ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಸಂಪಾದಕೀಯ

ಸಂಪಾದಕೀಯ

ಆರೋಗ್ಯಕರ ಪರಂಪರೆಗಳು ಬೆಳೆಯಲಿ

ಹಲವಾರು ವೈಚಿತ್ರ್ಯಗಳ ನಡುವೆ ಭಾರತದ ರಾಷ್ಟ್ರಜೀವನ ಮುಂದುವರಿದಿದೆ. ಎಲ್ಲಕ್ಕಿಂತ ದೊಡ್ಡ ವಿಪರ್ಯಾಸವೆಂದರೆ ಅತ್ಯಂತ ಉದಾರ ಪರಂಪರೆಯ ವಾರಸಿಕೆ ತನ್ನದೆಂದು ಯಥಾರ್ಥವಾಗಿಯೇ ಹೇಳಿಕೊಳ್ಳುವ ಈ ದೇಶದಲ್ಲಿ ಎಲ್ಲವನ್ನೂ ವಿವಾದವಸ್ತುವಾಗಿಸುವ ನೈಷೇಧಿಕ ಪ್ರವೃತ್ತಿ ಬೆಳೆದಿರುವುದು. ಅಧಿಕ ಜನವರ್ಗ ಯಾವುದೋ ತಥ್ಯಗಳನ್ನು ಸಹಜವಾಗಿ ಸ್ವೀಕರಿಸಿದ್ದರೂ ಎಲ್ಲದರ ಬಗೆಗೂ ತಗಾದೆಯನ್ನೆಬ್ಬಿಸದಿದ್ದರೆ ಒಂದು ವರ್ಗಕ್ಕೆ ಸಮಾಧಾನವಿಲ್ಲ. ಈ ಪ್ರವೃತ್ತಿಗೆ ಧಾರಾಳವಾಗಿ ನೀರು-ಗೊಬ್ಬರಗಳನ್ನೆರೆಯುತ್ತಿರುವವು ಮಾಧ್ಯಮಗಳು; ಏಕೆಂದರೆ ಅವುಗಳ ಪಾಲಿಗೆ ’ಕಲಹವೇ ಕಲ್ಯಾಣ’. ಇದರಿಂದಾಗಿ ಒಂದುಕಡೆ ಅಪಾರ ಶಕ್ತಿಹ್ರಾಸವಾಗುತ್ತಿದ್ದರೆ ಇನ್ನೊಂದುಕಡೆ ನಿಜವಾಗಿ ಅವಧಾನವನ್ನು ಬೇಡುವ ಮುಖ್ಯಸಂಗತಿಗಳೆಲ್ಲ ಹಿನ್ನೆಲೆಗೆ […]

ವಿಷದ ನಂಟು

ಆಸುರೀಶಕ್ತಿಗಳ ಪ್ರಾಬಲ್ಯದಿಂದ ಧರೆಯನ್ನು ರಕ್ಷಿಸುವುದು ಎಷ್ಟು ದುರ್ಗಮವೆಂಬುದನ್ನು ಸಾಕ್ಷ್ಯಪಡಿಸಿರುವ ಒಂದು ಇತ್ತೀಚಿನ ಪ್ರಕರಣವೆಂದರೆ ಎಂಡೋಸಲ್ಫಾನ್ ವಿರುದ್ಧ ಜನರು ನಡೆಸಬೇಕಾಗಿಬಂದ ದೀರ್ಘಸಮರ. ಈ ಕೀಟನಾಶಕ ಎಷ್ಟು ಮಾರಕವೆಂಬುದು ಈಗ್ಗೆ ಇಪ್ಪತ್ತು ವರ್ಷ ಹಿಂದೆಯೇ ಮನವರಿಕೆಯಾಗಿತ್ತು. ಇದರಿಂದ ಜನ್ಯವಾದ ವಿಷವು ನೆಲಜಲಮೂಲಗಳನ್ನೆಲ್ಲ ವ್ಯಾಪಿಸಿ ಜನರ ಮೆದುಳಿನ ಜೋಗರಿಕೆ, ದೈಹಿಕ-ಮಾನಸಿಕ ಮಾಂದ್ಯ, ಅಪಸ್ಮಾರ, ಪಿತ್ತಕೋಶದ ಮತ್ತು ರಕ್ತದ ಕ್ಯಾನ್ಸರ್, ಆಸ್ತಮಾ, ಸಂತಾನಹೀನತೆ ಮೊದಲಾದ ಹಲವಾರು ವ್ಯಾಧಿಗಳಿಗೆ ಎಂಡೋಸಲ್ಫಾನ್ ಕಾರಣವಾಗುವುದೆಂಬುದು ಸಿದ್ಧಪಟ್ಟಿದೆ. ಈ ಹಿನ್ನೆಲೆಯಿದ್ದರೂ – ವಿಶೇಷವಾಗಿ ದಕ್ಷಿಣಕನ್ನಡ, ಕಾಸರಗೋಡು, ಕೇರಳ ಭಾಗಗಳಲ್ಲಿ […]

ಯಾರ ಗೆಲವು, ಯಾರ ಸೋಲು?

ಯಾರ ಗೆಲವು, ಯಾರ ಸೋಲು?

ವ್ಯಾವಹಾರಿಕ ಜಗತ್ತಿನಲ್ಲಿ ದಂಡನೆಯ ಭೀತಿ ಮಾತ್ರ ಸಮಾಜಸ್ವಾಸ್ಥ್ಯಕ್ಕೆ ಪೋಷಕವಾಗಬಲ್ಲದು ಎಂಬುದು ಕಡೆಗಣಿಸಲಾಗದ ತಥ್ಯ.     ತಮಿಳುನಾಡಿನ ಈಚಿನ ವಿದ್ಯಮಾನವನ್ನು ಒಂದು ಬಣದ ವಿಜಯವೆನ್ನುವುದಕ್ಕಿಂತ ಪ್ರಜಾಪ್ರಭುತ್ವಪದ್ಧತಿಯ ಪರಾಭವವೆಂದು ವರ್ಣಿಸುವುದೇ ಸೂಕ್ತವಾದೀತೆನಿಸುತ್ತದೆ. ಭ್ರಷ್ಟಾಚಾರಕ್ಕಾಗಿ ಕಾರಾಗೃಹ ಸೇರಿರುವ ಶಶಿಕಲಾ ತಮ್ಮ ಅನುಯಾಯಿ ಪಳನಿಸ್ವಾಮಿ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಪ್ರತಿಷ್ಠಾಪನೆ ಮಾಡಿದ್ದಾರೆ. ಮತದಾನದ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ನಡೆದ ದುರ್ವರ್ತನಸರಣಿಯು ಅಧಿಕಾರಾಕಾಂಕ್ಷೆ ಎಷ್ಟು ನೀಚ ಸ್ಥಿತಿಗೆ ತಲಪಬಹುದೆಂಬುದನ್ನು ಪುರಾವೆಗೊಳಿಸಿದೆ. ಸಭಾಧ್ಯಕ್ಷರ ಮೇಲೆಯೇ ದಾಳಿ ನಡೆಸಲೂ ಸದಸ್ಯರು ಹಿಂದೆಗೆಯಲಿಲ್ಲ. ಶಶಿಕಲಾ ಅವರಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆಯನ್ನು ಸರ್ವೋಚ್ಚ ನ್ಯಾಯಾಲಯ ದೃಢೀಕರಿಸಿದ್ದರೂ ಜನಾಭಿಪ್ರಾಯವನ್ನಾಗಲಿ ಔಚಿತ್ಯವನ್ನಾಗಲಿ ಲೆಕ್ಕಿಸದೆ ಶಶಿಕಲಾ ಬಣ ಎ.ಐ.ಎ.ಡಿ.ಎಂ.ಕೆ. ಪಕ್ಷವನ್ನು […]

ಸ್ವಾಗತಾರ್ಹ ಕಾಯದೆ

ಸ್ವಾಗತಾರ್ಹ ಕಾಯದೆ

ಗುಡ್ಸ್ ಅಂಡ್ ಸರ್ವಿಸಸ್ ಟ್ಯಾಕ್ಸ್ (ಜಿ.ಎಸ್.ಟಿ.) ಮುಸೂದೆಯು ಕಡೆಗೂ ಸಂಸತ್ತಿನ ಅಂಗೀಕಾರ ಪಡೆಯಲು ಸಾಧ್ಯವಾದದ್ದು ಒಂದು ಸಮಾಧಾನಕರ ಸಂಗತಿ. ಕೆಲವು ವಿವರಾಂಶಗಳ ಹೊರತು ಮಸೂದೆಯ ಆವಶ್ಯಕತೆಯ ಬಗೆಗೆ ವಿವಿಧ ಪಕ್ಷಗಳ ನಡುವೆ ಮೂಲಭೂತ ಭೇದಗಳೇನೂ ಇರದಿದ್ದರೂ 2006-2007ರಷ್ಟು ಹಿಂದಿನಿಂದ ರಾಜಕೀಯ ಲೆಕ್ಕಾಚಾರಗಳ ಕಾರಣದಿಂದ ಈ ಜನಹಿತಪರ ಮಸೂದೆ ನೆನೆಗುದಿಗೆ ಬಿದ್ದಿತ್ತು. ವಿರೋಧಪಕ್ಷಗಳ ಮಾತಿರಲಿ; ಆರೂಢಪಕ್ಷ ಸರ್ಕಾರಗಳಿರುವ ರಾಜ್ಯಗಳೇ ತಮ್ಮ ಆದಾಯ ಈ ವ್ಯವಸ್ಥೆಯಿಂದ ಕಡಮೆಯಾದೀತೆಂದು ಶಂಕಿಸಿ ಮಸೂದೆಗೆ ಅಸಮ್ಮತಿ ಸೂಚಿಸಿದ್ದವು; ಸರ್ಕಾರ ಸರಕುಸಾಗಾಣಿಕೆಗೆ ಸೂಚಿಸಿದ್ದ ಶೇ. 1 […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ