ತರನ್ನು ಗುರುತಿಸುವುದು ಕಷ್ಟವಲ್ಲ. ಹೆಚ್ಚುಮಂದಿ ಉದಾಸೀನರಾಗಿರುತ್ತಾರ?. ಸಂವೇದನಶೀಲರಾದವರು ಕಷ್ಟದಲ್ಲಿರುವವರನ್ನು ಕಂಡೊಡನೆ ದ್ರವಿಸಿಬಿಡುತ್ತಾರೆ, ಅವರ ನೆರವಿಗೆ ಧಾವಿಸುತ್ತಾರೆ, ತಮ್ಮಿಂದಾದ ಸೇವೆ […]

ದೀಪ್ತಿ

ಪ್ರಜ್ಞಯಾ ಮಾನಸಂ ದುಃಖಂ ಹನ್ಯಾಚ್ಛಾರೀರಮೌಷಧೈಃ | ಏತದ್ವಿಜ್ಞಾನಸಾಮರ್ಥ್ಯಂ ನ ಬಾಲೈಃ ಸಮತಾಮಿಯಾತ್ || – ಮಹಾಭಾರತ “ಪ್ರಜ್ಞಾಶಕ್ತಿಯಿಂದ ಮಾನಸಿಕ ದುಃಖವನ್ನೂ ಚಿಕಿತ್ಸೆಗಳಿಂದ ದೈಹಿಕ ವ್ಯಾಧಿಗಳನ್ನೂ ನಿವಾರಿಸಿಕೊಳ್ಳಬೇಕು. ಇದನ್ನು ಸಾಧ್ಯವಾಗಿಸುವ ಜ್ಞಾನದ ಶಕ್ತಿಯು ಅಪೂರ್ವವಾದುದು. ಅದನ್ನು ಮರೆತು ತನಗೆ ಕಷ್ಟ ಬಂದಿದೆಯೆಂದು ಶೋಕಿಸುವುದು ಬಾಲಿಶನಡೆಯಾಗುತ್ತದೆ.” ಜಗತ್ತಿನಲ್ಲಿ ಜೀವಿಸಿರುವವರೆಗೆ ಮನಸ್ಸಿಗೂ ದೇಹಕ್ಕೂ ಕ್ಲೇಶಗಳು ತಪ್ಪಿದ್ದಲ್ಲ. ಕ್ಲೇಶಗಳು ಬಾರದಿರಲಿ ಎಂಬ ಆಕಾಂಕ್ಷೆ ತ್ರಿಗುಣಚಾಲಿತ ಲೋಕದಲ್ಲಿ ಈಡೇರುವಂಥದಲ್ಲ. ಕ್ಲೇಶಗಳನ್ನು ಎಷ್ಟು ವಿವೇಕದಿಂದ ನಿರ್ವಾಹ ಮಾಡುತ್ತೇವೆಯೋ ಅಷ್ಟುಮಟ್ಟಿಗೆ ಸಮಾಧಾನವನ್ನು ಪಡೆಯಬಹುದು. ಕ್ಲೇಶಗಳಿಂದ ಖಿನ್ನರಾಗದೆ ಕರ್ತವ್ಯಮಗ್ನತೆಯನ್ನು […]

ದೀಪ್ತಿ

ಜಿತೇಂದ್ರಿಯತ್ವಂ ವಿನಯಸ್ಯ ಕಾರಣಂ ಗುಣಪ್ರಕರ್ಷೋ ವಿನಯಾದವಾಪ್ಯತೇ| ಗುಣಾಧಿಕೇ ಪುಂಸಿ ಜನೋನುರಜ್ಯತೇ ಜನಾನುರಾಗಪ್ರಭವಾ ಹಿ ಸಂಪದಃ|| – ಭಾರವಿ : ಕಿರಾತಾರ್ಜುನೀಯ “ಸ್ವನಿಯಂತ್ರಣವು ಅತ್ಯಾವಶ್ಯಕವೆಂಬ ಕಾರಣದಿಂದಲೇ ವಿನಯವು ಪ್ರಶಂಸೆಯನ್ನು ಪಡೆದುಕೊಂಡಿರುವುದು. ಎಲ್ಲ ಸದ್ಗುಣಗಳ ಮೂಲವು ವಿನಯಶೀಲತೆ. ಈ ಸದ್ಗುಣಗಳಿರುವ ವ್ಯಕ್ತಿಯನ್ನೇ ಇತರರು ಆದರಿಸುವುದು. ಇತರರ ಆದರಣೆಯಿಂದಲೇ ಎಲ್ಲ ಇಷ್ಟಸಿದ್ಧಿಗಳೂ ಸಾಧ್ಯವಾಗುವುದು.” ಒಳ್ಳೆಯ ವ್ಯಕ್ತಿಗುಣಗಳಲ್ಲಿ ಎರಡು ವರ್ಗಗಳು ಇವೆ. ಒಂದು ವರ್ಗದವು ವ್ಯವಹಾರಧರ್ಮಕಾರಣದಿಂದ ಅನಿವಾರ್ಯವೂ ಅನುಲ್ಲಂಘ್ಯವೂ ಆದವು. ಇನ್ನೊಂದು ವರ್ಗದವು ಅಪೇಕ್ಷಣೀಯ ಸ್ತರದವೇ ಆದರೂ ಪರಿಣಾಮದೃಷ್ಟಿಯಿಂದ ಮಹತ್ತ್ವದವು. ವಿನಯ ಅಥವಾ […]

ದೀಪ್ತಿ

ಯಸ್ಯ ಕೃತ್ಯಂ ನ ವಿಘ್ನಂತಿ ಶೀತಮುಷ್ಣಂ ಭಯಂ ರತಿಃ | ಸಮೃದ್ಧಿರಸಮೃದ್ಧಿರ್ವಾ ಸ ವೈ ಪಂಡಿತ ಉಚ್ಯತೇ || – ಮಹಾಭಾರತ, ಉದ್ಯೋಗಪರ್ವ, ೩೩-೨೦ ಯಾರಿಗೆ ತಾನು ಉದ್ದೇಶಿಸಿದ ಕೆಲಸಕ್ಕೆ ಚಳಿ, ಸೆಕೆ, ಭಯ, ಪ್ರೀತಿ, ಸಂಪತ್ತು, ಬಡತನ ಇವು ಯಾವುವೂ ಅಡ್ಡಿಯಾಗವೋ ಅವನನ್ನು ಪಂಡಿತನೆನ್ನುತ್ತಾರೆ. ಬದುಕಿನಲ್ಲಿ ಯಶಸ್ಸನ್ನು ಗಳಿಸಬೇಕಾದರೆ ತೀವ್ರವಾದ ಪ್ರಯತ್ನಶೀಲತೆ ಅತ್ಯಂತ ಅವಶ್ಯ. ಅತ್ಯಂತ ನಿಷ್ಠೆಯಿಂದ ಕಾರ್ಯಪ್ರವೃತ್ತರಾಗದೆ ನಮಗೆ ಏನನ್ನೂ ಸಾಧಿಸಲಾಗುವುದಿಲ್ಲ. ಕಷ್ಟಪಟ್ಟು ದುಡಿಯುವುದರ ನಿಜವಾದ ಬೆಲೆಯ ಅರಿವಾಗುವುದು ನಾವು ಕಷ್ಟಪಟ್ಟು ದುಡಿದಾಗಲೇ. ಯಾರ […]

ದೀಪ್ತಿ

ಲೋಭೇನ ಬುದ್ಧಿಶ್ಚಲತಿ ಲೋಭೋ ಜನಯತೇ ತೃಷಾಮ್| ತೃಷಾರ್ತೋ ದುಃಖಮಾಪ್ನೋತಿ ಪರತ್ರೇಹ ಚ ಮಾನವಃ|| – ಹಿತೋಪದೇಶ, ಮಿತ್ರಲಾಭ “ಲೋಭಕ್ಕೆ ಒಳಗಾಗುವುದರಿಂದ ಬುದ್ಧಿಯು ವಿಕಲಗೊಳ್ಳುತ್ತದೆ. ಲೋಭವು ಅತ್ಯಾಶೆಯನ್ನು ಉಂಟುಮಾಡುತ್ತದೆ. ಹೀಗೆ ತೃಷೆಯಿಂದ ಗ್ರಸ್ತನಾದವನು ಈ ಲೋಕದಲ್ಲಿಯೂ ಲೋಕಾಂತರದಲ್ಲಿಯೂ ದುಃಖವನ್ನನುಭವಿಸುತ್ತಾನೆ.” ತನ್ನ ಅರ್ಹತೆಯೇನು, ಮಿತಿಯೇನು ಎಂಬ ಪರಿವೆಯಿಲ್ಲದೆ ಅಹಂಕಾರದಿಂದ ಚೋದಿತರಾದವರು ತಮಗೆಟಕದವುಗಳಿಗಾಗಿ ಹಾತೊರೆಯುತ್ತಾರೆ. ಹಾಗೆ ಜನಿಸುವ ಅತ್ಯಾಶೆಗೆ ಮಿತಿಯೇ ಇರದು. ಈ ಜಾಡಿಗೆ ಬಿದ್ದವರು ಇಹದಲ್ಲಿ, ಪರದಲ್ಲಿ – ಎರಡೆಡೆಯೂ ದುಃಖಕ್ಕೊಳಗಾಗುತ್ತಾರೆ. ಅಹಂತಾಜನಿತ ಲೋಭ-ಮೋಹಗಳಿಂದ ಯಾರು ಆಕೃಷ್ಟರಾಗುವುದಿಲ್ಲವೋ ಅವರು ವಿವೇಕಿಗಳೆನಿಸುತ್ತಾರೆ. […]

ದೀಪ್ತಿ

ಮನಸಾಪಿ ಯದಸ್ಪೃಷ್ಟಂ ದೂರಾದಪಿ ಯದುಜ್ಝಿತಮ್ | ತದಪ್ಯುಪಾಯೈರ್ವಿವಿಧೈರ್ವಿಧಿರಿಚ್ಛನ್ ಪ್ರಯಚ್ಛತಿ || – ಸುಭಾಷಿತಸುಧಾನಿಧಿ “ಯಾವುದನ್ನು ಮನಸ್ಸಿನಿಂದ ಕೂಡ ಮುಟ್ಟಲಾಗಲಾರದೋ, ಯಾವುದು ನಿರಾಶೆಯಿಂದ ತಿರಸ್ಕರಿಸಲ್ಪಟ್ಟಿದೆಯೋ, ಅಂಥದನ್ನೂ ಸಹ ಬಗೆಬಗೆಯ ಮಾರ್ಗಗಳಿಂದ ವಿಧಿಯು ನಿಶ್ಚಯಿಸಿ ನೀಡುತ್ತದೆ.” ತನಗೆ ಯಾವುದು ಸಲ್ಲಬೇಕು, ತಾನು ಹೇಗೆ ಸಾಗಬೇಕು ಎಂದು ಮನುಷ್ಯನಿಗಿರುವ ನಿರ್ಣಯಾಧಿಕಾರವು ಪರಿಮಿತವಾದದ್ದು. ಅಂತಿಮವಾಗಿ ಎಲ್ಲವೂ ನಡೆಯುವುದು ದೈವವು ವಿಧಿಸಿರುವಂತೆಯೇ – ಎಂಬ ನಮ್ರಭಾವವನ್ನು ರೂಢಿಸಿಕೊಂಡು ದೈವಕ್ಕೆ ತಮ್ಮನ್ನು ಒಪ್ಪಿಸಿಕೊಳ್ಳುವುದು ಆಂತರಂಗಿಕ ಸ್ವಾಸ್ಥ್ಯಕ್ಕೆ ಅನುಕೂಲಕರವಾಗುತ್ತದೆ. ಹತ್ತೊಂಬತ್ತನೇ ಶತಮಾನದಲ್ಲಿ ಫ್ರೆಂಚ್ ಭಾ?ಯಲ್ಲಿ ರಮ್ಯಕಾವ್ಯಪ್ರಸ್ಥಾನದ ಆದ್ಯನೆಂದು […]

ದೀಪ್ತಿ

ದೀಪ್ತಿ

ನ ವೈರಮುದ್ದೀಪಯತಿ ಪ್ರಶಾಂತಂ ನ ದರ್ಪಮಾರೋಹತಿ ನಾಸ್ತಮೇತಿ| ನ ದುರ್ಗತೋsಸ್ಮೀತಿ ಕರೋತ್ಯಕಾರ್ಯಂ ತಮಾರ್ಯಶೀಲಂ ಪರಮಾಹುರಾರ್ಯಾಃ|| (ಅಜ್ಞಾತಮೂಲ) ಯಾರು ಬೇರೆಯವರಲ್ಲಿ ದ್ವೇಷಭಾವನೆಯನ್ನು ಉತ್ತೇಜಿಸುವುದಿಲ್ಲವೋ, ಯಾರು ದುರಭಿಮಾನ ಮೆರೆಯುವುದಿಲ್ಲವೋ, ಯಾರು ತಾನು ಏಕಾಕಿಯೂ ಅಸಹಾಯನೂ ಆಗಿದ್ದೇನೆಂಬ ಕಾರಣದಿಂದ ಅಕಾರ್ಯವನ್ನು ಮಾಡುವುದಿಲ್ಲವೋ, ಅಂಥವನನ್ನು ಆರ್ಯಶೀಲನೆಂದು ಜ್ಞಾನಿಗಳು ಪರಿಗಣಿಸುತ್ತಾರೆ.

ದೀಪ್ತಿ

ದೀಪ್ತಿ

ಅಹೋ ಏಷಾಂ ವರಂ ಜನ್ಮ ಸರ್ವಪ್ರಾಣ್ಯುಪಜೀವನಮ್| ಸುಜನಸ್ಯೇವ ಯೇಷಾಂ ವೈ ವಿಮುಖಾ ಯಾನ್ತಿ ನಾರ್ಥಿನಃ|| – ಭಾಗವತ ಸಾರ್ಥಕವಾದ ಜನ್ಮವೆಂದರೆ ಈ ಮರಗಳದು. ಇವು ಎಲ್ಲ ಪ್ರಾಣಿಗಳಿಗೂ ಜೀವನವನ್ನು ಕಲ್ಪಿಸುತ್ತವೆ. ಸಜ್ಜನರಲ್ಲಿಗೆ ಬಂದ ಯಾಚಕರು ಹೇಗೆ ಎಂದೂ ಬರಿಗೈಯಾಗಿ ಹಿಂದಿರುಗುವುದಿಲ್ಲವೋ ಹಾಗೆ ಈ ಮರಗಳಲ್ಲಿ ಆಸರೆ ಕೋರಿ ಬಂದವರಾರೂ ನಿರಾಶೆಗೊಳ್ಳುವುದಿಲ್ಲ.

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : utthana1965@gmail.com

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ


vulkan vegas, vulkan casino, vulkan vegas casino, vulkan vegas login, vulkan vegas deutschland, vulkan vegas bonus code, vulkan vegas promo code, vulkan vegas österreich, vulkan vegas erfahrung, vulkan vegas bonus code 50 freispiele, 1win, 1 win, 1win az, 1win giriş, 1win aviator, 1 win az, 1win azerbaycan, 1win yukle, pin up, pinup, pin up casino, pin-up, pinup az, pin-up casino giriş, pin-up casino, pin-up kazino, pin up azerbaycan, pin up az, mostbet, mostbet uz, mostbet skachat, mostbet apk, mostbet uz kirish, mostbet online, mostbet casino, mostbet o'ynash, mostbet uz online, most bet, mostbet, mostbet az, mostbet giriş, mostbet yukle, mostbet indir, mostbet aviator, mostbet casino, mostbet azerbaycan, mostbet yükle, mostbet qeydiyyat