ಹಲವಾರು ವೈಚಿತ್ರ್ಯಗಳ ನಡುವೆ ಭಾರತದ ರಾಷ್ಟ್ರಜೀವನ ಮುಂದುವರಿದಿದೆ. ಎಲ್ಲಕ್ಕಿಂತ ದೊಡ್ಡ ವಿಪರ್ಯಾಸವೆಂದರೆ ಅತ್ಯಂತ ಉದಾರ ಪರಂಪರೆಯ ವಾರಸಿಕೆ ತನ್ನದೆಂದು ಯಥಾರ್ಥವಾಗಿಯೇ ಹೇಳಿಕೊಳ್ಳುವ ಈ ದೇಶದಲ್ಲಿ ಎಲ್ಲವನ್ನೂ ವಿವಾದವಸ್ತುವಾಗಿಸುವ ನೈಷೇಧಿಕ ಪ್ರವೃತ್ತಿ ಬೆಳೆದಿರುವುದು. ಅಧಿಕ ಜನವರ್ಗ ಯಾವುದೋ ತಥ್ಯಗಳನ್ನು ಸಹಜವಾಗಿ ಸ್ವೀಕರಿಸಿದ್ದರೂ ಎಲ್ಲದರ ಬಗೆಗೂ ತಗಾದೆಯನ್ನೆಬ್ಬಿಸದಿದ್ದರೆ ಒಂದು ವರ್ಗಕ್ಕೆ ಸಮಾಧಾನವಿಲ್ಲ. ಈ ಪ್ರವೃತ್ತಿಗೆ ಧಾರಾಳವಾಗಿ ನೀರು-ಗೊಬ್ಬರಗಳನ್ನೆರೆಯುತ್ತಿರುವವು ಮಾಧ್ಯಮಗಳು; ಏಕೆಂದರೆ ಅವುಗಳ ಪಾಲಿಗೆ ’ಕಲಹವೇ ಕಲ್ಯಾಣ’. ಇದರಿಂದಾಗಿ ಒಂದುಕಡೆ ಅಪಾರ ಶಕ್ತಿಹ್ರಾಸವಾಗುತ್ತಿದ್ದರೆ ಇನ್ನೊಂದುಕಡೆ ನಿಜವಾಗಿ ಅವಧಾನವನ್ನು ಬೇಡುವ ಮುಖ್ಯಸಂಗತಿಗಳೆಲ್ಲ ಹಿನ್ನೆಲೆಗೆ […]
ಆರೋಗ್ಯಕರ ಪರಂಪರೆಗಳು ಬೆಳೆಯಲಿ
Month : December-2017 Episode : Author :