ಎಷ್ಟೇ ಸದುದ್ದೇಶದ ಯೋಜನೆಗಳಾಗಿರಲಿ ಅವನ್ನು ಕಾರ್ಯಾನ್ವಯಗೊಳಿಸುವವರಲ್ಲಿ ಉತ್ಸಾಹವೂ ದಾರ್ಢ್ಯವೂ ಇರದಿದ್ದಲ್ಲಿ ಆ ಯೋಜನೆಗಳ ಪರಿಣಾಮ ಪರಿಮಿತವೇ ಆಗಿರುತ್ತದೆಂಬುದು ದೀರ್ಘಕಾಲದ ಅನುಭವ. ಶಿಕ್ಷಣಕ್ಷೇತ್ರವೂ ಇದಕ್ಕೆ ಹೊರತಲ್ಲ. ಇತ್ತೀಚೆಗೂ ೨೦೧೭-೧೮ರ ವರ್ಷಕ್ಕಾಗಿ ಹೊಸ ಶಿಕ್ಷಣನೀತಿಯೊಂದು ಕೇಂದ್ರಸರ್ಕಾರದಿಂದ ಘೋಷಿತವಾಗಿತ್ತು – ಎಂಬುದು ಸರ್ಕಾರಕ್ಕೆ ಸಮಸ್ಯೆಯ ಗಂಭೀರತೆಯ ಅರಿವಿದೆಯೆಂಬುದನ್ನು ಸೂಚಿಸುತ್ತದೆ. ಹಿಂದೆ ಅಮಲುಗೊಳಿಸಿದ್ದ ಶಿಕ್ಷಣ ಹಕ್ಕು ಕಾಯ್ದೆ ಸುಯೋಜಿತವಾಗಿದ್ದರೂ ಕಾರ್ಯಾನ್ವಯದಲ್ಲಿ ವಿಕೃತಿಗಳು ತಲೆದೋರಿ ಈ ಕಾಯ್ದೆ ಇಲ್ಲದಿದ್ದರೆಯೆ ಮೇಲೆನಿಸುವ? ಆಯಾಸ ತಂದಿದೆ. ಈ ನ್ಯೂನತೆಗಳಿಗೆ ಸರ್ಕಾರೀ ಯಂತ್ರದಷ್ಟು ಖಾಸಗಿ ವಲಯವೂ ಹೊಣೆಗಾರಿಕೆ ಹೊರಬೇಕಾಗಿದೆಯೆಂಬುದು ಸ್ಪ?ವೇ ಆಗಿದೆ. ಉನ್ನತಶಿಕ್ಷಣದ ಗುಣವರ್ಧನೆ, ದೇಶಾದ್ಯಂತ ೨೦ ಆದರ್ಶರೀತಿಯ ಮಾದರಿ ಶಿಕ್ಷಣಸಂಕೀರ್ಣಗಳ ಸ್ಥಾಪನೆ ಮೊದಲಾದ […]
ಶಿಕ್ಷಣದ ಮಟ್ಟ ಉನ್ಮುಖವಾಗಲಿ
Month : August-2018 Episode : Author : ಎಸ್.ಆರ್. ರಾಮಸ್ವಾಮಿ